Wednesday, March 25, 2026
Wednesday, March 25, 2026

Directorate of Women And Child Development Department ಮಹಿಳೆಯರ ಆರ್ಥಿಕ ಪ್ರಗತಿ‌ ಆರ್ ಬಿ‌ ಐ‌‌ ಉದ್ದೇಶ- ಬಿ.ಚಂದ್ರಶೇಖರ್

Date:

Directorate of Women And Child Development Department ಮಹಿಳಾ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ. ಈ ದಿಸೆಯಲ್ಲಿ ಆರ್‌ಬಿಐ ಮಹಿಳೆಯರನ್ನು ಸಶಕ್ತೀಕರಣಗೊಳಿಸಲು ಆರ್ಥಿಕ ಸಾಕ್ಷರತೆ-ಮಹಿಳೆಯರ ಅಭಿವೃದ್ದಿ ಕಾರ್ಯಕ್ರಮವನ್ನು ದೇಶಾದ್ಯಂತ ಆಯೋಜಿಸಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಬಿ.ಚಂದ್ರಶೇಖರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ದಿ ಯೋಜನೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಭಾರತೀಯ ರಿಸರ್ವ್ ಬ್ಯಾಂಕ್ ಬೆಂಗಳೂರು, ಲೀಡ್ ಬ್ಯಾಂಕ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಡಿಎಆರ್ ಸಭಾ ಭವನದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಆಯೋಜಿಸಿದ್ದ ಮಹಿಳೆಯರಲ್ಲಿ ಆರ್ಥಿಕ ಸಾಕ್ಷರತೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಅಭಿವೃದ್ದಿ ಹೊಂದಬೇಕು ಎಂಬುದು ಆರ್‌ಬಿಐ ಮುಖ್ಯ ಉದ್ದೇಶವಾಗಿದ್ದು, ಅದಕ್ಕಾಗಿ ಈ ವರ್ಷ ಹಣಕಾಸು ಯೋಜನೆ ಕುರಿತು ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ. ಇದು ಫೆ.24 ರಿಂದ 28 ವರೆಗೆ ನಡೆಯಲಿದ್ದು, ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಸಹಕಾರ ಕ್ಷೇತ್ರದವರೆಗೆ ಆಯೋಜಿಸಲಾಗಿದೆ ಎಂದರು.
ಮನೆ ನಿರ್ವಹಣೆ ಮಾಡುವವರು ಮಹಿಳೆಯರೇ ಆಗಿರುವುದರಿಂದ ಅವರಿಗೆ ಫೈನ್ಶಾಯಲ್ ಪ್ಲಾನಿಂಗ್ ಬಹಳ ಮುಖ್ಯವಾಗಿದೆ. ಸಂಬಳದಲ್ಲಿ ಉಳಿತಾಯ ಮಾಡುವುದನ್ನು ಕಲಿಯಬೇಕು. ನಿಮ್ಮ ಆದಾಯವನ್ನು ಅನಾವಶ್ಯಕವಾಗಿ ಖರ್ಚು ಮಾಡಿದೆ ಉಳಿತಾಯ ಮಾಡಬೇಕು. ಇಲ್ಲದಿದ್ದರೆ ಜೀವನದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಅದರಿಂದ ನಿಮ್ಮ ಹಾಗೂ ಕುಟುಂಬದ ಬೆಳವಣಿಗಗೆ ತೊಂದರೆ ಉಂಟಾಗುತ್ತದೆ. ಅವಶ್ಯಕತೆ ಇದ್ದಲ್ಲಿ ಮಾತ್ರ ಖರ್ಚು ಮಾಡಿ ಇನ್ನುಳಿದ ಹಣವನ್ನು ಬ್ಯಾಂಕ್‌ನಲ್ಲಿ ಉಳಿತಾಯ ಮಾಡಬೇಕು ಎಂದರು.
ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಬಿ.ಆರ್. ಶಂಕರಪ್ಪ ಮಾತನಾಡಿ, ಮಹಿಳೆಯರಲ್ಲಿ ಮಾನಸಿಕ ಸ್ಥೆöÊರ್ಯ ಮೂಡಬೇಕು. ಮಹಿಳೆಯರಿಗೆ ಆಯಸ್ಸು ಹೆಚ್ಚು, ಪುರುಷರಿಗೆ ಆದಾಯ ಹೆಚ್ಚು ಇವೆರಡನ್ನು ಸಮತೋಲನಗೊಳಿಸಲು ಆರ್‌ಬಿಐ ಈ ಯೋಜನೆಯಡಿಯಲ್ಲಿ ಕಾರ್ಯಕ್ರಮವನ್ನು ರೂಪಿಸಿದೆ ಎಂದರು.
Directorate of Women And Child Development Department ಹೆಣ್ಣು ಕುಟುಂಬದ ಕಣ್ಣು. ಕುಟಂಬದಲ್ಲಿನ ಆಗು-ಹೋಗುಗಳು, ಬೇಕು-ಬೇಡಗಳನ್ನು ಹೆಣ್ಣು ಮಕ್ಕಳೇ ಪೂರೈಸೋದು. ಆ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಮಹಿಳೆಯರಿಗೆ ಕೊಟ್ಟಿದೆ. ಅದರ ಜೊತೆಗೆ ಸಾಲದ ಸವಲತ್ತನ್ನು ಕೂಡ ನೀಡುತ್ತಿದೆ. ಉಳಿತಾಯ, ಹೂಡಿಕೆ ಇವೆಲ್ಲವನ್ನು ಜಾಗರೂಕತೆಯಿಂದ ಮಹಿಳೆಯರು ನಿರ್ವಹಿಸಬೇಕು. ಮಹಿಳೆಯರು ಆರ್ಥಿಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳವಾಗ ಕುಟುಂಬದ ಅನಿಸಿಕೆಯನ್ನು ಪಡೆಯಬೇಕು. ಆದಷ್ಟು ಉಳಿತಾಯವನ್ನು ಬ್ಯಾಂಕ್‌ನಲ್ಲೆ ಮಾಡಬೇಕು. ಬ್ಯಾಂಕ್‌ನ ಜೊತೆಗೆ ವ್ಯವಹಾರ ಶುದ್ಧವಾಗಿರಬೇಕು. ಸಾಲವನ್ನು ಪ್ರಾಮಾಣಿಕವಾಗಿ ಕಟ್ಟಬೇಕು ಎಂದರು.
ರೂರಲ್ ಸೆಲ್ಫ್ ಎಂಪ್ಲಾಯಿಮೆAಟ್ ಟ್ರೆöÊನಿಂಗ್ ಇನ್ಸಿ÷್ಟಟ್ಯೂಟ್‌ನ ಕಾಂತೇಶ್ ಮಾತನಾಡಿ, ಮೊದಲು ನಾವು ಉಳಿತಾಯ ಮಾಡುವುದನ್ನು ಕಲಿಯಬೇಕು ನಂತರ ಅದನ್ನು ಹೂಡಿಕೆ ಮಾಡಬೇಕು. ದುಡಿಮೆ ಇಲ್ಲದಿದ್ದರೆ ಹಣಕಾಸಿನ ಸಮಸ್ಯೆಯ ಉಂಟಾಗುತ್ತದೆ. ಅದಕ್ಕೆ ಪ್ರತಿಯೊಬ್ಬರು ದುಡಿಮೆ ಮಾಡಬೇಕು. ಯಾವುದೇ ಉದ್ಯೋಗ ಸಿಗದಿದ್ದರೆ ಸ್ವಂತ ಉದ್ಯೋಗವನ್ನು ಮಾಡಲು ಯೋಚಿಸಬೇಕು ಎಂದರು.
ಇಂದಿನ ವಿದ್ಯಮಾನದಲ್ಲಿ ಸ್ವಂತ ಉದ್ಯೋಗವೇ ಅತ್ಯುತ್ತಮ ಹಾದಿ. ಹಾಗಾಗಿ ಶಿಕ್ಷಣದ ಜೊತೆಗೆ ಕೌಶಲ್ಯವು ಇರಬೇಕು. ಆ ಉದ್ದೇಶದಿಂದ ಕೇಂದ್ರ ಸರ್ಕಾರವು ಗ್ರಾಮೀಣ ಕೌಶಲ್ಯ ತರಬೇತಿ ಸಂಸ್ಥೆಯಡಿಯಲ್ಲಿ ಯೋಜನೆ ರೂಪಿಸಿದೆ. ಕಡಿಮೆ ಅವಧಿಯಲ್ಲಿ ತರಬೇತಿ ನೀಡಲಿದ್ದು, ರೆಸಿಡೆನ್ಸಿ ಮಾದರಿಯಲ್ಲಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಸಿ.ಗಂಗಾಬಾಯಿ, ಸಹಾಯಕ ಲೀಡ್ ಬ್ಯಾಂಕ್ ಮ್ಯಾನೇಜರ್ ಬಿ.ಹೊನ್ನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಲೀಡ್ ಬ್ಯಾಂಕ್‌ನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಬಿಜೆಪಿ ಒಡ್ಡುವ ಆಸೆ ಆಮಿಷಗಳಿಗೆ ಒಳಗಾಗಬೇಡಿ- ಸಿದ್ಧರಾಮಯ್ಯ

CM Siddharamaih ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ...

National Horticulture Mission Scheme ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ. ಜಾ./ ಪ. ಪಂ. ರೈತರಿಂದ ಅರ್ಜಿ ಅಹ್ವಾನ

National Horticulture Mission Scheme 2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್...

S.N. Channabasappa ಮತಪತ್ರ ಪದ್ಧತಿ ಜಾರಿಗೆ ತರುತ್ತಿರುವ ಸರ್ಕಾರದ ನಿರ್ಧಾರಕ್ಕೆ ಸದನದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ವಿರೋಧ

S.N. Channabasappa ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸುವ...

MESCOM ಸಾಗರ : ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ 26 ರಂದು...