Saturday, December 6, 2025
Saturday, December 6, 2025

Samarpan Trust ಮಾರ್ಚ್ 15 & 16 ಸಮರ್ಪಣ್ ಟ್ರಸ್ಟ್ ವತಿಯಿಂದ ಸುಗಮ ಸಂಗೀತ ಕಾರ್ಯಾಗಾರ

Date:

Samarpan Trust ಉದಯೋನ್ಮುಖ ಗಾಯಕರಾಗಲು ಬಯಸುವ ಸಂಗೀತಾಸಕ್ತರಿಗೆ ಪ್ರಸಿದ್ಧ ಗಾಯಕಿ ಸುರೇಖಾ ಹೆಗಡೆಯವರ ಸಂಗೀತ್ ಸಮರ್ಪಣ್ ಟ್ರಸ್ಟ್ ಉತ್ತಮ ಅವಕಾಶವನ್ನು ತೆರೆದಿಟ್ಟಿದ್ದು, ಇದೇ ಮಾ. 15ರ ಶನಿವಾರ, 16ರ ಭಾನುವಾರ ಆರ್‌ಟಿಓ ಕಛೇರಿ ರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿ ಎರಡು ದಿನಗಳ ಕಾಲ ಧ್ವನಿ ಸಂಸ್ಕರಣ, ಗ್ರಹಿಕೆ, ಜೊತೆಗೆ ಸುಗಮ ಸಂಗೀತದ ಕಲಿಕಾ ಶಿಬಿರ (ಕಾರ್ಯಾಗಾರ) ವನ್ನು ಆಯೋಜಿಸಲಾಗುತ್ತಿದೆ. ನಾಡಿನ ಹೆಸರಾಂತ ಸುಗಮ ಸಂಗೀತಗಾರರಾದ ಪುತ್ತೂರು ನರಸಿಂಹ ನಾಯಕ್, ಪ್ರಸಿದ್ಧ ಪಕ್ಕವಾದ್ಯ ಕಲಾವಿದ ಮ್ಯಾಂಡೋಲಿನ್ ಪ್ರಸಾದ್ ಹಾಗೂ ಟ್ರಸ್ಟ್ನ ಗಾಯಕಿ ಸುರೇಖಾ ಹೆಗಡೆಯವರು ಈ ಸುಗಮ ಸಂಗೀತ ಕಲಿಕಾ ಶಿಬಿರವನ್ನು ನಡೆಸಿಕೊಡಲಿದ್ದಾರೆ.

ಎಲ್ಲ ವಯೋಮಾನದ ಜಿಲ್ಲೆಯ ಗಾಯಕರಾಗಲು ಬಯಸುವ ಸಂಗೀತಾಸಕ್ತರೆಲ್ಲರಿಗೂ ಅವಕಾಶ ತೆರೆದಿದೆ. ಎರಡು ದಿನಗಳ ಈ ಶಿಬಿರಕ್ಕೆ ಒಬ್ಬರಿಗೆ 500ರೂ.ಗಳ (ಮಧ್ಯಾಹ್ನದ ಊಟ ಸೇರಿ) ಶುಲ್ಕ ನಿಗದಿಪಡಿಸಲಾಗಿದೆ.

Samarpan Trust ಆಸಕ್ತರು ತಮ್ಮ ಹೆಸರನ್ನು ಕೂಡಲೇ ನೋಂದಾಯಿಸಿಕೊಳ್ಳುವAತೆ ಕೋರಲಾಗಿದ್ದು, ವಿವರಗಳಿಗೆ 99803 15679 / 94816 62308ರಲ್ಲಿ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...