Friday, September 27, 2024
Friday, September 27, 2024

Rashtothana ಅಜೇಯ- 50,ಅದಮ್ಯ-40 .ಕೃತಿಗಳ ಸಾರ್ಥಕ ವರ್ಷಾಚರಣೆ ಲೇಖಕರಿಗೆ ಅಭಿನಂದನೆ & ವಿಚಾರ ಸಂಕಿರಣ

Date:

Rashtothana ರಾಷ್ಟೋತ್ಥಾನ ಬಳಗ, ಶಿವಮೊಗ್ಗ, ಹಾಗೂ ವಿಕಾಸ ಟ್ರಸ್ಟ್, ಅಖಿಲ ಭಾರತ ಸಾಹಿತ್ಯ ಪರಿಷತ್‌ ಮತ್ತು ಸಂಸ್ಕಾರ ಭಾರತಿ, ಶಿವಮೊಗ್ಗ ಆ. 12ರ ಸೋಮವಾರ ಸಂಜೆ 6 ಗಂಟೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಅಭಿನಂದನಾ ಕಾರ್ಯಕ್ರಮ ಹಾಗೂ ವೈಚಾರಿಕ ಉಪನ್ಯಾಸ ಕಾರ್ಯಕ್ರಮವನ್ನು
ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ‌ ನೀಡಿದ ಬಳಗದ ಅಧ್ಯಕ್ಷ ಡಾ!! ಪಿ. ಆರ್. ಸುಧೀಂದ್ರ,
ಬ್ರಿಟಿಷರನ್ನು ಭಾರತದಿಂದ ಹೊಡೆದು ಓಡಿಸಲು ಕ್ರಾಂತಿಕಾರಿ ಮಾರ್ಗವನ್ನು ಹಿಡಿದು ಬಹಳಷ್ಟು ಹೋರಾಟಗಾರರು ತಮ್ಮ ಪ್ರಾಣಾರ್ಪಣೆಯನ್ನು ಮಾಡಿದ್ದಾರೆ.

ಅಂತವರಲ್ಲಿ ಆಜಾದ್ ಚಂದ್ರಶೇಖರ್ ಕೂಡ ಒಬ್ಬರು. ತಮ್ಮ ತಾರುಣ್ಯದ ದಿನಗಳಲ್ಲಿ ಭಾರತದ ಹೋರಾಟಕ್ಕೆ ಹೊಸ ರೀತಿಯ ವ್ಯಾಖ್ಯಾನವನ್ನು ಬರೆದಂತಹ ಮಹಾನ್ ಧೀರ ಹೋರಾಟಗಾರ ಆಜಾದ್ ಚಂದ್ರಶೇಖರ್ ಇವರ ಜೀವನ ಚರಿತ್ರೆಯನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿ, ಭಾರತದ ಯುವ ಜನತೆಯಲ್ಲಿ ಹೋರಾಟದ ಆ ದಿನಗಳನ್ನು ಮರು ಸೃಷ್ಟಿಸಿದಂತವರು ಖ್ಯಾತ ಲೇಖಕ ಬಾಬು ಕೃಷ್ಣಮೂರ್ತಿಯವರು ಎಂದರು.

ಆಜಾದ್ ಚಂದ್ರಶೇಖರ್ ಅವರ ಜೀವನ ಚರಿತ್ರೆ ಕೃತಿ “ಅಜೇಯ” ವನ್ನು ರಚಿಸಿ 1974 ರಲ್ಲಿ ಬಿಡುಗಡೆ ಮಾಡಿದರು. ಇಂದಿಗೆ 50 ವರ್ಷಗಳು ತುಂಬಿವೆ. ಜೊತೆಗೆ ಇನ್ನೊಬ್ಬ ಮಹಾನ್ ಹೋರಾಟಗಾರ ಕ್ರಾಂತಿಕಾರಿ ವಾಸುದೇವ ಬಲವಂತ ಪಡಕೆ ಇವರ ಜೀವನ ಚರಿತ್ರೆ “ಅದಮ್ಯ” ವನ್ನು ಪುಸ್ತಕ ರೂಪದಲ್ಲಿ ರಚಿಸಿ 40 ವರ್ಷಗಳು ತುಂಬಿದವು ಎಂದರು.

Rashtothana ಈ ಸಂದರ್ಭದಲ್ಲಿ ರಾಷ್ಟೋತ್ಥಾನ ಬಳಗ, ಶಿವಮೊಗ್ಗ ವತಿಯಿಂದ ಈ ಎರಡು ಕೃತಿಗಳ ಲೇಖಕರಿಗೆ ಅಭಿನಂದನೆ ಸಮಾರಂಭ ಹಾಗೂ ವೈಚಾರಿಕ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ಶಾಸಕ ಚನ್ನಬಸಪ್ಪ ಉಪಸ್ಥಿತರಿರುವರು. ಪುಸ್ತಕ ಕುರಿತು ಮಾತನಾಡಲು ವಾಗ್ಮಿ, ಲೇಖಕ, ವೃತ್ತಿಯಲ್ಲಿ ಉಪನ್ಯಾಸಕ ಆದ ಆದರ್ಶ ಗೋಖಲೆ, ವಿಕಾಸ ಟ್ರಸ್ಟ್‌ನ ಅಧ್ಯಕ್ಷ ರಂಗನಾಥ ಬಿ.ಎ. ಉಪಸ್ಥಿತರಿರುವರು.

ಅಧ್ಯಕ್ಷತೆಯನ್ನು ರಾಷ್ಟೋತ್ಥಾನ ಬಳಗದ ಅಧ್ಯಕ್ಷ ಡಾ!! ಸುಧೀಂದ್ರ ವಹಿಸುವರು ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...

Chamber Of Commerce Shivamogga ರೈಲ್ವೆ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮನವಿ

Chamber Of Commerce Shivamogga ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ...