Monday, March 3, 2025
Monday, March 3, 2025

Ramesh Begar ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ರಮೇಶ್ ಬೇಗಾರ್ ಗೆ ಸಾಧಕ ಸನ್ಮಾನ

Date:

Ramesh Begar ಮಲೆನಾಡ ಸಾಂಸ್ಕೃತಿಕ ಅಸ್ಮಿತೆ ಯಾದ ಪ್ರಸಿದ್ಧ ಮತ್ತು ಬಹು ಕ್ಷೇತ್ರಗಳ ನಿರಂತರ ಸಾಧಕ , ಶೃಂಗೇರಿಯ ರಮೇಶ್ ಬೇಗಾರ್ ಇವರು ಇತ್ತೀಚಿಗೆ ಹೊನ್ನಾವರ ದ ಗುಣವಂತೆಯಲ್ಲಿ ನಡೆದ ಕೆರೆಮನೆ ಶಂಭು ಹೆಗ್ಡೆ ರಾಷ್ಟ್ರೀಯ ನಾಟ್ಯ ಉತ್ಸವ ದಲ್ಲಿ, ಸಾಂಸ್ಕೃತಿಕ ಸಂಘಟನ ಕ್ಷೇತ್ರದಿಂದ ಸಾಧಕ ಸನ್ಮಾನ ದ ಗೌರವಕ್ಕೆ ಪಾತ್ರರಾಗಿದ್ದಾರೆ.
9 ದಿನಗಳ ಕಾಲ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಲಾವಿದರ ವಿವಿಧ ಕಲಾ ಪ್ರದರ್ಶನ ದ ಈ ಪ್ರತಿಷ್ಟಿತ ವೇದಿಕೆಯಲ್ಲಿ ಪ್ರತೀ ದಿನವೂ ಕಲಾ ಕ್ಷೇತ್ರ ದಲ್ಲಿ ದುಡಿದ ಮಹನೀಯರನ್ನು ಗೌರವ ಸನ್ಮಾನ ದ ಮೂಲಕ ಕೆರೆಮನೆ ಶಂಭು ಹೆಗ್ಡೆ ಸ್ಮಾರಕವಾಗಿ ಗೌರವಿಸಲಾಗಿತ್ತು.
Ramesh Begar ರಂಗಭೂಮಿ, ಯಕ್ಷಗಾನ, ಕಿರುತೆರೆ ಮತ್ತು ಚಲನಚಿತ್ರ ಕ್ಷೇತ್ರ ದಲ್ಲಿ ಕಳೆದ 38 ವರ್ಷಗಳಿಂದ ಅನನ್ಯವಾಗಿ ತೊಡಗಿಕೊಂಡಿರುವ ರಮೇಶ್ ಬೇಗಾರ್ ತಾನು ಕೈಯಾಡಿಸಿದ ಎಲ್ಲಾ ಪ್ರಕಾರಗಳಲ್ಲೂ ಮೈಲಿಗಲ್ಲು ನೆಟ್ಟ ಪ್ರತಿಭಾಶಾಲಿ ಆಗಿದ್ದಾರೆ ಮಾತ್ರವಲ್ಲದೆ ಆ ಎಲ್ಲಾ ಕ್ಷೇತ್ರದ ಸಾಧನೆಗಾಗಿ ರಾಜ್ಯ ಮತ್ತು ವಿದೇಶ ದಲ್ಲೂ ವಿವಿಧ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ವರ್ಷ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯನ್ನೂ ಪಡೆದಿರುವ ಬೇಗಾರ್ ಯಕ್ಷಗಾನ ಅಕಾಡೆಮಿ ಗೆ 2 ಅವಧಿಯಲ್ಲಿ ಸದಸ್ಯರಾದ ಕೀರ್ತಿ ಹೊಂದಿದ್ದಾರೆ.
ಈ ಸಂದರ್ಭದಲ್ಲಿ ಪತ್ರಿಕೆಗೆ ಪ್ರತಿಕ್ರಿಯಿಸಿರುವ ರಮೇಶ್ ” ಯಕ್ಷಗಾನ ದ ಮೇರು ಸಾಧಕರಾದ ಮತ್ತು ಆ ಕಲೆಗೆ ಅಕಾಡೆಮಿಕ್ ಸ್ಪರ್ಶ ನೀಡಿದ ಪ್ರಯೋಗ ಶೀಲ ದಿಗ್ಗಜ ಶಂಭು ಹೆಗ್ಡೆ ಅವರ ಕರ್ಮ ಕ್ಷೇತ್ರ ದಲ್ಲೇ ಅವರ ಸ್ಮರಣೆಯ ಪ್ರಶಸ್ತಿ ಸ್ವೀಕರಿಸಿರುವುದು ಅಪಾರ ಹೆಮ್ಮೆ ತಂದಿದೆ ” ಎಂದಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bhadravati Police ಭದ್ರಾವತಿಯಿಂದ ನಾಪತ್ತೆಯಾಗಿರುವ ವ್ಯಕ್ತಿಯ ಬಗ್ಗೆ ಪೊಲೀಸ್ ಪ್ರಕಟಣೆ

Bhadravati Police ಭದ್ರಾವತಿ ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿರುವ ಸುಮಾರು...

Shubhamangal Kalyan Mandira ಸಮಾಜ ಸೇವಕ ವಿನಾಯಕ್ ಬಾಯರಿ ನಿಧನ

Shubhamangal Kalyan Mandira ಶಿವಮೊಗ್ಗದ ವಿನಾಯಕ್ ಬಾಯರಿ(47) ರವರು ಇಂದು...

Forest Department ರಸ್ತೆ ಅಗಲೀಕರಣ ಬಗ್ಗೆ ಮರಗಳ ಕಡಿತಲೆ, ಆಯನೂರು ಅರಣ್ಯ ಉಪವಿಭಾಗದಲ್ಲಿ ಸಾರ್ವಜನಿಕರ ಅಹವಾಲಿಗೆ ಅವಕಾಶ

Forest Department ಅರಣ್ಯ ಇಲಾಖೆ ಆಯನೂರು ಉಪವಿಭಾಗದ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕೆ...

Annabhagya Yojana ಫೆಬ್ರವರಿ 2025 ರಿಂದ ಜಾರಿಗೆ ಬರುವಂತೆ ಮಾರ್ಚ್2025 ರ ಮಾಹೆಯ ಪಡಿತರದಲ್ಲಿ 5 ಕೆಜಿ ಅಕ್ಕಿ ಸೇರಿಸಿ ವಿತರಣೆ- ಗುರುದತ್ತ ಹೆಗಡೆ

Annabhagya Yojana ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಮತ್ತು...