Wednesday, October 2, 2024
Wednesday, October 2, 2024

Brahma Kumaris Institute ನಗರದ ಬ್ರಹ್ಮ ಕುಮಾರಿ ಸಂಸ್ಥೆಯಲ್ಲಿ ರಾಖಿ ಹಬ್ಬ ಆಚರಣೆ

Date:

Brahma Kumaris Institute ಬ್ರಹ್ಮಾಕುಮಾರಿ ಸಂಸ್ಥೆಯಲ್ಲಿ ರಾಖಿ ಹಬ್ಬವನ್ನು ವಿನೂತನವಾಗಿ ಆಚರಿಸಲಾಯಿತು. ರಕ್ಷಾಬಂಧನ ಸಂದರ್ಭದಲ್ಲಿ ನಾವೆಲ್ಲರೂ ಪರಸ್ಪರ ಸೋದರ-ಸೋದರಿಯರು ಎಂಬ ಪವಿತ್ರ ದೃಷ್ಟಿಯ ಸಂಕಲ್ಪವನ್ನು ಕೈಗೊಳ್ಳಲಾಯಿತು.
ಹಾಗೂ ಎಲ್ಲರಿಗೂ ಶ್ರೀರಕ್ಷೆಯೊಂದಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾನ್ಯ ಶ್ರೀ ಕೆ ಎಸ್ ಈಶ್ವರಪ್ಪನರು,ಮಾಜಿ ಉಪಮುಖ್ಯ ಮಂತ್ರಿಗಳು, ಶಿವಮೊಗ್ಗ ಇವರು ಮಾತನಾಡುತ್ತಾ“ ಇಡೀ ವಿಶ್ವವನ್ನೇ ಒಂದುಗೂಡಿಸುವ ಸಂಸ್ಥೆಯೆಂದರೆ ಅದು ಈಶ್ವರೀಯ ವಿಶ್ವ ವಿದ್ಯಾಲಯ , ಇಲ್ಲಿ ಯಾವುದೇ ಜಾತಿ-ಧರ್ಮದ ಭೇದ-ಭಾವವಿಲ್ಲ ಎಂದರು.

Brahma Kumaris Institute ಮುಂದುವರೆದು ಮಾತನಾಡುತ್ತಾ ಪ್ರಸ್ತುತ ರಾಖಿಯ ಪಾವಿತ್ರತೆಯು ಜಗತ್ತಿನ ಮೃಗೀಯ ಮನಸ್ಕರಿಗೆ ಬೇಕಾಗಿದೆ. ನಾವು ಪರಸ್ಪರ ಅಣ್ಣ-ತಂಗಿಯರು,ಅಕ್ಕ-ತಮ್ಮಂದಿರು ಎಂಬ ಭಾವನೆಯಿಂದ ಸೋದರಿಯರ ರಕ್ಷಣೆಯಾಗಬೇಕು.ಅನಾಚರ-ಅತ್ಯಾಚಾರಗಳು ನಿಲ್ಲಬೇಕು “ ಎಂದು ರಾಖಿಯ ಮಹತ್ವವನ್ನು ತಿಳಿಸಿದರು. ನಂತರ ಶ್ರೀ ಈಶ್ವರಪ್ಪ ಹಾಗೂ ಶ್ರೀ ಕೆ ಈ ಕಾಂತೇಶ್ ಇವರಿಗೆ ಬ್ರಹ್ಮಾಕುಮಾರಿ ಸಂಸ್ಥೆಯ ಮುಖ್ಯಸ್ಥರಾದ ಬಿಕೆ ಅನಸೂಯಕ್ಕನವರು ರಾಖಿ ಕಟ್ಟಿ ಸನ್ಮಾನಿಸಿದರು. ಬಿಕೆ ಶಿವದೇವಿ , ಬಿಕೆ ನಾಗರಾಜ್ ,ಬಿಕೆ ಮಂಜಪ್ಪ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

[2] ಮಾನ್ಯ ಶ್ರೀ ಚೆನ್ನಬಸಪ್ಪ , ಶಾಸಕರು,ಶಿವಮೊಗ್ಗ ಹಾಗೂ ಮಾನ್ಯ ಶ್ರೀ ಡಿ ಎಸ್ ಅರುಣ್ , ವಿಧಾನ ಪರಿಷತ್ ಸದಸ್ಯರು, ಶಿವಮೊಗ್ಗ -ಇವರಿಗೆ ಬ್ರಹ್ಮಾಕುಮಾರಿ ಸಂಸ್ಥೆಯ ಮುಖ್ಯಸ್ಥರಾದ ಬಿಕೆ ಅನಸೂಯಕ್ಕನವರು ರಕ್ಷಾಬಂಧನ ಕಟ್ಟಿ ಶುಭಹಾರೈಸಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...