Monday, July 27, 2026
Monday, July 27, 2026

Shimoga Yakshagana ಫೆಬ್ರವರಿ 22 ರಿಂದ ಶಂಭುಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ – ಶಿವಾನಂದ‌‌ ಹೆಗಡೆ

Date:

Shimoga Yakshagana “ಕೋವಿಡ್ ನಂತರದ ಕಾಲಾವಧಿಯಲ್ಲಿ‌ ಯಕ್ಷಗಾನ ಕಲಾಕೇಂದ್ರ ಆರ್ಥಿಕ ಸಂಕಷ್ಟದಿಂದ ಮುಂಚಿನಂತೆ ಕ್ರಿಯಾಶೀಲವಾಗಲಿಲ್ಲ. ಆದರೂ‌ ಪ್ರೋತ್ಸಾಹಕರು,‌ದಾನಿಗಳು ,ಆತ್ಮೀಯರಿಂದ‌ ಕೆರೆಮನೆ ಶಂಭುಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ‌‌ ವರ್ಷದಿಂದ‌ ವರ್ಷಕ್ಕೆ
ಹೊಸ ಮೆರುಗು ಪಡೆಯುತ್ತಿದೆ.
ಇಡಗುಂಜಿಯ ಮಹಾಗಣಪತಿ ಯಕ್ಷಗಾನ ಮಂಡಳಿಗೆ ಪ್ರಸ್ತುತ
ಯುನೆಸ್ಕೊ ಮಾನ್ಯತೆ ಲಭಿಸಿದೆ. ಈ ಯಶಸ್ಸಿಗೆ ಕೆರೆಮನೆ ಕುಟುಂಬದ ಹಿರಯರು ಮಂಡಳಿಯ ಕಲಾವಿದರು ಹಾಗೂ‌‌ ಯಕ್ಷಗಾನ ಪ್ರೇಮಿಗಳ ಸಂಘಟಿತ ಪ್ರಯತ್ನವೇ ಕಾರಣ ” ಎಂದು ಮಂಡಳಿಯ ನಿರ್ದೇಶಕ ಶಿವಾನಂದ ಹೆಗಡೆ ಹೇಳಿದರು.

Shimoga Yakshagana ಶಿವಮೊಗ್ಗದ ಅಭ್ಯುದಯ‌ ಮತ್ತು ಶ್ರೀಮಯ 90. ಸಾರಥಿಗಳ‌ ಆಶ್ರಯದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ‌ ಹೆಗಡೆ ಮಾತನಾಡುತ್ತಿದ್ದರು.
ನಮ್ಮ ಹಿರಿಯರು
ಕೇವಲ ಹನ್ನೆರಡು ರೂಪಾಯಿಗಳಿಂದ ಮಂಡಳಿಯನ್ನ ಆರಂಭ ಮಾಡಿದ್ದರು.
ಆದರೆ ಹಣಕ್ಕೆ ‌ಪ್ರಧಾನ್ಯತೆ ಕೊಡದೇ ಕಲೆಗೆ ಪ್ರಾಮುಖ್ಯತೆ ನೀಡಿದ್ದರಿಂದ‌ ಮಂಡಳಿ‌ ಇಂದಿನ ಹಂತ ಮುಟ್ಟಿದೆ. ತೊಂಭತ್ತು ವಸಂತಗಳನ್ಮ ಸಾರ್ಥಕತೆ‌‌ ದಕ್ಕಿದೆ.
ಸಂಕಷ್ಟದ ದಿನಗಳಲ್ಲಿ‌‌ ಶಿವಮೊಗ್ಗದ ‌ಯಕ್ಷಗಾನ ಪ್ರೇಮಿಗಳು,ಆಪ್ತರು‌
ಕಲೆಗೆ ನೀರೆರೆದು ಪೋಷಿಸಿದರು.
ಇಂತಹ ಕಲಾಸಂಘಟನೆ ತೊಂಭತ್ತು ವರ್ಷದ ಹರ್ಷದಲ್ಲಿದೆ. ಫೆಬ್ರವರಿ 22 ರಿಂದ‌ ಮಾರ್ಚ್ 2 ರವರೆಗೆ ‌ನಡೆಯಲಿರುವ ‌ಶಂಭುಹೆಗಡೆ ರಾಷ್ಡ್ರೀಯ ನಾಟ್ಯೋತ್ಸವಕ್ಕೆ‌‌ ಎಲ್ಲರೂ ಬನ್ನಿ‌ ಎಂದು
ಶಿವಾನಂದ ಹೆಗಡೆ ತಮ್ಮ ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದರು.

ಅಭ್ಯುದಯ ಸಂಸ್ಥೆಯ ಲಕ್ಷ್ಮೀನಾರಾಯಣ ಕಾಶಿ ಎಲ್ಲರಿಗೂ ಸ್ವಾಗತ ಕೋರಿದರು.
ಡಾ.ರತ್ನಾಕರ್ ಶಿವಾನಂದ ಹೆಗಡೆ ಅವರನ್ನು ಆತ್ಮೀಯವಾಗಿ ಪರಿಚಯಿಸಿದರು.
ಸಂಘಟಕರಾದ ಬಾಬಣ್ಣ, ಡಾ.ಕೃಷ್ಣ ಎಸ್ ಭಟ್, ಡಾ.ಸಂಜಯ್, ಐತಾಳ್, ರಾಮಚಂದ್ರ,ಮುಂತಾದವರು‌ ಉಪಸ್ಥಿತರಿದ್ದರು.
ವಿಶೇಷ ಆಕರ್ಷಣೆಯಾಗಿ ಇಡಗುಂಜಿ ಮೇಳದವರಿಂದ
“ಸೀತಾಪಹರಣ” ಪ್ರಸಂಗದ ಪ್ರದರ್ಶನ ಏರ್ಪಡಿಸಲಾಗಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club of Shivamogga ವೈದ್ಯರು ಉಚಿತವಾಗಿ ನೀಡುವ ಸಲಹಾ ಸೌಲಭ್ಯ ಬಳಸಿಕೊಳ್ಳಿ- ಎನ್.ಗೋಪಿನಾಥ್

Rotary Club of Shivamogga ವೈದ್ಯರು ಉಚಿತವಾಗಿ ನೀಡುತ್ತಿರುವ ಸಲಹೆಗಳನ್ನು ಬಳಸಿಕೊಳ್ಳಿ...

Klive Special Article ತೆರಿಗೆಯು ಜೇನ್ನೊಣವು ಹೂವಿನಿಂದ ಜೇನು ಸಂಗ್ರಹಿಸುವಂತೆ ಇರಬೇಕು

ವಿಶೇಷ ಲೇಖನ: ಆರ್.ಮನೋಹರ್.ತೆರಿಗೆ ಸಲಹೆಗಾರ. ಶಿವಮೊಗ್ಗ. Klive Special Article ಆದಾಯ ತೆರಿಗೆ...

S.N. Channabasappa ನೀಟ್ ಹೆಸರಿನಲ್ಲಿನ ಕಾನೂನು ಭಂಜಕರನ್ನ ಜೈಲಿಗಟ್ಟುವ ಧೈರ್ಯವಿಲ್ಲದ ಗೃಹಸಚಿವ ಪ್ರಿಯಾಂಕ ಖರ್ಗೆ- ಶಾಸಕ ಚೆನ್ನಿ ಆಕ್ರೋಶ

S.N. Channabasappa "ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ನೀಟ್...