Karnataka Sangha Shivamogga ದಿನಾಂಕ 20 ಜುಲೈ 2024ರ ಶನಿವಾರ, ಸಂಜೆ 5:30ಕ್ಕೆ ಕರ್ನಾಟಕ ಸಂಘ ಭವನದಲ್ಲಿ ಅಧ್ಯಕ್ಷರಾದ ಶ್ರೀ ಎಂ.ಎನ್. ಸುಂದರ ರಾಜ್ರವರ ಅಧ್ಯಕ್ಷತೆಯಲ್ಲಿ ಖ್ಯಾತ ಸರೋದ್ ವಾದಕರಾದ ದಿವಂಗತ ಶ್ರೀ ರಾಜೀವ್ ತಾರಾನಾಥ್, ಖ್ಯಾತ ಇತಿಹಾಸ ತಜ್ಞರಾದ ದಿವಂಗತ ಡಾ. ಗುಂಡಾ ಜೋಯಿಸ್ ಮತ್ತು ಖ್ಯಾತ ಸಾಹಿತಿಗಳಾದ ದಿವಂಗತ ಡಾ. ಕಮಲಾ ಹಂಪನಾರವರ ಕುರಿತು ‘ಸಂಸ್ಮರಣೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶಿವಮೊಗ್ಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಟಿ.ವಿ. ಹೆಗಡೆ, ನಗರದ ಇತಿಹಾಸ ತಜ್ಞರಾದ ಶ್ರೀ ಅಂಬ್ರಯ್ಯ ಮಠ, ತೀರ್ಥಹಳ್ಳಿಯ ಕವಯತ್ರಿ ಹಾಗೂ ಸಾಹಿತಿಗಳಾದ ಡಾ. ಎಲ್.ಸಿ. ಸುಮಿತ್ರಾ ರವರು ನುಡಿನಮನ ಸಲ್ಲಿಸಲಿದ್ದಾರೆ.
ಆಸಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕೆಂದು ಈ ಮೂಲಕ ವಿನಂತಿಸಲಾಗಿದೆ.