Government Industrial Training Institute ಶಿವಮೊಗ್ಗದಲ್ಲಿ ಇಂದು ದಿನಾಂಕ: 04-03-2025 ರಂದು ಗಾಜನೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಬಿ. ಟಿ . ಶೇಖರಪ್ಪ ಇವರ ಅಧ್ಯಕ್ಷತೆಯಲ್ಲಿ ಪಿಎಂ ಇಂಟರ್ನ್ಶಿಪ್ ಅಂಡ್ ಅಪ್ರೆಂಟಿ ಷಿಪ್ ಕಾರ್ಯಗಾರವನ್ನು ನಡೆಸಲಾಯಿತು.
ಕೌಶಲ್ಯ ವೃದ್ಧಿ, ರಾಷ್ಟ್ರ ಅಭಿವೃದ್ಧಿಗೆ, ಕೈಗಾರಿಕೆ ಅಭಿವೃದ್ಧಿಗೆ ಅತ್ಯಂತ ಅವಶ್ಯಕ ವಿದ್ಯಾರ್ಹತೆ ಪಡೆದ ಎಲ್ಲಾ ಅಭ್ಯರ್ಥಿಗಳು ರಿಜಿಸ್ಟ್ರೇಷನ್ ಮಾಡಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕೆಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಶ್ರೀ. ಜಿ ವಿಜಯಕುಮಾರ್ ನುಡಿದರು, ಅವರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಗಾಜನೂರಿನಲ್ಲಿ ಆಯೋಜಿಸಿದ್ದ ಪಿ. ಎಂ ಇಂಟರ್ನಶಿಪ್ ಅಂಡ್ ಅಪ್ರೆಂಟಿಷಿಪ್ ಯೋಜನೆಗಳ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘ ಆರಂಭಿಸಿರುವ ಅಡ್ವಾನ್ಸ್ಡ್ ಸ್ಕಿಲ್ ಅಕಾಡೆಮಿಯ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಸದುಪಯೋಗ ಪಡೆಯಲು ಕರೆ ನೀಡಿದರು.
Government Industrial Training Institute ಮತ್ತೋರ್ವ ಅತಿಥಿಯಾಗಿದ್ದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕರಾದ ಡಾ. ಬಿ. ವಿ. ಲಕ್ಷ್ಮೀದೇವಿ ಗೋಪಿನಾಥ್ ರವರು ಮಾತನಾಡಿ ಇಂದಿನ ವಿದ್ಯಾರ್ಥಿಗಳ ಗುಣಮಟ್ಟ, ಭವಿಷ್ಯದ ಭಾರತದ ಗುಣಮಟ್ಟವನ್ನು ನಿರ್ಧರಿಸುವುದು ಅದರಿಂದ ಇರುವ ಅವಕಾಶಗಳನ್ನು ಉಪಯೋಗಿಸಿಕೊಂಡು ಕೌಶಲ್ಯ ವೃದ್ಧಿ ಮಾಡಿಕೊಳ್ಳಬೇಕೆಂದು ನುಡಿದರು. ಮತ್ತೋರ್ವ ನಿರ್ದೇಶಕರಾದ ಶ್ರೀ. ಗಣೇಶ್ ಎಂ ಅಂಗಡಿ ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಕೌಶಲ್ಯ ಕಲಿತು ಉತ್ಪಾದಕರಾಗಲು/ ಉದ್ಯಮಿಯಾಗಲು ಕರೆ ನೀಡಿದರು.
ಜಿಲ್ಲಾ ಶಿಶಿಕ್ಷು ನೋಡಲು ಅಧಿಕಾರಿಯಾದ ಶ್ರೀ. ವಿಜಯಕುಮಾರ್ ಸಪಲಿ ರವರು ಮಾತನಾಡಿ ಐಟಿಐ ತರಬೇತಿಯಾದ ನಂತರ ಅರ್ಹ ಅಭ್ಯರ್ಥಿಗಳು PMIS Portal ನಲ್ಲಿ & apprenticeshipindia. gov.in portal ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡು ತರಬೇತಿ ಪಡೆಯಲು ಕರೆ ನೀಡಿದರು,
ಕಾರ್ಯಕ್ರಮದಲ್ಲಿ ಗಾಜನೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಬಿ. ಟಿ . ಶೇಖರಪ್ಪ, ಶಿವಮೊಗ್ಗ ಜಿಲ್ಲಾ ಶಿಶಿಕ್ಷು ನೋಡಲ್ ಅಧಿಕಾರಿಯಾದ ಶ್ರೀ. ವಿಜಯಕುಮಾರ್ ಸಪಲಿ, ತೀರ್ಥಹಳ್ಳಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ. ಕಾಳಿದಾಸ್ ನಾಯ್ಕ್, ಭದ್ರಾವತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಿ ಅಧಿಕಾರಿಗಳು ಹಾಗೂ ಸಹಾಯಕ ಶಿಶಿಕ್ಷು ಅಧಿಕಾರಿಗಳಾದ ಶ್ರೀ. ಮಾಲತೇಶ್ವರ್ ಡಿ, ರಿಪ್ಪನ್ಪೇಟೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ. ಆರ್ ಮೂರ್ತಿ, ಗಾಜನೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಭಾರ ತರಬೇತಿ ಅಧಿಕಾರಿಗಳಾದ ಶ್ರೀ. ಕೃಷ್ಣಮೂರ್ತಿ ಕೆ, NSDC DPMU ರವರಾದ ಶ್ರೀಮತಿ. ಗೀತಾ ಹೆಚ್, ಶಿವಮೊಗ್ಗ ಜಿಲ್ಲೆಯ 10 ಉದ್ದಿಮೆದಾರರು ಹಾಗೂ ತರಬೇತುದಾರರು ಉಪಸ್ಥಿತರಿದ್ದರು.