Wednesday, December 17, 2025
Wednesday, December 17, 2025

Department of Sainik Welfare & Resettlement ನಮ್ಮೆಲ್ಲರನ್ನೂ ಕಾಯುವ ಯೋಧರ ಋಣ ತೀರಿಸಲಾಗದ್ದು- ರೇಖಾ ರಂಗನಾಥ್

Date:

Department of Sainik Welfare & Resettlement ಜನವರಿ 15 ಭಾರತೀಯರು ಹೆಮ್ಮೆಪಡುವ ಭಾರತೀಯ ಸೇನಾ ದಿನ.” ಈ ದಿನವನ್ನು ಜೆಸಿಐ ಶಿವಮೊಗ್ಗ ಭಾವನ ವತಿಯಿಂದ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ ಯೋಧರನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಚೇರಿಯಲ್ಲಿ ಭೇಟಿ ಮಾಡಿ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಿ ಸಿಹಿ ಹಂಚಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜೆಸಿಐ ಶಿವಮೊಗ್ಗ ಭಾವನ ಅಧ್ಯಕ್ಷೆ ಜೆಸಿ ರೇಖಾ ರಂಗನಾಥ್ ಭಾರತಾಂಬೆ ಹಾಗೂ ನಮ್ಮೆಲ್ಲರ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹಗಲಿರುಳು ಹೋರಾಡುತ್ತಿರುವ ಚಳಿ ಮಳೆ ಲೆಕ್ಕಿಸದೆ ಕುಟುಂಬವನ್ನು ಬಿಟ್ಟು ತಮ್ಮ ಜೀವನವನ್ನು ದೇಶಕ್ಕಾಗಿ ಅರ್ಪಿಸಿ ದೇಶದ ಗಡಿ ಭಾಗದಲ್ಲಿ ಸೇವೆ ಮಾಡುತ್ತಾ ನಮ್ಮನ್ನೆಲ್ಲರನ್ನು ಕಾಯುವ ಯೋಧರ ಋಣ ಎಂದು ತಿರಸಲಾಗದು ನಮ್ಮ ಹೆಮ್ಮೆಯ ಯೋಧರಿಗೆ ಕೋಟಿ ನಮನಗಳು ಎಂದು ಹೇಳಿದರು.

Department of Sainik Welfare & Resettlement ಈ ಸಂದರ್ಭದಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರಾದ ಡಾ| ಸಿ.ಎ. ಹಿರೇಮಠ್. ಜೇಸಿಯ ಶಿವಮೊಗ್ಗ ಭಾವನದ ಜಂಟಿ ಕಾರ್ಯದರ್ಶಿಯಾದ ಜೆಸಿ ಕರಿಬಸಮ್ಮ. ಜೂನಿಯರ್ ಜೆಸಿ ಜನ್ಯ ರಂಗನಾಥ್. ಉಪಾಧ್ಯಕ್ಷರು ಜೆ ಸಿ ವೈಷ್ಣವಿ. ಹಾಗೂ ಪೂರ್ವಾ ಅಧ್ಯಕ್ಷರಾದ ಜೆ ಸಿ ಪೂರ್ಣಿಮಾ ಸುನಿಲ್ ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...