Sunday, August 2, 2026
Sunday, August 2, 2026

Shivamogga Youth Hostel Association ಯೂತ್ ಹಾಸ್ಟೆಲ್ಸ್ ನಿಂದ ಲಕ್ಷಾಂತರ ಜನ ಸುರಕ್ಷಿತ ಪ್ರವಾಸ & ಚಾರಣದ ಅನುಭವ ಪಡೆದಿದ್ದಾರೆ- ಜಿ.ವಿಜಯ ಕುಮಾರ್

Date:

Shivamogga Youth Hostel Association ವಿಶ್ವಾದ್ಯಂತ ಪ್ರವಾಸಿಗರು ಕಡಿಮೆ ಖರ್ಚಿನಲ್ಲಿ ರಾಜ್ಯ, ದೇಶ ಮತ್ತು ವಿದೇಶಗಳನ್ನು ಸುರಕ್ಷಿತವಾಗಿ ವೀಕ್ಷಿಸಲು ಸಾಧ್ಯವಾಗಿರುವುದಕ್ಕೆ ಯೂತ್ ಹಾಸ್ಟೆಲ್ ಪ್ರಮುಖ ಕಾರಣ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.

ಶಿವಮೊಗ್ಗ ಯೂತ್ ಹಾಸ್ಟೆಲ್ ಜಿಲ್ಲಾ ಘಟಕದ ವತಿಯಿಂದ ಮಂಜುನಾಥ ಬಡಾವಣೆಯಲ್ಲಿ ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ಯೂತ್ ಹಾಸ್ಟೆಲ್ ಅನ್ನು ರಿಚರ್ಡ್ ಶಿರ‍್ಮಾನ್ ಸ್ಥಾಪಿಸಿದ್ದು, ಅವರ ಕನಸು ನನಸಾದ ದಿನ. ಯೂತ್ ಹಾಸ್ಟೆಲ್‌ನಿಂದ ಲಕ್ಷಾಂತರ ಜನರು ಸುರಕ್ಷಿತ ಪ್ರವಾಸ ಹಾಗೂ ಚಾರಣದ ಅನುಭವ ಹೊಂದಿದ್ದಾರೆ. ಚಾರಣದಿಂದ ದೇಹ, ಮನಸ್ಸು ಸದೃಢವಾಗುತ್ತದೆ ಎಂದು ತಿಳಿಸಿದರು.

ಈವರೆಗೂ 25ಕ್ಕೂ ಹೆಚ್ಚು ಚಾರಣ ಹಾಗೂ ಒಂದು ಅಂತರಾಷ್ಟ್ರೀಯ ಚಾರಣ ಮಾಡಿದ್ದು, ಎಲ್ಲ ಚಾರಣವು ವಿಶೇಷ ಅನುಭವ ನೀಡಿದೆ. ಪ್ರತಿಯೊಬ್ಬರೂ ಚಾರಣ ಪ್ರವಾಸಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ತುಂಬಾ ಅನುಕೂಲವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಘಟಕದ ಹಿರಿಯ ಸದಸ್ಯ, ಮಾಜಿ ಚೇರ್ಮನ್ ಮನು ಪವಾರ್ ಮಾತನಾಡಿ, ಜರ್ಮನ್‌ನಲ್ಲಿ ಆರಂಭಗೊಂಡ ಯೂತ್ ಹಾಸ್ಟೆಲ್ ಇಂದು ಪ್ರಪಂಚಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದು, ನಮ್ಮ ಘಟಕದಿಂದ 25 ರಾಜ್ಯಮಟ್ಟದ ಚಾರಣ ಮಾಡಿದ್ದು, ನವೆಂಬರ್‌ನಲ್ಲಿ 26ನೇ ಚಾರಣವನ್ನು ಕುಪ್ಪಳ್ಳಿಯಲ್ಲಿ ಹಮ್ಮಿಕೊಂಡಿದ್ದು, ಚಾರಣಗಳ ಜತೆಯಲ್ಲಿ ಸೇವಾ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

Shivamogga Youth Hostel Association ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಡಿ.ಜಿ.ಸುನೀಲ್‌ಕುಮಾರ್ ಮಾತನಾಡಿ, ಚಾರಣದಲ್ಲಿ ಮಕ್ಕಳು, ಮಹಿಳೆಯರು ಸೇರಿ ಎಲ್ಲರೂ ಭಾಗವಹಿಸುತ್ತಾರೆ. ನಮ್ಮ ಸಂಸ್ಥೆಯಲ್ಲಿ ಹೆಚ್ಚು ಸದಸ್ಯರು ಇದ್ದಾರೆ ಎಂದರು.

ಡಾ. ಪುನೀತ್ ರಾಜ್‌ಕುಮಾರ್ ರಾಜರತ್ನ ಪ್ರಶಸ್ತಿ ಪುರಸ್ಕೃತ ಜಿ.ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು. ಚೇರ್ಮನ್ ಹರೀಶ್ ಪಂಡಿತ್, ಕಾರ್ಯದರ್ಶಿ ಪ್ರಶಾಂತ್ ವಸಿಷ್ಠ, ದಯಾನಂದ್, ನಾಗರಾಜ ಶೇಠ್, ನವೀನ್ ಜವಳಿ, ಪೃಥ್ವಿ ಗಿರಿಮಾಜಿ, ಡಿ.ಜಿ.ಮಂಜುನಾಥ, ಕೆ.ರಾಘವೇಂದ್ರ, ಕೆ.ಎ.ಮಹೇಶ್, ಉಮೇಶ್ ಅಕ್ಕಸಾಲಿ, ಶ್ರೀಪಾದ ಭಟ್, ವೀಣಾರಾವ್, ಈಶ್ವರ್, ಟಿ.ಎಸ್.ಬದರೀನಾಥ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...

D.K.Sivakumar ರಾಜ್ಯದಲ್ಲಿ 70.000 ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭ – ಡಿ.ಕೆ.ಶಿವಕುಮಾರ್

D.K.Sivakumar ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 70 ಸಾವಿರಕ್ಕೂ ಹೆಚ್ಚು ಸರ್ಕಾರಿ...