Sunday, August 23, 2026
Sunday, August 23, 2026

B.Y.Raghavendra ಭ್ರಷ್ಠಾಚಾರದ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಮಾತಾಡಲಿ ಆಯನೂರುಗೆ ಸಂಸದ ರಾಘವೇಂದ್ರ ಸವಾಲ್

Date:

B.Y. Raghavendra ಮಾಜಿ ಶಾಸಕ ಆಯನೂರು ಮಂಜುನಾಥ್ ನನ್ನ ವಿರುದ್ಧ ಮಾಡಿರುವ ಆರೋಪಗಳಿಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ನಾನು ಯಾವುದೇ ದೇವರ ಸಮ್ಮುಖಕ್ಕೆ ಬಂದು ಯಾವ ಭ್ರಷ್ಠಾಚಾರ ನಡೆಸಿಲ್ಲ ಎಂದು ಹೇಳಲು ಸಿದ್ಧ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹರಕೆರೆ ಆಸ್ಪತ್ರೆಯ ಜಾಗದ ಬಗ್ಗೆ ಆರೋಪ ಮಾಡಿದ್ದಾರೆ. ಇಲ್ಲಿರುವುದು ರೈತನಿಗೂ ಕೆಐಡಿಬಿಗೂ ಸಂಪರ್ಕ ಮಾತ್ರ. ನನ್ನ ವ್ಯವಹಾರವಿಲ್ಲ. ಅವರು ಹೇಳಿದಂತೆ ಅದು ಕೆಐಎಡಿಬಿ ಲ್ಯಾಂಡ್ ಅಲ್ಲ ಅದು. ಕನ್ಸಲ್ಟ್ ಅವಾರ್ಡ್ ಆಗಿ ಸಿಂಗಲ್ ವಿಂಡೋದಲ್ಲಿ ದೊರೆತಿದೆ. ಆದರೆ ಮಿನಿ ಅದನ್ನು ಮೂಡಾ ಹಗರಣ ಎಂದು ಅವರು ಹೇಳಿದ್ದಾರೆ ಎಂದರು.
ಟೋಲ್ ಗೇಟ್ ಬಗ್ಗೆ ಹಿಂದಿನ ಸರಕಾರ ಆದೇಶ ಮಾಡಿದ್ದು ನಿಜ. ಆದರೆ ಸ್ಥಾಪನೆ ಆಗಿರಲಿಲ್ಲ. ನಾವೇ ಟೋಲ್ ಬೇಡ ಎಂದಿದ್ದೆವು. ಸರ್ಕಾರ ಬದಲಾದಂತೆ ಟೋಲ್ ನಿರ್ಮಾಣವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ. ಆದರೆ ಟೋಲ್ ಸ್ಥಾಪನೆಯಲ್ಲಿ ನಮ್ಮ ಕೈವಾಡವಿದೆ ಎಂದು ಆರೋಪಿಸಲಾಗುತ್ತಿದೆ. ಇದು ಸರಿಯಲ್ಲ ಎಂದರು.
ಸಿಡ್ಬಿ ಶಾಖೆ ಶೀಘ್ರದಲ್ಲಿ :
B.Y. Raghavendra ನಗರದಲ್ಲಿ ಭಾರತೀಯ ಸಣ್ಣ ಕೈಗಾರಿಕಾ ಬ್ಯಾಂಕ್ (ಎಸ್‌ಐಡಿಬಿಐ- ಸಿಡ್ಬಿ) ಶಾಖೆ ಆರಂಭವಾಗುವ ಲಕ್ಷಣವಿದೆ. ಶಿವಮೊಗ್ಗಕ್ಕೆ ಸಿಡ್ಬಿ ಬ್ಯಾಂಕ್ ಆರಂಭವಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಸಂಸತ್ ಅಧಿವೇಶನದ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಭೇಟಿಯಾಗಿದ್ದೆ. ಶಿವಮೊಗ್ಗಕ್ಕೆ ಸಣ್ಣ ಕೈಗಾರಿಕೆಗೆ ಅನುಕೂಲವಾಗುವ ಬ್ಯಾಂಕ್ ಶಾಖೆ ನೀಡುವಂತೆ ಕೋರಿದ್ದೆ. ಇದರ ಫಲವಾಗಿ ನಾಳೆ ಸೆಡ್ಬಿ ಬ್ಯಾಂಕ್ ಡಿಜಿಎಂ, ರೀಜಿನಲ್ ಆಫೀಸರ್ ಭೇಟಿ ನೀಡಲಿದ್ದಾರೆ ಎಂದು ಸಂಸದ ರಾಘವೇಂದ್ರ ತಿಳಿಸಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಮುಂದಿನ ಎರಡುವರ್ಷಗಳಲ್ಲಿ 500 ಕೆಪಿಎಸ್ ಶಾಲೆಗಳ ನಿರ್ಮಾಣದ ಉದ್ದೇಶವಿದೆ- ಮಧು ಬಂಗಾರಪ್ಪ.

Madhu Bangarappa ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆಯುತ್ತಿರುವ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ...

Breaking News ತೀರ್ಥಹಳ್ಳಿಯ ಘಂಟೆಹಕ್ಲು ಬಳಿ ಬಸ್ ಮತ್ತು ಗೂಡ್ಸ್ ವಾಹನ ಢಿಕ್ಕಿ:ಚಾಲಕ ಗಾಯಾಳು

Breaking News ತೀರ್ಥಹಳ್ಳಿ - ಉಡುಪಿ ಮಾರ್ಗ ಮಧ್ಯೆಯ ಘಂಟೆಹಕ್ಲು...

B.Y. Raghavendra ಶಿವಮೊಗ್ಗ ಗ್ರಾಮಾಂತರ ರೈತರ ನೀರಿನ ಬವಣೆಗೆ ದೀರ್ಘಕಾಲೀನ ಪರಿಹಾರ ಕಲ್ಪಿಸಿ- ಬಿ.ವೈ.ರಾಘವೇಂದ್ರ.

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ.ರಾಘವೇಂದ್ರ ಅವರ ನೇತೃತ್ವದ...