Madras High Court ವಕೀಲ ವೃತ್ತಿ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಗೌರವ. ಕಾನೂನು ಕಾಪಾಡುವ, ಅನ್ಯಾಯಕ್ಕೊಳಗಾದವರಿಗೆ, ನೊಂದವರಿಗೆ ಸೂಕ್ತ ನ್ಯಾಯ ಕೊಡಿಸುವ ಮಹತ್ತರ ಜವಾಬ್ದಾರಿ ವಕೀಲಿಕೆ ವೃತ್ತಿಯದ್ದಾಗಿರುತ್ತದೆ. ಆದರೆ ಇನ್ನೊಬ್ಬ ವಕೀಲರು ಇಂತಹ ಪವಿತ್ರ ವೃತ್ತಿಗೆ ಕಳಂಕವೆಂಬಂತೆ ವೇಶ್ಯಾವಾಟಿಕೆ ನಡೆಸುತ್ತಿದ್ದು ಈ ಘಟನೆಗೆ ಮದ್ರಾಸ್ ಹೈಕೋರ್ಟ್ ಆಘಾತ ವ್ಯಕ್ತಪಡಿಸಿದೆ.
ಹೌದು, ವಕೀಲ ರಾಜಾ ಮುರುಗನ್ ಎಂಬುವವರು ವೇಶ್ಯಾವಾಟಿಕೆ ಅಡ್ಡೆಯನ್ನು ನಡೆಸುತ್ತಿದ್ದು, ಅದಕ್ಕೆ ಪೊಲೀಸರಿ೦ದ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿರುವ ಘಟನೆ ಮದ್ರಾಸ್ ಹೈಕೋರ್ಟ್ನಲ್ಲಿ ನಡೆದಿದೆ. ಈ ಫಟನೆ ಬಗ್ಗೆ ಸ್ವತಃ ಮದ್ರಾಸ್ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಅಲ್ಲದೆ ವೇಶ್ಯಾಗೃಹ ಕಾನೂನುಬದ್ಧವಲ್ಲ ಎಂದು ಹೇಳಿರುವ ಮದ್ರಾಸ್ ಹೈಕೋರ್ಟ್, ಸ್ವತಃ ವೇಶ್ಯಾವಾಟಿಕೆ ನಡೆಸುತ್ತಿದ್ದ ವಕೀಲನಿಗೆ ದ೦ಡದ ಸಹಿತ ಛೀಮಾರಿ ಹಾಕಿ ಈತ ವಕೀಲ ಸಮುದಾಯಕ್ಕೆ ಕಳಂಕ ಎಂದು ಕಿಡಿಕಾರಿದೆ.
ಮಾತ್ರವಲ್ಲ, ಅರ್ಜಿ ಸಲ್ಲಿಸಿದ ವಕೀಲ ನಿಜವಾಗಿಯೂ ನೋಂದಾಯಿತ ವಕೀಲನೇ ಎನ್ನುವ ಬಗ್ಗೆ ಆತನ ನೋಂದಣಿ ಪತ್ರದ ನೈಜತೆ ಪರಿಶೀಲಿಸುವಂತೆ ತಮಿಳುನಾಡು ಮತ್ತು ಪುಚುಚೇರಿ ವಕೀಲರ ಪರಿಷತ್ತಿಗೆ ನಿರ್ದೇಶನ ನೀಡಿದೆ.
Madras High Court ವಕೀಲ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್ನ ನ್ಯಾ. ಬಿ. ಪುಗುಳೇಂದಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರ ವಕೀಲರಿಗೆ ರೂ. 10,900/- ದಂಡ ವಿಧಿಸಿದೆ. ಈತ ವಕೀಲ ಸಮುದಾಯದ ಖ್ಯಾತಿಗೆ ಮಸಿ ಬಳೆಯುತ್ತಿದ್ದಾನೆ. ಈತನ ಬಗ್ಗೆ ಗಮನಹರಿಸಲು ವಕೀಲರ ಪರಿಷತ್ತಿಗೆ ಇದು ಸಕಾಲ ಎ೦ದು ಹೇಳಿರುವ ನ್ಯಾಯಪೀಠ, ಅಧಿಕೃತ ಕಾಲೇಜುಗಳಿಂದ ಶಿಕ್ಷಣ ಮುಗಿಸಿದ ಪದವೀಧರರನ್ನು ಮಾತ್ರ ನೋಂದಣಿ ಮಾಡಿಕೊಳ್ಳಬೇಕು ಎಂದು ನ್ಯಾಯಪೀಠ ಸಲಹೆ ನೀಡಿದೆ.
ತಾನು ಫ್ರೆಂಡ್ಸ್ ಫಾರ್ ಎವರ್ ಎ೦ಬ ಟ್ರಸ್ಟ್ ಸ್ಥಾಪಿಸಿದ್ದೇನೆ. ಈ ಟ್ರಸ್ಟ್ ನ ಮುಖ್ಯ ಉದ್ದೇಶ ತನ್ನ ಸದಸ್ಯರು ಮತ್ತು ಗ್ರಾಹಕರಿಗೆ ತೈಲ ಅಭ್ಯ೦ಜನ ಮತ್ತು ಇತರ ಲೈಂಗಿಕ ಸೇವೆಯ೦ತ ವಯಸ್ಕರ ಮನರ೦ಜನೆ ಚಟುವಟಿಕೆಗಳನ್ನು ನಡೆಸುವುದಾಗಿದೆ ಎಂದು ಅರ್ಜಿದಾರ ವಕೀಲ ರಾಜಾ ಮುರುಗನ್ ಹೇಳಿಕೊಂಡಿದ್ದ.