Sunday, March 29, 2026
Sunday, March 29, 2026

GM Institute of Technology ರಾಷ್ಟ್ರ ನಿರ್ಮಾಣದ ಗುರುತರ ಹೊಣೆಗಾರಿಕೆ ಭಾರತದ ಇಂಜಿನಿಯರ್ ಪದವೀಧರರ ಮೇಲಿದೆ: ಎಚ್.ಬಿ.ಮಂಜುನಾಥ

Date:

GM Institute of Technology ರಾಷ್ಟ್ರ ನಿರ್ಮಾಣದ ಗುರುತರ ಹೊಣೆಗಾರಿಕೆಯು ಭಾರತದ ಇಂಜಿನಿಯರಿಂಗ್ ಪದವೀಧರರ ಮೇಲಿದ್ದು ಕೇವಲ ಉದ್ಯೋಗ ಪ್ರಾಪ್ತಿಗಷ್ಟೇ ಗುರಿಯನ್ನು ಕೇಂದ್ರೀಕರಿಸಬೇಡಿ ಎಂದು ನೂತನ ವಿದ್ಯಾರ್ಥಿಗಳಿಗೆ ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ ಕರೆ ಕೊಟ್ಟರು.

ಅವರು ಜಿ ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನೂತನ ವಿದ್ಯಾರ್ಥಿಗಳ ಪೀಠಿಕಾ ಕಾರ್ಯಕ್ರಮದಲ್ಲಿ ‘ಭಾರತೀಯ ಸಂಸ್ಕೃತಿ, ಪರಂಪರೆ, ಶೈಕ್ಷಣಿಕ ಶಿಸ್ತು’ ವಿಷಯವಾಗಿ ಮಾತನಾಡುತ್ತಾ ದೇಶದ ಸುಮಾರು 8876 ತಾಂತ್ರಿಕ ಕಾಲೇಜುಗಳಿಂದ ವಾರ್ಷಿಕ ಸುಮಾರು 15 ಲಕ್ಷ ಇಂಜಿನಿಯರಿಂಗ್ ಪದವೀಧರರು ಹೊರ ಬರುತ್ತಿದ್ದು ಇವರಲ್ಲಿ ಶೇಕಡ ಹತ್ತರಷ್ಟು ಪದವೀಧರರು ವಿನೂತನ ಚಿಂತನೆಗಳಿಂದ ಉತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿದರೂ ಸಾಕು ನಮ್ಮ ಜಿ ಡಿ ಪಿ ಯು ಗರಿಷ್ಠ ಮಟ್ಟ ತಲುಪುತ್ತದೆ.

GM Institute of Technology ರಾಷ್ಟ್ರಾಭಿಮಾನ ಬೆಳೆಸಿಕೊಂಡರೆ ಇದನ್ನು ಸಾಧಿಸಬಹುದು. ಇದಕ್ಕಾಗಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ವಿಶೇಷತೆಯನ್ನು ಅರಿತುಕೊಳ್ಳಬೇಕು, ವಿದ್ಯಾರ್ಥಿ ದೆಸೆಯಲ್ಲಿ ಶೈಕ್ಷಣಿಕ ಶಿಸ್ತು ಪಾಲಿಸಿದಲ್ಲಿ ಇವೆಲ್ಲವೂ ಸಾಧ್ಯ ಎಂಬುದನ್ನು ನಿದರ್ಶನಗಳ ಸಹಿತ ವಿವರಿಸಿದರು. ಅಧ್ಯಾಪಕ ವರ್ಗದ ಡಾ. ಓಂಕಾರಪ್ಪ, ಮೇಘ ಹಿರೇಮಠ, ಸುಮಾ ಸತೀಶ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kote SeethaRamanjaneya Temple ವೈಭವದಿಂದ ನಡೆದ ಶ್ರೀಆಂಜನೇಯಸ್ವಾಮಿ ರಥೋತ್ಸವ

Kote SeethaRamanjaneya Temple ಪುರಾತನವಾದ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಪ್ರತಿವರ್ಷದಂತೆ...

Department of Kannada and Culture ಶ್ರೀಅಗ್ನಿಬನ್ನಿರಾಯಸ್ವಾಮಿಯವರ ಇತಿಹಾಸವನ್ನ ನಾವೆಲ್ಲಾ ತಿಳಿದುಕೊಳ್ಳಬೇಕು- ಆನಂದ್.

Department of Kannada and Culture ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು...

Rotary Club Shimoga ಚಿನ್ನ,ಬೆಳ್ಳಿ ಧಾರಣೆ ವ್ಯತ್ಯಾಸಕ್ಕೆ ಜಾಗತಿಕ ಸಮಸ್ಯೆಗಳೇ ಕಾರಣ- ಸೆಂಥಿಲ್ ವೆಲನ್.

Rotary Club Shimoga ಚಿನ್ನ ಮತ್ತು ಬೆಳ್ಳಿ ಕಷ್ಟಕಾಲದಲ್ಲಿ ಅಪತ್ಬಾಂದವ ರೀತಿಯಲ್ಲಿ ವರ್ತಿಸುತ್ತದೆ....

S. N. Channabasappa ಮಾದಕ ದ್ಯವ್ಯ ವ್ಯಸನ ವಿರೋಧಿ ಕ್ರಮಗಳಿಗೆ ವಿಶೇಷ ಕಾರ್ಯಪಡೆ ರಚನೆ ಮಾಡಿ- ಎಸ್.ಎನ್.ಚನ್ನಬಸಪ್ಪ.

S. N. Channabasappa ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳು ಮತ್ತು ಮಾದಕ...