Chamber of Commerce Shivamogga ದೇಶದ ಹೆಮ್ಮೆಯ ಉದ್ಯಮಿ, ಟಾಟಾ ಸಮೂಹದ ಮುಖ್ಯಸ್ಥಾರಾದ ಶ್ರೀ ರತನ್ ಟಾಟಾರವರ ನಿಧನದ ಸುದ್ದಿ ದೇಶದ ಜನತೆಗೆ ಅಪಾರ ದುಃಖವನ್ನುಂಟು ಮಾಡಿದ್ದು, ದೇಶದ ಆರ್ಥಿಕಾಭಿವೃದ್ಧಿಗೆ ತುಂಬಲಾರದ ನಷ್ಟವನ್ನುಂಟಾಗಿದೆ. ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿರುವುದು ಮಾತ್ರವಲ್ಲ ಜೊತೆಗೆ ಭಾತರದ ಉದ್ಯಮ ವಲಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಎತ್ತರಕ್ಕೆ ಕೊಂಡೊಯ್ದ್ದ ದೂರದೃಷ್ಟಿಯ ಮಹಾನ್ ವ್ಯಕ್ತಿತ್ವವನ್ನು ಹೊಂದಿದ್ದರು.
Chamber of Commerce Shivamogga ಶ್ರೀಯುತ ರತನ್ಟಾಟಾರವರು ತಮ್ಮ ಬದುಕು ಸಾಧನೆಗಳ ಮೂಲಕ ಅಜರಾಮರರಾಗಿದ್ದಾರೆ. ಅಗಲಿದ ಮಹಾನ್ ಚೇತನಕ್ಕೆ ಭಗವಂತ ಸದ್ಗತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ. ಗೋಪಿನಾಥ್, ಪದಾಧಿಕಾರಿಗಳು, ನಿದೇಶಕರುಗಳು ಗೌರವ ಶ್ರದ್ದಾಂಜಲಿಯನ್ನು ಅರ್ಪಿಸಿದ್ದಾರೆ.
