Thursday, December 18, 2025
Thursday, December 18, 2025

Press Day ಕಷ್ಟದ ಸಮಯದಲ್ಲೂ ಪತ್ರಿಕಾ ಧರ್ಮ ಬಿಡಬಾರದು-ಕೃಷ್ಣಮೂರ್ತಿ ಹೆಬ್ಬಾರ್

Date:

Press Day ಭದ್ರಾವತಿಯ ಭೂಮಿಕ ವತಿಯಿಂದ ತರೀಕೆರೆ ರಸ್ತೆಯ ನಯನ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಹೊನ್ನಾವರದ ನಾಗರಿಕ ಪತ್ರಿಕೆಯ ಪ್ರಕಾಶಕ ಸಂಪಾದಕರಾದ ಶ್ರೀ ಕೃಷ್ಣಮೂರ್ತಿ ಹೆಬ್ಬಾರ್ ಅವರು ಆಗಮಿಸಿದ್ದರು. ಅವರು “ಕವಲು ದಾರಿಯಲ್ಲಿ ಪತ್ರಿಕೋದ್ಯಮ ” ಎಂಬ ವಿಷಯವಾಗಿ ಮಾತನಾಡುತ್ತಾ ಎಂತಹ ಕಷ್ಟ ಸಮಯದಲ್ಲಿ ಕೂಡ ಪತ್ರಿಕಾ ಧರ್ಮವನ್ನು ಬಿಡಬಾರದೆಂದು ಪತ್ರಕರ್ತರಿಗೆ ತಿಳಿಸಿದರು.
Press Day ವಿಶೇಷ ಆಹ್ವಾನಿತರಾಗಿ ಭದ್ರಾವತಿಯ ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಕಣ್ಣಪ್ಪನವರು ಆಗಮಿಸಿದ್ದರು . ಶ್ರೀಯುತ ಕಣ್ಣಪ್ಪನವರು ಮಾತನಾಡುತ್ತಾ ಪತ್ರಕರ್ತರು ಈಗಿನ ಸಮಯದಲ್ಲಿ ಎದುರಿಸಬೇಕಾದ ಕಷ್ಟಗಳು ಹಾಗೂ ಪತ್ರಿಕೆಗಳನ್ನು ನಡೆಸಲು ಆಗುತ್ತಿರುವ ತೊಂದರೆಗಳನ್ನು ವಿವರಿಸಿದರು. ಭೂಮಿಕಾ ಅಧ್ಯಕ್ಷರಾದ ಡಾಕ್ಟರ್ ಕೃಷ್ಣ ಎಸ್ ಭಟ್ ರವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಭೂಮಿಕಾ ವತಿಯಿಂದ ಶ್ರೀ ಕೃಷ್ಣಮೂರ್ತಿ ಹೆಬ್ಬಾರ್ ಹಾಗೂ ಶ್ರೀ ಕಣ್ಣಪ್ಪ ರವರಿಗೆ ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ವೇದ ಶೇಷಾದ್ರಿ ಹಾಗೂ ಶ್ರೀಮತಿ ಲೀಲಾವರಿಂದ ಪ್ರಾರ್ಥನೆ ಡಾಕ್ಟರ್ ವೀಣಾ ಭಟ್ಟ ರವರಿಂದ ಸ್ವಾಗತ ಶ್ರೀ ಕೆ ಆನಂದ್ ಹಾಗೂ ಅಪರಂಜಿ ಶಿವರಾಜ್ ರವರು ಅತಿಥಿಗಳ ಪರಿಚಯ ಮಾಡಿಕೊಟ್ಟರು. ಮುನಿರಾಜುರವರು ವಂದನಾರ್ಪಣೆ ಮಾಡಿದರು. ಶ್ರೀಮತಿ ಶಾರದಾ ಶ್ರೀನಿವಾಸ್ ರವರು ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Interact Club ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ – ರಮೇಶ್

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿ ಎಂದು ಕ್ಷೇತ್ರ...

Veereshwar Punyashram Samskruth School ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾಯಕ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ

Veereshwar Punyashram Samskruth School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ...

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...