Tuesday, February 3, 2026
Tuesday, February 3, 2026

Girish Kasaravalli ಸಿನಿಮಾ ಪರಂಪರೆಯ ಭಾಗವಾಗಿ ಉಳಿದುಕೊಂಡಿಲ್ಲ-ಗಿರೀಶ್ ಕಾಸರವಳ್ಳಿ

Date:

Girish Kasaravalli ಶಿವಮೊಗ್ಗ ಇಂದು ಸಿನಿಮಾ ಸಂಪೂರ್ಣ ವಾಣಿಜ್ಯೋದ್ಯಮ ಆಗಿದೆ.ಅದು ಜನರನ್ನು ಕೆರಳಿಸುತ್ತದೆ ಹೊರತು ಅರಳಿಸುವುದಿಲ್ಲ ಯಾರೂ ಬೇಕಾದರೂ ಇಂದು ಸಿನಿಮಾ ಮಾಡಬಹುದು.ಆದರೆ ಅದು ಪರಂಪರೆಯ ಭಾಗವಾಗಿ ಉಳಿದುಕೊಂಡಿಲ್ಲ.ಅದು ಕೆಲವು ತಂತ್ರಗಳನ್ನು ಅವಲಂಬಿಸಿದೆ.ಎಂದು 4ಸಲ ಸ್ವರ್ಣ ಕಮಲ ಪ್ರಶಸ್ತಿ ಪಡೆದ ನಿರ್ದೇಶಕರಾದ ಪದ್ಮಶ್ರೀ ಗಿರೀಶ್ ಕಾಸರವಳ್ಳಿ ಹೇಳಿದರು.ಅವರು ಎ.ಟಿ.ಎನ್.ಸಿ.ಸಿ.ಕಾಲೇಜಿನ ಫ್ರೆಂಡ್ಸ್ ಸೆಂಟರ್ ಹಾಲ್ ನಲ್ಲಿ ನಡೆದ ಬಹುಮುಖಿ ಶಿವಮೊಗ್ಗದ ಕಾರ್ಯಕ್ರಮ ದಲ್ಲಿ ಮಾತನಾಡುತ್ತಿದ್ದರು.
ಸಿನಿಮಾ ಮಾನವ ಇತಿಹಾಸದಲ್ಲಿ ಪ್ರಮುಖ ಭಾಗವಾಗಿ ಬಂದಿದೆ.ಇಂದು ಮೊಬೈಲ್ ಇದ್ದವರೆಲ್ಲ ಸಿನಿಮಾ ಮಾಡಬಹುದು.ಅದು ಹಣವಿದ್ದವರ ಸ್ವತ್ತಾಗಿದೆ.ಆದರೆ ಅದು ಸಾಮಾಜಿಕ ಸಂವಾದ ಹುಟ್ಟು ಹಾಕುವುದಿಲ್ಲ ಸಿನಿಮಾ ಸಾಮಾಜಿಕ ಕೃತಿಗಳಂತೆ ಸಂವಾದ ಹುಟ್ಟು ಹಾಕಬೇಕು.ಸಿನಿಮಾ ಕಲೆಯಾಗಿಯೇ ಉಳಿಯಬೇಕಾದರೆ ಅದು ಹೊಸ ಚರ್ಚೆಯನ್ನು ಹುಟ್ಟು ಹಾಕಬೇಕು.
ಸಿನಿಮಾ ಡಿಸೆಂಬರ್ 24ರಂದು 1893ರಲ್ಲಿ ಪ್ರಾರಂಭವಾಯಿತು ಆರಂಭದಲ್ಲಿ ಅದು ದೃಶ್ಯ ಕಲೆ ಆಗಿತ್ತು ನಂತರ ದೃಶ್ಯ ಶ್ರವ್ಯ ಎರಡು ಕಲೆ ಆಗಿತ್ತು.ನಂತರ 50ರ ದಶಕದಲ್ಲಿ ಜೋಡಿಸುವುದು ಅನಂತರ 70ರ ದಶಕದಲ್ಲಿ ಕಾಣಿಸುವುದು ಇತ್ತೀಚೆಗೆ ನೋಡುಗನನ್ನು ಉದ್ರೇಕಿಸುವದು ಎಂದಾಗಿದೆ.ಈಗ ಸಿನಿಮಾ ಅನುಭವಿಸುವುದಾಗಿದೆ.ಆದರೆ
Girish Kasaravalli ಸಿನಿಮಾ ನಮಗೆ ಅರಿವು ಮೂಡಿಸಬೇಕು.ಸಿನಿಮಾ ಸುಳ್ಳುಹೇಳುವ ಜಾಹೀರಾತು ಸಿನಿಮಾ ಆಗಬಾರದು. ಹೊಸದಾಗಿ ಚಿತ್ರ ನೀಡುವವರು ಸಾಮಾಜಿಕ ಚಳುವಳಿ ಕಲೆ ಅರ್ಥ ಮಾಡಿಕೊಳ್ಳಬೇಕು ಇತರ ಕಲೆಗಳು ಜನರಿಗೆ ಏನನ್ನು ಕೊಡುತ್ತದೆ ಅದಕ್ಕಿಂತ ಭಿನ್ನವಾಗಿ ಚಿತ್ರ ಗಳು ಜನರಿಗೆ ಏನನ್ನು ಕೊಡುತ್ತದೆ ಎನ್ನುವುದು ಮುಖ್ಯ ವಾಗುತ್ತದೆ.ಎಂದರು.
ಇಂದು ಪ್ರಶಸ್ತಿ ಗಳು ಕೂಡ ಜನಪ್ರಿಯ ಚಿತ್ರಗಳಿಗೆ ಬೇಗ ಅರ್ಥವಾಗುವ ಚಿತ್ರಗಳಿಗೆ ಸಿಗುತ್ತಿದೆ.ಅದು ಕೆರಳಿಸುವ ಚಿತ್ರ ಆಗಿರಬಹುದು ಎಂದರು.
ಅನಂತಮೂರ್ತಿಯವರ ಘಟಶ್ರಾದ್ಧ ಚಿತ್ರದಿಂದಲೇ ನ್ನ ಸಿನಿಮಾ ಪ್ರಯಾಣ ಆರಂಭಿಸಿದೆ.ಈಗ ಅನಂತಮೂರ್ತಿ ಯವರ ಆಕಾಶ ಮತ್ತು ಬೆಕ್ಕು ಕತೆಯನ್ನು ಸಿನಿಮಾ ಮಾಡುವ ಯೋಚನೆ ಮಾಡುತ್ತಿದ್ದೇನೆ.ಎಂದು ತಿಳಿಸಿದರು.
ಬಹುಮುಖಿ ಶಿವಮೊಗ್ಗದ ಡಾ .ಹೆಚ್.ಎಸ್.ನಾಗಭೂಷಣ ರವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿ ನಿರೂಪಣೆ ಮಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...