Saturday, December 6, 2025
Saturday, December 6, 2025

Friends Center Shivamogga ರಸಿಕರ ಮನರಂಜಿಸಿದ ವಿಜೇತ ಅಣತಿ ಅವರ ಸರೋದ್ ವಾದನ ಕಚೇರಿ

Date:

Friends Center Shivamogga ಶಿವಮೊಗ್ಗ ನಗರದ ಬಹುಮುಖಿ ವತಿಯಿಂದ 41ನೇ ಕಾರ್ಯಕ್ರಮವಾಗಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಪ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ವಿಜೇತ ಅಣತಿರವರ ಸರೋದ್ ನಾದ ಕಾರ್ಯಕ್ರಮ ಶ್ರೋತೃಗಳ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ಇವರಿಗೆ ತಬಲಾದಲ್ಲಿ ತುಕಾರಾಂ ರಂಗದೊಳ್, ತಾನ್ಪುರದಲ್ಲಿ ಡಾ. ನೇತ್ರಾವತಿ ಸಾಥ್ ನೀಡಿದ್ದರು.
ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ ಇವರ ಶಿಷ್ಯರಾಗಿರುವ ವಿಜೇತ ಅಣತಿಯವರು ಅಕಾಶವಾಣಿಯ ಕಲಾವಿದರಾಗಿದ್ದು, ಆಕಾಶವಾಣಿ ಧಾರವಾಡ, ಡಿಡಿ ಚಂದನ, ಐಸಿಸಿಆರ್ ಬೆಂಗಳೂರು, ಭಾರತೀಯ ವಿದ್ಯಾಭವನ ಬೆಂಗಳೂರು, ಸುಚಿತ್ರ ಬೆಂಗಳೂರು, ನೀನಾಸಂ ಹೆಗ್ಗೋಡು, ಮೈಸೂರು ಸಂಗೀತ ವಿದ್ಯಾಲಯ ಮುಂಬೈ, ಕರ್ನಾಟಕ ಸಂಗೀತ ನೃತ್ಯ Friends Center Shivamogga ಅಕಾಡೆಮಿಗಳಿಗಾಗಿ ಬಳ್ಳಾರಿಯ ಯುವ ಸಂಗೀತೋತ್ಸವ ಅಲ್ಲದೆ ಮುಂಬೈ, ಕೋಲ್ಕತ್ತಾ, ಮೈಸೂರು, ಕಾರ್ಕಳ, ಉಡುಪಿ, ಹಾಸನ… ಮುಂತಾದ ಸ್ಥಳಗಳಲ್ಲಿ ಸರೋದ್ ವಾದನದ ಕಚೇರಿಗಳನ್ನು ನೀಡಿ, ಗಮನ ಸೆಳೆದಿದ್ದಾರೆ. ತಮ್ಮ ಗುರುಗಳ ಜೊತೆಯೂ ಸಹ ವಾದಕರಾಗಿ ಕಾರ್ಯಕ್ರಮ ನೀಡಿ, ಸೈ ಎನಿಸಿಕೊಂಡಿದ್ದಾರೆ. ಇವರಿಗೆ ನಾದನಿಧಿ ಸಂಸ್ಥೆ ಹೊನ್ನಾಳಿ ಇವರು ಧಾರಿಣಿ ಸ್ಮಾರಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರ ಕೌಶಲ್ಯವನ್ನು ಮೆಚ್ಚಿಕೊಂಡಿರುವ ಸಂಗೀತ ವಿಮರ್ಶಕರು ಬರೆದಿರುವ ಲೇಖನಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಗೊಂಡಿರವುದನ್ನು ಗಮನಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...