Kannada Sahitya Parishath ಹೊಸನಗರ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೌಡಕೊಪ್ಪದ ಶಿಕ್ಷಕಿ, ಕವಯಿತ್ರಿ ಅಂಬಿಕಾ ಸಂತೋಷ(ಅಂಸ)ರಿಗೆ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಲಭಿಸಿದೆ. ಶಿಕ್ಷಕಿ, ಕವಯಿತ್ರಿ ಅಂಸ ರಿಗೆ ಸಾಧಕಿಯರ ಸಾಲಲ್ಲಿ ರಾಷ್ಟ್ರ ಕವಿ ಕುವೆಂಪು ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಭವನದ ಅಕ್ಕಮಹಾದೇವಿ ಸಭಾಂಗಣದಲ್ಲಿ ಅಕ್ಷರನಾದ ಪ್ರತಿಷ್ಠಾನ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಸವಿ ನೆನಪಿನಲ್ಲಿ ನಡೆದ ಕವಿನುಡಿ ಸಂಭ್ರಮೋತ್ಸವ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
Kannada Sahitya Parishath ಅಕ್ಷರನಾದ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕರಾದ ಡಾ. ಶ್ರುತಿ ಮಧುಸೂದನ್ (ರುದ್ರಾಗ್ನಿ) ಹಾಗೂ ಪದಾಧಿಕಾರಿಗಳು ಸಾಹಿತಿ ಅಂಬಿಕಾ ಸಂತೋಷ್ (ಅಂಸ) ಅವರಿಗೆ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಿದರು.