Wednesday, February 4, 2026
Wednesday, February 4, 2026

Kudali Sringeri Mahasamsthana mutt ನವೆಂಬರ್ 15 ವರೆಗೆ ಕೂಡಲಿ ಮಠದಲ್ಲಿ ಶ್ರೀ ಅಭಿನವ ಶಂಕರ ಭಾರತಿ ಸ್ವಾಮೀಜಿ ಚಾತುರ್ಮಾಸ ವ್ರತ

Date:

Kudali Sringeri Mahasamsthana mutt ಕೂಡಲಿ ಶೃಂಗೇರಿ ಮಹಾಸಂಸ್ಥಾನ ಪೀಠದ ೭೨ನೇ ಪೀಠಾಧಿಪತಿ ಜಗದ್ಗುರು ಅಭಿನವ ಶಂಕರ ಭಾರತಿ ಸ್ವಾಮೀಜಿ ಅವರ ದ್ವೀತಿಯ ಚಾತುರ್ಮಾಸ್ಯ ವ್ರತ ಆಷಾಢ ಹುಣ್ಣಿಮೆಯಿಂದ ಕಾರ್ತೀಕ ಹುಣ್ಣಿಮೆಯವರೆಗೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಈಗಾಗಲೇ ಜು.೨೧ ರಿಂದ ವ್ರತ ಆರಂಭಗೊಂಡಿದ್ದು, ನವೆಂಬರ್ ೧೫ ರವರೆಗೆ ಕೂಡಲಿಯ ಶ್ರೀಕ್ಷೇತ್ರ ಮೂಲ ಮಠದಲ್ಲಿ ವ್ರತ ನಡೆಯಲಿದೆ. ಪ್ರತಿ ದಿನ ಬೆಳಿಗ್ಗೆ ೭ ಗಂಟೆಯಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಶಾರದಾಂಬೆಗೆ ವಿಶೇಷ ಆಭೀಷೇಕ ಹಾಗೂ ಕುಂಕುಮಾರ್ಚನೆ, ಮಠದಲ್ಲಿರುವ ಎಲ್ಲಾ ಅಧಿಷ್ಠಾನ ವೇದಿಕೆಗೆ ವಿಶೇಷ ಪೂಜೆ, ಸಾರ್ವಜನಿಕರಿಗೆ ಜಗದ್ಗುರುಗಳ ದರ್ಶನ ಹಾಗೂ ವಿದ್ವಾಂಸರಿಂದ ಘನಪಾರಾಯಣ, ಚಂದ್ರಮೌಳೇಶ್ವರ ಹಾಗೂ ವಿದ್ಯಾಶಂಕರಾದಿ ಸಂಸ್ಥಾನದ ಮೂಲದೇವರುಗಳ ಪೂಜೆ, ಮಧ್ಯಾಹ್ನ ೧.೩೦ಕ್ಕೆ
Kudali Sringeri Mahasamsthana mutt ಘನಪಾರಾಯಣ ವಿರಾಮ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ ೪ ಗಂಟೆಯಿಂದ ಸಾರ್ವಜನಿಕರಿಗೆ ಜಗದ್ಗುರುಗಳಿಂದ ಪ್ರವಚನ ಹಾಗೂ ದರ್ಶನ, ವಿದ್ವಾಂಸರಿಂದ ಘನಪಾರಾಯಣ ಹಾಗೂ ಶಾರದಾಂಬೆಯ ಸನ್ನಿದಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ರಾತ್ರಿ ೮ ಗಂಟೆಗೆ ಘನಪಾರಾಯಣ ವಿರಾಮ ಹಾಗೂ ಮಹಾಮಂಗಳಾರತಿ ಜರುಗಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...