Wednesday, August 12, 2026
Wednesday, August 12, 2026

Linde Foundation ಲಿಂಡೆ ಪ್ರತಿಷ್ಠಾನದಿಂದ ಸಾಗರ ಎಲ್ ಬಿ.ಕಾಲೇಜಿಗೆ ₹45 ಲಕ್ಷ ದೇಣಿಗೆ

Date:

Linde Foundation ಪ್ರತಿಷ್ಠಿತ ಕಂಪನಿ ಲಿಂಡೆ, ದೇಶಾಧ್ಯಂತ ಅನೇಕ ಕೈಗಾರಿಕಾ, ಆರೋಗ್ಯ ಚಟುವಟಿಕೆ ಗಳನ್ನು ನಡೆಸಿಕೊಂಡು ಬರುತ್ತಿದೆ. ಸ್ವಾತಂತ್ರದ ನಂತರದಲ್ಲಿ ಕಂಪನಿ ತನ್ನ ವಿಸ್ತಾರಗೊಳಿಸಿ ಕೊಳ್ಳುತ್ತಾ ದೊಡ್ಡಮಟ್ಟದಲ್ಲಿ ಬೆಳೆದಿದೆ. ಸಾವಿರಾರು ಜನರಿಗೆ ಉದ್ಯೋಗ ಅವಕಾಶ ನೀಡಿದೆ. ಕಂಪನಿಗೆ ಬರುವ ಲಾಭದಲ್ಲಿ, ಸಮಾಜದ ಅವಶ್ಯಕತೆ ಇರುವ ಅನೇಕ ಜನೋಪಯೋಗಿ ಕಾರ್ಯಗಳಿಗೆ ಸಿ.ಎಸ್.ಆರ್ ಧನಸಹಾಯ ನೀಡಿ ದೇಶದ ಅಭಿವೃದ್ಧಿಗೆ ಕೈಜೋಡಿಸುತ್ತಿದೆ. ನಮ್ಮ ಸಂಸ್ಥೆ ಈ ಸಾಲಿನಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನಕ್ಕೆ ಹಾಗೂ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 45ಲಕ್ಷ ರೂಪಾಯಿಗಳ ನೆರವು ನೀಡಿದೆ. ಇದರಲ್ಲಿ ಇಂದಿನ ಅಗತ್ಯಗಳಾದ ಒಂದು ಶಾಲೆಬಸ್, 28 ಗಣಕಯಂತ್ರಗಳು, 9 ಯುಪಿಎಸ್, 2 ಲ್ಯಾಪ್ಟಾಪ್, 2 ಎಲ್ಸಿಡಿ ಪ್ರೊಜೆಕ್ಟರ್ಗಳು, ಹಾಗೂ ಕ್ರೀಡಾ ಅಭಿವೃದ್ಧಿಗೆ ಕಬಡ್ಡಿ ಮ್ಯಾಟ್ನ್ನು ಒದಗಿಸಿದೆ. ಗ್ರಾಮೀಣ ಮಕ್ಕಳು ಇವುಗಳ ಪೂರ್ಣ ಉಪಯೋಗ ಪಡೆದು ದೇಶದ ಅಭಿವೃದ್ಧಿ ಪಥದಲ್ಲಿ ಹೆಜ್ಜೆಹಾಕುವಂತಾಗಲಿ. ಆಧುನಿಕ ಜಗತ್ತಿನ ಪೈಪೋಟಿಯಲ್ಲಿ ಗೆಲುವು ಸಾಧಿಸಿ ದೇಶದ ಆಸ್ತಿಯಾಗಿ ಬೆಳೆಯಲಿ ಎಂಬ ಸದಾಶಯ ನಮ್ಮ Linde Foundation ಲಿಂಡೆ ಪ್ರತಿಷ್ಠಾನದ ಆಶಯವಾಗಿದೆ ಎಂದು ದಕ್ಷಣ ಭಾರತ ಲಿಂಡೆ ಪ್ರತಿಷ್ಠಾನದ ಮುಖ್ಯಸ್ಥ ಅಂಕುರ್ ದೇಸಾಯಿ ತಿಳಿಸಿದರು.
ಮಲೆನಾಡಿನ ಪ್ರತಿಷ್ಠಿತ ಸಂಸ್ಥೆ ಮಲೆನಾಡು ಪ್ರತಿಷ್ಠಾನಕ್ಕೆ ಲಿಂಡೆ ಪ್ರತಿಷ್ಠಾನದಿಂದ ಕೊಡಮಾಡಿದ ಶಾಲಾ ವಾಹನ, ಕಂಪ್ಯೂಟರ್, ಪ್ರೊಜೆಕ್ಟರ್, ಲ್ಯಾಪ್ಟಾಪ್ ಹಾಗೂ ಕಬ್ಬಡ್ಡಿ ಮ್ಯಾಟ್ ಮುಂತಾದ ಪರಿಕರಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಂಸ್ಥೆಯು ಮಲೆನಾಡು ಪ್ರದೇಶದಲ್ಲಿ ವಿದ್ಯಾಭ್ಯಾಸಕ್ಕಾಗಿ ಕೈಗೊಂಡ ಯೋಜನೆಗಳನ್ನು ವೀಕ್ಷಿಸಿದರು.
ಲಿಂಡೆ ಪ್ರತಿಷ್ಠಾನದ ಆರ್ಥಿಕ ವಿಭಾಗದ ಜನರಲ್ ಮ್ಯಾನೇಜರ್ ಗಣಪತಿ ಎಸ್. ಗಾಂವ್ಕರ್ ಅವರು ತಮ್ಮ 24 ಸಹೋದ್ಯೋಗಿಗಳೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಲೇಜಿನ ಒಳಾಂಗಣ ಕ್ರೀಡಾಂಗಣ ಆವರಣದಲ್ಲಿ ಗಿಡ ನೆಟ್ಟು ಸಾಕ್ಷಿಯಾದರು.
ಕಾರ್ಯಕ್ರಮಕ್ಕೆ ಮೊದಲು ಎಂ.ಡಿ.ಎಫ್. ನಡೆದುಬಂದ ದಾರಿ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ|| ಶಿವಕುಮಾರ್, ಎಲ್ಲರನ್ನೂ ಸ್ವಾಗತಿಸಿದರು. ಉಪಾಧ್ಯಕ್ಷರುಗಳಾದ ಬಿ.ಆರ್. ಜಯಂತ್, ರವಿಕುಮಾರ್ ಹುಣಾಲುಮಡಿಕೆ, ಕೋಶಾಧಿಕಾರಿ ಕೆ. ವೆಂಕಟೇಶ್, ಸಹಕಾರ್ಯದರ್ಶಿ ಎಂ.ಆರ್. ಸತ್ಯನಾರಾಯಣ ಮೊದಲಾದವರು ಹಾಜರಿದ್ದರು. ಡಾ|| ಲಕ್ಷ್ಮೀಶ, ಪ್ರಾಂಶುಪಾಲರು ಎಲ್ಲರನ್ನೂ ವಂದಿಸಿದರು, ಕಾರ್ಯಕ್ರಮ ನಿರ್ವಹಣೆಯನ್ನು ಪ್ರೊ ಸುಮನ್ ಕೆ.ಕೆ. ನಿರ್ವಹಿಸಿದರು್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...