ಶಿವಮೊಗ್ಗದ ವಿನೋಬ ನಗರದ ಸಮೀಪವಿರುವ ಶಾಲೆಯಲ್ಲಿ ಸರಸ್ವತಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 2024 25 ನೇ ಸಾಲಿನ ಶೈಕ್ಷಣಿಕ ವರ್ಷದ ಅಂತಿಮ ಹಂತದಲ್ಲಿದ್ದು ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ತಾಯಿ ಸರಸ್ವತಿ ಮಾತೆಯ ಕೃಪಾಶೀರ್ವಾದ ಪ್ರತಿಯೊಬ್ಬರಿಗೂ ಸಿಗಲೆಂದು ಹಾಗೂ ಎಸ್. ಎಸ್. ಎಲ್. ಸಿ. ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಜ್ಞಾಪಕ ಶಕ್ತಿ ಹಾಗೂ ಕೃಪಾ ಕಟಾಕ್ಷ ಸಿಗಲೆಂದು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಪೂಜಾ ನಾಗರಾಜ್ ಪರಿಸರ ಮಾತನಾಡಿದರು. ನಂತರ ಗುರುಗಳಾದ ಶ್ರೀ ಕೆ. ಮಂಜುನಾಥ್ ಭಟ್ ರವರ ಸಮ್ಮುಖದಲ್ಲಿ ಸರಸ್ವತಿ ಮಾತಿಗೆ ಪೂಜೆಯನ್ನು ಸಲ್ಲಿಸಲಾಯಿತು. ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಂದ ಹತ್ತನೇ ನೇ ತರಗತಿಯ ವಿದ್ಯಾರ್ಥಿಗಳು ಸರಸ್ವತಿ ಮಾತೆಯನ್ನು ಆರಾಧಿಸುತ್ತಾ ಭಕ್ತಿ ಪೂರ್ವಕ ಗೀತೆಗಳನ್ನು ಸರಸ್ವತಿ ಮಾತಿಗೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಗಳು, ಆಡಳಿತಾಧಿಕಾರಿಗಳು, ಮುಖ್ಯೋಪಾಧ್ಯಾಯರು, ಹಾಗೂ ಶಿಕ್ಷಕ ವೃಂದದವರು ಭಾಗಿಯಾಗಿದ್ದರು.
ತಾಯಿ ಸರಸ್ವತಿಯ ಕೃಪಾಕಟಾಕ್ಷ ಪರೀಕ್ಷಾರ್ಥಿ ಮಕ್ಕಳಿಗೆ ಸಿಗಲಿ- ಪೂಜಾ ನಾಗರಾಜ್ ಪರಿಸರ
Date: