Tuesday, February 3, 2026
Tuesday, February 3, 2026

Shivamogga City Corporation ಇ- ಸ್ವತ್ತು ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ- ಎನ್.ಗೋಪಿನಾಥ್.

Date:

Shivamogga City Corporation ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಗಳಲ್ಲಿ ಇ-ಸ್ವತ್ತು ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಮಹಾನಗರ ಪಾಲಿಕೆ ವತಿಯಿಂದ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ನಮ್ಮ ಕನಸಿನ ಶಿವಮೊಗ್ಗದ ಅಧ್ಯಕ್ಷ ಎನ್.ಗೋಪಿನಾಥ್ ಕೋರಿದ್ದಾರೆ.

ಶಿವಮೊಗ್ಗದ ಎಲ್ಲ ವಾರ್ಡ್ ಗಳಲ್ಲಿ ಇ-ಸ್ವತ್ತು ಕುರಿತು ಅರಿವು ಮೂಡಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ನಮ್ಮ ಕನಸಿನ ಶಿವಮೊಗ್ಗ ಪರವಾಗಿ ಹಾಗೂ ನಾಗರಿಕರ ಪರವಾಗಿ ಮನವಿ ಮಾಡುತ್ತಿದ್ದು, ಜನರಿಗೆ ಜಾಗೃತಿ ಅತ್ಯಂತ ಅವಶ್ಯಕವಾಗಿದೆ.

ಕರ್ನಾಟಕ ಸರ್ಕಾರದ ಇ-ಸ್ವತ್ತು ವೇದಿಕೆ, ನಾಗರಿಕರಿಗೆ ಆಸ್ತಿ ದಾಖಲೆಗಳ ಮಾಹಿತಿ ಪಡೆಯಲು, ಆಸ್ತಿ ಮಾಲಿಕತ್ವ ಪರಿಶೀಲಿಸಲು ಮತ್ತು ಆಸ್ತಿ ಸಂಬಂಧಿತ ವಂಚನೆಗಳನ್ನು ತಪ್ಪಿಸಲು ನೆರವಾಗುವ ಉದ್ದೇಶದಿಂದ ತಯಾರಿಸಲಾಗಿದೆ. ಆದರೆ ಹೆಚ್ಚಿನ ನಾಗರಿಕರಿಗೆ ಇ-ಸ್ವತ್ತು ಮತ್ತು ಪ್ರಯೋಜನಗಳ ಬಗ್ಗೆ ತಿಳಿದಿಲ್ಲ, ಇದರಿಂದ ವೇದಿಕೆಯ ಪೂರ್ಣ ಪ್ರಯೋಜನ ಸಮಾಜಕ್ಕೆ ತಲುಪುತ್ತಿಲ್ಲ.

ಅರಿವು ಕಾರ್ಯಕ್ರಮಗಳನ್ನು ನಡೆಸುವುದರಿಂದ, ನಾಗರಿಕರಿಗೆ ಆಸ್ತಿ ದಾಖಲೆಗಳ ಪೂರೈಕೆ, ಮಾಲಿಕತ್ವ ನೋಂದಣಿ ಮತ್ತು ಸರ್ಕಾರದ ನಿಯಮಾವಳಿಗಳಿಗೆ ಅನುಗುಣವಾಗಿ ಆಸ್ತಿಗಳನ್ನು ದಾಖಲಿಸಲು ಸಹಾಯ ಆಗಲಿದೆ. ಇಂತಹ ಕಾರ್ಯಕ್ರಮಗಳು ಆಸ್ತಿ ವಂಚನೆಗಳು ಮತ್ತು ಅನಧಿಕೃತ ಭೂಮಿ ನೋಂದಣಿಗಳನ್ನು ತಡೆಗಟ್ಟುವಲ್ಲಿ ಸಹಾಯಮಾಡುತ್ತವೆ. ಇದರಿಂದ ನಮ್ಮ ನಗರದಲ್ಲಿ ಆಸ್ತಿ ವ್ಯವಹಾರಗಳ ಸುರಕ್ಷತೆ ಮತ್ತು ಪಾರದರ್ಶಕತೆ ಹೆಚ್ಚಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Shivamogga City Corporation ವಿವಿಧ ವಾರ್ಡ್ ಗಳಲ್ಲಿ ಇ-ಸ್ವತ್ತು ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಚ್ಚಿನ ನಾಗರಿಕರು ಇ-ಸ್ವತ್ತು ಬಳಕೆ ಮಾಡಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಆಸ್ತಿಗಳನ್ನು ಸರಿಯಾಗಿ ನೋಂದಣಿ ಮಾಡಿಸಿಕೊಳ್ಳುವಂತೆ ಮಾಡಬೇಕು. ಇ-ಸ್ವತ್ತು ಪ್ರಚಾರಕ್ಕಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ಹೆಚ್ಚು ಗಮನ ಹರಿಸಬೇಕು. ಸಮೃದ್ಧ ಮತ್ತು ಸುರಕ್ಷಿತ ಆಸ್ತಿ ನಿರ್ವಹಣಾ ವ್ಯವಸ್ಥೆಯನ್ನು ಶಿವಮೊಗ್ಗದಲ್ಲಿ ನಿರ್ಮಿಸಬೇಕು ಎಂದು ನಮ್ಮ ಕನಸಿನ ಶಿವಮೊಗ್ಗದ ಅಧ್ಯಕ್ಷ ಎನ್.ಗೋಪಿನಾಥ್ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...