Wednesday, March 25, 2026
Wednesday, March 25, 2026

Director Hemant Hegde ” ನಾ ನಿನ್ನ ಬಿಡಲಾರೆ” ಹಾರರ್ ಚಿತ್ರ ಸದ್ಯದಲ್ಲೇ ಸೆಟ್ ಏರಲಿದೆ- ನಿರ್ದೇಶಕ ಹೇಮಂತ್ ಹೆಗಡೆ

Date:

Director Hemant Hegde ’ನಾ ನಿನ್ನ ಬಿಡಲಾರೆ’ ಎಂಬ ಹಾರರ್ ಚಿತ್ರ ಸದ್ಯದಲ್ಲಿಯೇ ಸೆಟ್ಟೇರಲಿದ್ದು ಅದರ ಪ್ರಚಾರ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಚಿತ್ರ ತಂಡದಿಂದ ಸಿನಿ ಸಂಭ್ರಮ ಎಂಬ ಬಹುದೊಡ್ಡ ಈವೆಂಟ್‌ನ್ನು ಆ.17ರಂದು ಬೆಳಿಗ್ಗೆ 9ರಿಂದ ರಾತ್ರಿ 9 ರವರೆಗೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದೆ ಎಂದು ನಟ ಹಾಗೂ ನಿರ್ದೆಶಕ ಹೇಮಂತ್ ಹೆಗಡೆ ಹೇಳಿದರು.
ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿನಿಸಂಭ್ರಮ ಒಂದು ಬಹುದೊಡ್ಡ ಇವೆಂಟ್ ಆಗಲಿದೆ. ಇದರ ಅಂಗವಾಗಿ ಶ್ರೀಮತಿ ಶಿವಮೊಗ್ಗ ಸೌಂದರ್ಯ ಸ್ಪರ್ಧೆ, ಅಂತರಕಾಲೇಜು ಫ್ಯಾಷನ್ ಡ್ರಾಮಾ ಜ್ಯೂನಿಯರ್, ಡ್ರಾಮಾ ಸೀನಿ, ಸಿನಿಮಾ ಡ್ಯಾನ್ಸರ್‌ಗಳಿಂದ ನೃತ್ಯ ಪ್ರದರ್ಶನವನ್ನು ಆಯೋಜಿಸಲಾಗಿದೆ. ಜೊತೆಗೆ ವಾಸಕಿ ವೈಭವ ಮತ್ತು ತಂಡದವರಿಂದ ಸಂಗೀತ ಸಂಜೆ ಏರ್ಪಡಿಸಲಾಗಿದೆ ಎಂದರು.
Director Hemant Hegde ಕಾರ್ಯಕ್ರಮದಲ್ಲಿ ಸುಮಾರು30 ಕೋಟಿ ರೂ. ಬೆಲೆಬಾಳುವ ಒಂದು ಶ್ವಾನದ ಪ್ರದರ್ಶನವು ಇರುತ್ತದೆ. ನಟಿಯರಾದ ಭಾವನಾ, ಕಿಶೋರ್, ಅಪೂರ್ವ, ಶರತ್ ಲೋಹಿತಾಶ್ವ ಸೇರಿದಂತೆ ಹಲವು ನಟ ನಟಿಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ನಾ ನಿನ್ನ ಬಿಡಲಾರೆ ಚಿತ್ರ ನಿರ್ಮಾ ಣಕ್ಕೆ ಈಗಾಗಲೇ ಮೂಹೂರ್ತ ನಡೆದಿದ್ದು, ಶೀರ್ಷಿಕೆ ಮಾತ್ರ 1989ರಲ್ಲಿ ತೆರೆಕಂಡ ನಾ ನಿನ್ನ ಬಿಡಲಾರೆ ಸಿನಿಮಾದ್ದಾಗಿದೆ. ಆದರೆ ಕಥೆಗೂ ಮತ್ತು ಚಿತ್ರಕ್ಕೂ ಸಂಬಂಧವಿಲ್ಲ. ಇದೊಂದು ಕೊಲೆಯ ಸುತ್ತ ಇರುವ ಭಯಾನಕ ಚಿತ್ರವಾಗಿದೆ. ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಟ ರೇವಣಸಿದ್ದಯ್ಯ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಬಿಜೆಪಿ ಒಡ್ಡುವ ಆಸೆ ಆಮಿಷಗಳಿಗೆ ಒಳಗಾಗಬೇಡಿ- ಸಿದ್ಧರಾಮಯ್ಯ

CM Siddharamaih ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ...

National Horticulture Mission Scheme ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ. ಜಾ./ ಪ. ಪಂ. ರೈತರಿಂದ ಅರ್ಜಿ ಅಹ್ವಾನ

National Horticulture Mission Scheme 2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್...

S.N. Channabasappa ಮತಪತ್ರ ಪದ್ಧತಿ ಜಾರಿಗೆ ತರುತ್ತಿರುವ ಸರ್ಕಾರದ ನಿರ್ಧಾರಕ್ಕೆ ಸದನದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ವಿರೋಧ

S.N. Channabasappa ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸುವ...

MESCOM ಸಾಗರ : ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ 26 ರಂದು...