Sunday, December 7, 2025
Sunday, December 7, 2025

World Karate Federation ಕ್ರೀಡಾಂಗಣದಲ್ಲೇ ರೆಫ್ರೀಗಳು ವಹಿಸಬೇಕಾದ ಜಾಗೃತಿ ಬಗ್ಗೆ ನಡೆದ ಕರಾಟೆ ರೆಫ್ರಿ ಸೆಮಿನಾರ್ ಯಶಸ್ವಿ

Date:

World Karate Federation ವರ್ಲ್ಡ್ ಕರಾಟೆ ಫೆಡರೇಷನ್ ಮಾನ್ಯತೆ ಪಡೆದ ಕರಾಟೆ ಇಂಡಿಯಾ ಆರ್ಗನೈಸೇಷನ್ ಹಾಗೂ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್‌ ಯಿಂದ ಮಾನ್ಯತೆ ಪಡೆದ ಶಿವಮೊಗ್ಗ ಜಿಲ್ಲೆಯ ಏಕೈಕ ಸಂಸ್ಥೆಯಾಗಿ ಗುರುತಿಸಲ್ಪಟ್ಟ ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್* ವತಿಯಿಂದ
ದಿನಾಂಕ : 13/10/2024 ರಂದು ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ “ರೆಫ್ರಿ ಸೆಮಿನಾರ್” ಕಾರ್ಯಕ್ರಮ ವನ್ನು ಆಯೋಜಿಸಿ, ಯಶಸ್ವಿಯಾಗಿ ನಡೆಸಿಕೊಡಲಾಯಿತು.

ಕಾರ್ಯಕ್ರಮವನ್ನು ಆಯೋಜಿಸಿದ ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ ಜಿಲ್ಲಾಧ್ಯಕ್ಷರಾದ ಶಿಹಾನ್ ಎ.ಝೆಡ್ ಮುಹೀಬ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸನ್ ಸೈ ನವೀನ ಎಸ್ ಜಿಲ್ಲಾ ಉಪಾಧ್ಯಕ್ಷರಾದ
ಸನ್ ಸೈ ಸಾಧಿಕ್ ಜೆ, ಖಜಾಂಚಿರಾದ ಸನ್ ಸೈ ಮಂಜುನಾಥ್, ಹಾಗೂ ಶ್ರೀಶ , ದೀಕ್ಷಾ, ಅಪೂರ್ವ, ಪೃಥ್ವಿ, ಅಂಕಿತ, ಸಮರ್ಥ್, ಆಶಿಕ್ ರವರು ಸೇರಿ ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿವಮೊಗ್ಗದ ವಿಧಾನ ಪರಿಷತ್ ನ ಶಾಸಕರಾದ ಶ್ರೀಯುತ ಡಿ.ಎಸ್. ಅರುಣ್ , ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ಸಂ ಸೈ ಭಾರ್ಗವ್‌ರೆಡ್ಡಿ, ಕರ್ನಾಟಕ ರೆಫ್ರಿ ಕಮಿಷನ್ ರಾದ ಕ್ಯೂಷಿ ಕೆ. ಪಿ ಜೋಸ್, ಕೈಗಾರಿಕಾ ಮತ್ತು ತರಬೇತಿ ಇಲಾಖೆರಾದ ಶ್ರೀಯುತ ಡಾ, ನಾಗೇಂದ್ರ ಎಫ್ ಹೊನ್ನಳ್ಳಿ, ಸಮಾಜ ಸೇವಕರಾದ ಶ್ರೀಯುತ ದಿನೇಶ್ ಶೆಟ್ , ಚಿಕ್ಕಮಂಗಳೂರಿನ ಶ್ರೀಯುತ ಸನ್ ಸೈ ವಿನೋದ್ ಕುಮಾರ್, ದಾವಣಗೆರೆಯ ಶ್ರೀಯುತ ಸನ್ ಸೈ ವೆಂಕಟೇಶ್ , ಬೆಂಗಳೂರಿನ ಶ್ರೀಯುತ ಸನ್ ಸೈ ವಿಶ್ವನಾಥ್, ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತದ್ದರು.

World Karate Federation ಈ ವಿಶೇಷ ಕಾರ್ಯಕ್ರಮದಲ್ಲಿ, ಮುಂದಿನ ಪೀಳಿಗೆಯ ರೆಫ್ರಿಗಳಿಗೆ ಅತ್ಯಂತ ನಿಖರವಾದ, ಶ್ರದ್ಧಾವಂತ ಮತ್ತು ತಾಂತ್ರಿಕ ತರಬೇತಿಯನ್ನು ನೀಡಲಾಯಿತು. ತರಬೇತಿಯಲ್ಲಿ ಕೇವಲ ಕೌಶಲ್ಯಾಭಿವೃದ್ದಿಗೇ ಆದ ಗುರುತಿಗೆ ಸೀಮಿತವಾಗದೆ, ತೀರ್ಮಾನಾತ್ಮಕತೆ, ಸಮಯ ಪ್ರಜ್ಞೆ, ನಿಯಮಾವಳಿ ಅರಿವು, ಮತ್ತು ತಾತ್ವಿಕತೆಯ ಬಗ್ಗೆ ವಿವರವಾದ ತರಬೇತಿ ನೀಡಲಾಯಿತು. ಕರಾಟೆ ಕ್ರೀಡೆಯಾದರಲ್ಲಿಯೇ, ರೆಫ್ರಿಗಳು ನಿರ್ಧಾರ ತೆಗೆದುಕೊಳ್ಳುವ ಮಹತ್ವವನ್ನು, ಹಾಗೂ ಅವರು ಪ್ರದರ್ಶಿಸಬೇಕಾದ ನ್ಯಾಯಸಮ್ಮತಿಕೆ ಮತ್ತು ಸಮರ್ಥತೆಯನ್ನು ಪ್ರಸ್ತುತ ಪಡಿಸಲಾಯಿತು.

ಇದು ಕೇವಲ ತರಬೇತಿಯಲ್ಲ, ಮುಂದಿನ ತಲೆಮಾರಿನ ರೆಫ್ರಿಗಳನ್ನು ವಿಶ್ವದ ಮಟ್ಟದಲ್ಲಿ ಉತ್ತುಂಗಕ್ಕೇರಿಸಲು ಸಹಕಾರಿಯಾಗುವಂತಹ ಮಾರ್ಗದರ್ಶನವಾಗಿದೆ. ಈ ತರಬೇತಿಯು ಅವರು ಕ್ರೀಡಾಂಗಣದಲ್ಲಿ ವಹಿಸಬೇಕಾದ ಭೂಮಿಕೆಯನ್ನು ಬಲಪಡಿಸುವ ಜೊತೆಗೆ, ಅವರ ನಿರ್ಧಾರಾತ್ಮಕ ಮತ್ತು ನಾಯಕತ್ವ ಗುಣಗಳನ್ನು ಹೆಚ್ಚಿಸಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...