Thursday, December 18, 2025
Thursday, December 18, 2025

Vidyaranya ವಿಜಯನಗರ ಜಿಲ್ಲಾಧಿಕಾರಿಗಳಿಗೆಗುರು ವಿದ್ಯಾರಣ್ಯರ ಬಗ್ಗೆ ಮಾಹಿತಿ ಪ್ರಚುರ ಪಡಿಸಲುಸಾರ್ವಜನಿಕ ಮನವಿ

Date:

Vidyaranya ಹಂಪೆ, ಹೊಸಪೇಟೆ, ಮತ್ತು ಕರ್ನಾಟಕದ ಜನತೆ ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಚಾರ್ಯ ಶ್ರೀ ಶ್ರೀ ವಿದ್ಯಾರಣ್ಯ ಗುರುಗಳನ್ನ ಮರೆತುಬಿಟ್ಟಿದ್ದಾರೆ.

ಹೌದು, ಶ್ರೀ ಶ್ರೀ ವಿದ್ಯಾರಣ್ಯ ಗುರುಗಳು ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣಕರ್ತರು ಅವರ ನೆನಪು ಕೇವಲ ಹಂಪೆಯಲ್ಲಿರುವ ಒಂದು ಸಣ್ಣ ದೇಗುಲದಲ್ಲಿ ಅಡಕವಾಗಿಬಿಟ್ಟಿದೆ. ಆದರೆ ಆ ದೇವಾಲಯವೂ ಸಹ ಸದಾ ಕಾಲ ಮುಚ್ಚಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾರಿಂದಾಯಿತು, ಹೇಗೆ ಆಯಿತು ಎಂಬುವುದು ಕೇವಲ ಪುಸ್ತಕದ ಬರವಣಿಗೆಯಲ್ಲಿ ಇಡಲಾಗಿದೆ, ಹಂಪಿನ ನೋಡಲು ಬಂದಂತಹ ಪ್ರವಾಸಗರಿಗೆ ಅಲ್ಲಿಯ ಅಪ್ಪ್ರೋಡ್ ಗೈಡ್ ಗಳು ಸಹ ಸರಿಯಾದ ಮಾರ್ಗದರ್ಶನ ಮತ್ತು ಶ್ರೀ ವಿದ್ಯಾರಣ್ಯ ಗುರುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ಇರುವುದಿಲ್ಲ

Vidyaranya ಶ್ರೀ ಶ್ರೀ ವಿದ್ಯಾರಣ್ಯ ಗುರುಗಳು ಮಾಡಿದಂತಹ ಕೊಡುಗೆಯನ್ನು ಹಂಪೆ ಮತ್ತು ಹೊಸಪೇಟೆ ಹಾಗೂ ಕರ್ನಾಟಕದ ಜನತೆ ಮರೆತುಬಿಟ್ಟಿದ್ದಾರೆ, ಹಂಪೆ ಮತ್ತು ಹೊಸಪೇಟೆಯಲ್ಲಿ ಎಲ್ಲಿಯೂ ಶ್ರೀ ಗುರುಗಳ ಕಂಚಿನ ಪ್ರತಿಮೆ ಇರುವುದು, ಪುತ್ತಳಿಕೆ ಇಲ್ಲ ಶ್ರೀ ಗುರುಗಳ ಹೆಸರಿನಲ್ಲಿ ಬೀದಿಗಳಿಲ್ಲ ,ಶ್ರೀ ಗುರುಗಳ ಹೆಸರಿನಲ್ಲಿ ಯಾವುದೇ ಶಾಲೆಗಳಿಲ್ಲ, ಶ್ರೀ ಗುರುಗಳ ಹೆಸರಿನಲ್ಲಿ ಎಲ್ಲಿಯೂ ಜಯಂತಿ, ಆಚರಣೆ, ದಿನಚರಣೆ ನಡೆಯುವುದಿಲ್ಲ. ಕರ್ನಾಟಕ ಸರ್ಕಾರ ಎಲ್ಲಾ ಗುರುಗಳ ಎಲ್ಲಾ ಮಹನೀಯರ ಜಯಂತಿಗಳನ್ನ ಆಚರಣೆ ಮಾಡುತ್ತಾರೆ. ಆದರೆ ಕರ್ನಾಟಕ ಸ್ಥಾಪನಾಚಾರ್ಯ ಶ್ರೀ ಶ್ರೀ ವಿದ್ಯಾರಣ್ಯ ಗುರುಗಳ ಜಯಂತಿ ಆಚರಣೆ ಅಥವಾ ಅವರ ಬಗ್ಗೆ ಸ್ಮರಣೆ ಎಲ್ಲಿಯೂ ನಡೆಯುತ್ತಿಲ್ಲ, ಏಕೋ ಗೊತ್ತಾಗದಾಗಿದೆ. ಕರ್ನಾಟಕದ ಜನತೆ ಪ್ರತಿದಿನ ಊಟ ಮಾಡುವಾಗ ಅವರ ಹೆಸರನ್ನ ಸ್ಮರಿಸಿ ಊಟ ಮಾಡಬೇಕು ಏಕೆಂದರೆ ಕರ್ನಾಟಕದಲ್ಲಿ ಹಂಪೆಯ ಸಾಮ್ರಾಜ್ಯವನ್ನು ಕಟ್ಟಿಸಿದ ಮಹಾನ್ ಚೇತನ ಮತ್ತು ಮಹಾನ್ ಗುರುಗಳು ಕಾರಣ ಕರ್ನಾಟಕ ಸರ್ಕಾರ ಜಿಲ್ಲಾಡಳಿತ ಇನ್ನೂ ಮುಂದಾದರು ಅವರ ಬಗ್ಗೆ ಸ್ಮರಿಸುವಂತಹ ಕಾರ್ಯಕ್ರಮವನ್ನು ಹಾಕಿಕೊಳ್ಳಬೇಕು ವಿದ್ಯಾರಣ್ಯರ ಬಗ್ಗೆ ಎಲ್ಲರಿಗೂ ಗೊತ್ತಾಗಬೇಕು ಎಂಬುದೇ ನನ್ನ ಆಸೆ. ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಇದರ ಬಗ್ಗೆ ಗಮನಹರಿಸುತ್ತಾರೆ ಎಂಬುದು ನನ್ನ ನಂಬಿಕೆ.

ಕರ್ನಾಟಕದ ಎಲ್ಲಾ ವರ್ಗದ ಜನರು ಅವರನ್ನು ನೆನೆಯಬೇಕು ಸದಾ ಕಾಲ ನೆನೆಯಬೇಕು ಕಾರಣ ಶ್ರೀ ಗುರುಗಳನ್ನು ಸ್ಮರಿಸುವಂತಹ ಕಾರ್ಯಕ್ರಮಗಳು ಹಂಪೆ ಹೊಸಪೇಟೆಯಲ್ಲಿ ಸದಾ ಕಾಲ ನಡೆಯುವಂತೆ ಆಗಬೇಕು ಶ್ರೀ ಶ್ರೀ ವಿದ್ಯಾರಣ್ಯ ಗುರುಗಳ ಬಗ್ಗೆ ಹೆಚ್ಚಿನ ಕಾರ್ಯಕ್ರಮಗಳು ಆಗಲು ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಸಂಘ-ಸಂಸ್ಥೆಗಳು ಮುಂದಾಗಬೇಕು ನೋಡೋಣ ಮುಂದಿನ ದಿನಗಳಲ್ಲಿ ಶ್ರೀ ಶ್ರೀ ಗುರುಗಳನ್ನ ನೆನೆಯುವಂತಹ ಕಾಲ ಮತ್ತೆ ಬರುತ್ತದೆ ಕಾದು ನೋಡೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Interact Club ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ – ರಮೇಶ್

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿ ಎಂದು ಕ್ಷೇತ್ರ...

Veereshwar Punyashram Samskruth School ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾಯಕ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ

Veereshwar Punyashram Samskruth School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ...

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...