Thursday, October 3, 2024
Thursday, October 3, 2024

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕದ ಕನಸು ಭಗ್ನ

Date:

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯವು ಕರ್ನಾಟಕ ಮತ್ತು ತಮಿಳುನಾಡು ತಂಡಗಳ ನಡುವೆ ನಡೆಯಿತು. ಕರ್ನಾಟಕದ ವಿರುದ್ಧ ತಮಿಳುನಾಡು ಭರ್ಜರಿ ಜಯ ಸಾಧಿಸಿತು. ಈ ಮೂಲಕ ಕರ್ನಾಟಕ ತಂಡದ ವಿಜಯ್ ಹಜಾರೆ ಟ್ರೋಫಿ ಗಳಿಸುವ ಕನಸು ನುಚ್ಚುನೂರಾಯಿತು.
K.L ಸೈನಿ ಮೈದಾನದಲ್ಲಿ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು,
ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 354 ರನ್ ಗಳಿಸಿತು.
6 ನೇ ಓವರ್ ನಲ್ಲಿ ಬಾಬಾ ಅಪರಾಜಿತ್ ವಿಕೆಟ್ ಗಳಿಸಿದ ವೈಶಾಖ ವಿಜಯ್ ಕುಮಾರ್ ಉತ್ತಮ ಆರಂಭ ಒದಗಿಸಿದರು. ಜಗದೀಶನ್ ಜೊತೆಯಾಟದಲ್ಲಿ 147 ರನ್ ತಂಡಕ್ಕೆ ಸೇರಿಸಿದರು. 29ನೇ ಓವರ್ ನವರೆಗೂ ಕರ್ನಾಟಕದ ಬೌಲರ್ ಗಳು ವಿಕೆಟ್ ಲಭಿಸದೆ ಪರದಾಡಿದರು. .
ನಂತರ ಬಂದ ಶಾರೂಕ್ ಖಾನ್ ಎಂದಿನಂತೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು, (ಅಜೇಯ 79 ರನ್) ‘ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯ ಫೈನಲ್’ ನಲ್ಲಿ ತಮಿಳುನಾಡು ಗೆಲುವಿಗೆ ಕಾರಣರಾಗಿದ್ದ ಖಾನ್, ಇಲ್ಲಿಯೂ ಕೂಡ ಇದೇ ರೀತಿ ಆಟವಾಡಿ ಕರ್ನಾಟಕವನ್ನು ಎದೆಗುಂದುವಂತೆ ಮಾಡಿದರು,6 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಸಿಡಿಸಿ ತಂಡದ ಮತ್ತು 350 ರನ್ ದಾಟಲು ಕಾರಣರಾದರು.
ಖಾನ್ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ತಮಿಳುನಾಡು ತಂಡ 355 ರನ್ ಗಳ ಗುರಿಯನ್ನ ಕರ್ನಾಟಕ ತಂಡಕ್ಕೆ ಸವಾಲಾಗಿ ನೀಡಿತು
ಬೃಹತ್ ಗುರಿಯನ್ನು ಬೆನ್ನತ್ತಿ ಆಡಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕರ್ನಾಟಕ 39 ಓವರ್ ಗಳಲ್ಲಿ ಆಲ್-ಔಟ್ ಆಗಿ 203 ರನ್ ಗಳಿಸಿಕೊಂಡಿತು.
ಮನೀಷ್ ಪಾಂಡೆ (8 ಎಸೆತಗಳಲ್ಲಿ 9 ರನ್) ದೊಡ್ಡ ಮೊತ್ತದ ಇನ್ನಿಂಗ್ಸ್ ಕಟ್ಟದಂತೆ ತಮಿಳುನಾಡಿನ ಬೌಲರ್ M. ಸಿದ್ದಾರ್ಥ್ ನೋಡಿಕೊಂಡರು. ಇದು ತಂಡಕ್ಕೆ ಬಹಳ ದೊಡ್ಡ ಪೆಟ್ಟಾಯಿತು, ಮಧ್ಯಮ ಕ್ರಮಾಂಕದಲ್ಲಿ ಅಭಿನವ್ ಮನೋಹರ್ ಮತ್ತು ಶ್ರೀನಿವಾಸ್ ಶರತ್ ಅವರು ಹೋರಾಟ ಮಾಡಿದರು. ತಂಡವನ್ನು ಜಯದತ್ತ ಮುನ್ನಡೆಸುವಲ್ಲಿ ವಿಫಲರಾದರು.
ದೇವದತ್ತ ಪಡಿಕ್ಕಲ್ ಖಾತೆ ತೆರೆಯದೇ ಮರಳಿದರು, ರೋಹನ್ ಕದಂ (24) ಮತ್ತು K.V ಸಿದ್ದಾರ್ಥ್ (29) ಎರಡನೇ ವಿಕೆಟ್ ಗೆ 59 ರನ್ ಸೇರಿಸಿದರು. ಸಿಲಂಬರಸನ್ ಬೌಲಿಂಗ್ ನಲ್ಲಿ ರೋಹನ್ ಔಟಾದರೆ, ಸಾಯಿ ಕಿಶೋರ್ ಎಸೆತದಲ್ಲಿ ಸಿದ್ದಾರ್ಥ್ ಪೆವಿಲಿಯನ್ ಗೆ ಮರಳಿದರು.
ಕರ್ನಾಟಕ ತಂಡ ಸಾಮರ್ಥ್ಯವಿದ್ದರೂ
ಟ್ರೋಫಿ ಗೆಲ್ಲಲು “ಸೆಮಿ” ಹಂತ ತಲುಪದೇ ಕೈಚೆಲ್ಲಿದ್ದು ಕ್ರಿಕೆಟ್ ಪ್ರಿಯರಿಗೆ ನಿರಾಸೆ ಮೂಡಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...