Madhu Bangarappa ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಇಂದು ಗಾಜನೂರಿನ ತುಂಗಾ ಜಲಾಶಯಕ್ಕೆ ತೆರಳಿ ತುಂಬಿದ ತುಂಗಾನದಿಗೆ ಬಾಗಿನ ಸಮರ್ಪಿಸಿದರು.
ಗಾಜನೂರಿನ ತುಂಗಾ ಜಲಾಶಯ ವೀಕ್ಷಣೆ ಮಾಡಿ ಅಧಿಕಾರಿಗಳೊಂದಿಗೆ ಆಣೆಕಟ್ಟಿನ ಸಾಮರ್ಥ್ಯ ಹಾಗು ನೀರಿನ ಒಳ ಮತ್ತು ಹೊರ ಹರಿವಿನ ಬಗ್ಗೆ ಮಾಹಿತಿ ಪಡೆದರು.
Madhu Bangarappa ರಾಜ್ಯದ ಎಲ್ಲೆಡೆ ಮಳೆ ಪ್ರಮಾಣ ಹೆಚ್ಚಾಗಿದ್ದು ಎಲ್ಲಾ ಆಣೆಕಟ್ಟುಗಳು ತುಂಬಿದೆ ತುಂಗಾ ನದಿ ಪ್ರದೇಶದಲ್ಲಿ ಮಲೆನಾಡ ಭಾಗದಲ್ಲಿ ಮಳೆ ಅಧಿಕವಾಗಿದ್ದು ತುಂಗಾ ಜಲಾಶಯ ಭರ್ತಿಯಾಗಿರುವುದಕ್ಕೆ ಸಚಿವರು ಸಂತೋಷ ವ್ಯಕ್ತಪಡಿಸಿದ್ದಾರೆ.