ರೋಟರಿ ಧ್ಯೇಯ ವಕೇಷನಲ್ ಅವಾರ್ಡ್ ಮತ್ತು ಸ್ವಯಂ-ಮಹಿಳಾ ಉದ್ಯೋಗಿಗಳನ್ನು ಗುರುತಿಸುವ ಸಲುವಾಗಿ ಇಂದು ಪ್ರೀಡಂಪಾರ್ಕ್ ಬಳಿ ರಾಗಿಅಂಬ್ಲಿ ಮಜ್ಜಿಗೆ ಮಾರಾಟ ಮಾಡುವ, ಮೂಲತಃ ತಮಿಳುನಾಡಿನ ಶ್ರೀಮತಿ ಶಾಕುಂತಲಮ್ಮ (71) ಕೋಂ ದಿ:ಪಾಂಡುರಂಗ ರವರು ಪ್ರತಿದಿನ ವಾಯುವಿಹಾರಕ್ಕೆ ಆಗಮಿಸುವವರಿಗೆ ಹಾಗೂ ತಕ್ಷಣಕ್ಕೆ ಹಸಿವು ನೀಗಿಸಲು ಉತ್ತಮ ಆರೋಗ್ಯ ಪಾನಿಯ ಕೈಗೆಟುಕುವ ಬೆಲೆಗೆ ಮಾರಾಟಾಡುತ್ತ, ಈ ಬಿರುಬೇಸಿಗೆಯಲ್ಲಿ ದೇಹಕ್ಕೆ ತಂಪು ಎರೆಯುವ ರಾಗಿಗಂಜಿ- ಮಾವಿನ ಉಪ್ಪನಕಾಯಿ, ಮಜ್ಜಿಗೆ ಒಣ ಮೆಣಸಿನಕಾಯಿ ನೆಂಚ್ಚಿಗೆಗೆ ನೀಡುತ್ತಾ ತಮ್ಮ ಕುಟುಂಬಕ್ಕೆ ಆರ್ಥಿಕ ಚೈತನ್ಯ ನೀಡುವುದರೊಂದಿಗೆ, ಬಡ ನಾಗರೀಕರಿಗೆ ಅಮೃತ ನೀಡುವ ಕಾಯಕದಲ್ಲಿ ತೊಡಗಿದ್ದು ಇವರನ್ನು ಅವರು ಕಾಯಕ ಮಾಡುವ ಸ್ಥಳದಲ್ಲೆ ರೋಟರಿ ಜ್ಯುಬಿಲಿ ವತಿಯಿಂದ ಸನ್ಮಾನಿಸಲಾಯಿತು.
ಕಳೆದ ಐವತ್ತು ವರ್ಷದಿಂದ ಸಂಗೊಳ್ಳಿ ರಾಯಣ್ಣ ರಸ್ತೆಯಲ್ಲಿ ಕಾವೇರಿ ಟಿಫನ್ ಹೋಂ ನಡೆಸುತ್ತಿರುವ ಶ್ರೀಮತಿ ಚಂದ್ರಮತಿ (72) ಕೋಂ ಆನಂದ ಐತಾಳ್ ಮೂಲತಃ ಕುಂದಾಪುರದವರು ಚಿಕ್ಕ ಕ್ಯಾಂಟಿನ್ ಪ್ರಾರಂಭಿಸಿ ಜೀವನ ಕಟ್ಟಿ ಕೊಂಡ ಇವರು, ಅಂದು ಬೆಣ್ಣೆ ಖಾಲಿಗೆ ಪ್ರಸಿದ್ದಿ ಹೊಂದಿದ್ದರು. ಇಂದು ನಂದಿನಿ ಹಾಲಿನ ಮಾರಾಟ ಮಾಡುತ್ತ ಒಬ್ಬ ಮಗ, ಒಬ್ಬ ಮಗಳನ್ನು ಹೊಂದಿರುವ ಇವರು ಇಂದಿಗೂ ಬೆಳಿಗ್ಗೆ ಐದರಿಂದ ಬಡಾವಣೆಯ ಎಲ್ಲರ ಮನೆಯ ಕಾಫಿಗೆ ಹಾಲು ಒದಗಿಸುತ್ತಿದ್ದಾರೆ.
ಹೊಸಮನೆಯ ಎರಡನೇ ತಿರುವಿನ ಶ್ರೀಸತ್ಯನಾರಾಯಣ ಪ್ಲೋರ್ ಮಿಲ್ ಮಾಲಿಕರಾದ ಶ್ರೀಮತಿ ಲಕ್ಷ್ಮೀಬಾಯಿ (85) ಕೋಂ ದಿ.ನಾರಾಯಣ್ ರಾವ್ ಇವರು ಕಳೆದ ಅರವತ್ತು ವರ್ಷದಿಂದ ಹಿಟ್ಟಿನ ಗಿರಣಿ ನಡೆಸುತ್ತಾ ಮೂರು ಹೆಣ್ಣು ಮಕ್ಕಳಿಗೆ ಜೀವನ ಕಟ್ಟಿ ಕೊಟ್ಟಿರುತ್ತಾರೆ.
ಅಂದು ಹೊಸಮನೆ, ಸುತ್ತ ಮುತ್ತಲ ಗ್ರಾಮದ ಮನೆ ಮನೆಯಲ್ಲು ರೊಟ್ಟಿ, ಮುದ್ದೆ, ಸಂಬಾರ್ ಮಾಡಲು ಅವಶ್ಯಕವಾದ ನುಣುಪಾದ ಹಿಟ್ಟು ಹಾಕಿ ಕೊಡುತ್ತಾ, ಕಾರದ ಪುಡಿ ಸಂಬಾರ್ ಪುಡಿ ಮಾಡಿ ಕೊಡಲು ಪ್ರತೇಕ ಗಿರಣಿಹಾಕಿ ಮನೆಮಾತಾಗಿದ್ದಾರೆ.
ಶ್ರೀಮತಿ ಇಂದ್ರಾಬಾಯಿ (71) ಕೋಂ ನಾಗೇಶ್ ನಾಯಕ್ ಕಳೆದ ಐವತ್ತು ವರ್ಷದ ಹಿಂದೆ ಅನಾನೆಸ್, ಸೌತೆಕಾಯಿ ತುಂಡು ಮಾಡಿ, ನಿಂಬು ಸೋಡದಿಂದ ಬಡವರ ದಾಹ ತೀರಿಸುತ್ತಿದ್ದ ಇವರು ಇಂದು ಗೋಪಿ ವೃತ್ತದ ಬಳಿ ಅನಾನೆಸ್, ಕಲ್ಲಂಗಡಿ ಹಣ್ಣಿನ ಸಗಟು ವ್ಯಾಪಾರ ಮಾಡುತ್ತಾ, ರೈತರ ಹಾಗೂ ಚಿಕ್ಕ ವ್ಯಾಪಾರಿಗಳ ಕೊಂಡಿಯಾಗಿದ್ದಾರೆ. ಇಬ್ಬರು ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಜೀವನ ಕಟ್ಟಿ ಕೊಟ್ಟಿದ್ದಾರೆ.
ಹೀಗೆ ಸ್ವಂತ ಶ್ರಮದಿಂದ ಜೀವನ ಕಟ್ಟಿ ಕೊಂಡಿರುವ ಸ್ವ- ಉದ್ಯೋಗಿಗಳನ್ನು ಗುರ್ತಿಸಿ ಅವರು ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಗೌರವಿಸುವುದು ರೋಟರಿ ಕಾರ್ಯಕ್ರಮಗಳಲ್ಲಿ ಒಂದು. ಈ ಕಾರ್ಯವನ್ನು ನಗರದ ಏಳನೆ ಕ್ಲಬ್ ಆಗಿರುವ ರೋಟರಿ ಜ್ಯುಬಿಲಿಯ ಈ ವರ್ಷದ ವಿಶೇಷ ಅಧ್ಯಕ್ಷೆ ರೊ.ರೂಪ ಪುಣ್ಯಕೋಟಿ, ಕಾರ್ಯದರ್ಶಿ ರೊ.ಪ್ರಕೃತಿ ಮಂಚಾಲೆ ಇಬ್ಬರು ಮಹಿಳೆಯರು. ಈ ಸಾಲಿನ ವಿಶ್ವ ಮಹಿಳಾದಿನದ ಪ್ರಯುಕ್ತ ನಗರದ ಶ್ರಮಜೀವಿ ಮಹಿಳೆಯರನ್ನು ಅವರು ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಗೌರವಿಸಿ ನಗರದ ನಾಗರೀಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇವರೊಂದಿಗೆ ಮಾಜಿ ಅಧ್ಯಕ್ಷರಾದ ರೇಣುಕಾರಾಧ್ಯ, ವಾಗೇಶ್, ರಾಜಶೇಖರ್, ಲಕ್ಷ್ಮೀನಾರಾಯಣ್, ಭಾರದ್ವಾಜ್, ಸತ್ಯನಾರಾಯಣ ಸಹಕರಿಸಿದರು.