Tuesday, October 1, 2024
Tuesday, October 1, 2024

Karnataka Farmers Association ಬ್ಯಾಂಕ್ ಗಳು ಬರಗಾಲ ಪರಿಹಾರ ಹಣವನ್ನ ಖಾತೆದಾರರ ಸಾಲಕ್ಕೆ ಜಮಾ ಮಾಡಬಾರದು-ಎಚ್.ಆರ್.ಬಸವರಾಜಪ್ಪ

Date:

Karnataka Farmers Association ಸಮರ್ಪಕ ಬರಗಾಲ ಪರಿಹಾರ ವಿತರಣೆಯಾಗಬೇಕು. ಬೆಳೆ ವಿಮೆ ಹಣವನ್ನು ರೈತರಿಗೆ ತಕ್ಷಣವೇ ನೀಡಬೇಕು. ಬ್ಯಾಂಕ್‌ಗಳು ವಿವಿಧ ಯೋಜನೆಗಳಿಂದ ಬಂದ ಹಣವನ್ನು ಸಾಲಕ್ಕೆ ಜಮಾ ಮಾಡಬಾರದು. ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಹೆಚ್ಚುವರಿ ದರಕ್ಕೆ ಮಾರಾಟ ಮಾಡುತ್ತಿರುವವರ ವಿರುದ್ದ ಕ್ರಮ ಜರುಗಿಸಬೇಕೆಂದು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖ್ಯಮಂತ್ರಿ ಅವರನ್ನು ಆಗ್ರಹಿಸಿದೆ.

ಪತ್ರಿಕಾಭವನದಲ್ಲಿ ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್ ಆರ್ ಬಸವರಾಜಪ್ಪ, ತಮ್ಮ ಸರ್ಕಾರ ಕೇಂದ್ರ ಸರ್ಕಾರ ವಿಪತ್ತು ಮಾರ್ಗಸೂಚಿಯ ಪ್ರಕಾರ ಬಿಡುಗಡೆ ಮಾಡಿದ ಹಣವನ್ನಷ್ಟೇ ರೈತರಿಗೆ ಕೊಡುತ್ತಿದೆ. ಹಿಂದಿನ ಸರ್ಕಾರ ರಾಜ್ಯ ವಿಪತ್ತು ನಿಧಿಯಿಂದ ಸೇರಿಸಿ ಕ್ರಮವಾಗಿ ಒಂದು ಹೆಕ್ಟರ್‌ಗೆ ಒಣಭೂಮಿಗೆ ಕೇಂದ್ರ 8,500 ಜೊತೆಗೆ ರಾಜ್ಯ 4,500 ಸೇರಿಸಿ ಒಟ್ಟು 13,000 ರೂ. ತರಿ ಜಮೀನಿಗೆ ಕೇಂದ್ರ 13,000 ಜೊತೆಗೆ ರಾಜ್ಯ 5,000 ಸೇರಿಸಿ ಒಟ್ಟು 18,000 ರೂ.ತೋಟದ ಬೆಳೆಗಳಿಗೆ ಕೇಂದ್ರ 18,000 ಜೊತೆಗೆ ರಾಜ್ಯ 5000 ಸೇರಿಸಿ ಒಟ್ಟು 23000 ರೂ. ಕೊಡಲಾಗಿತ್ತು.

ತಾವು ಸಹ ರಾಜ್ಯ ವಿಪತ್ತು ನಿಧಿಯಿಂದ ಹಣ ಬಿಡುಗಡೆ ಮಾಡಿ ರೈತರಿಗೆ ನೀಡಬೇಕು. ಕನಿಷ್ಟ ಎಕರೆಗೆ 25, 000ರೂ.ಗಳನ್ನು ರೈತರಿಗೆ ಪರಿಹಾರವಾಗಿ ನೀಡಬೇಕು ಎಂದು ಒತ್ತಾಯಿಸಿದರು.
ಬೆಳೆ ವಿಮೆ ಹಣ ಇನ್ನೂ ಕೆಲವು ರೈತರಿಗೆ ಸಿಕ್ಕಿಲ್ಲ. ಆದ್ದರಿಂದ ಪ್ರತಿಯೊಬ್ಬರಿಗೂ ಬೆಳೆ ವಿಮೆ ಹಣ ತಲುಪುವಂತಾಗಬೇಕು. ಸರ್ಕಾರ ಕೊಟ್ಟಂತ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳಬಾರದೆಂದು ಸರ್ಕಾರ ಆದೇಶ ಲಕ್ಕೆ ಜಮಾ ಮಾಡಿಕೊಳ್ಳುತ್ತಿದ್ದಾರೆ.

ಆದ್ದರಿಂದ ಜಮಾ ಮಾಡಿಕೊಳ್ಳದಂತೆ ಸೂಚನೆ ನೀಡಿದಾಗ್ಯೂ, ಆದೇಶವನ್ನು ನಿರ್ಲಕ್ಷಿಸಿ ಸರ್ಕಾರದ ಯೋಜನೆಗಳನ್ನು ಭಗ್ನಗೊಳಿಸಿ ತುಂಬಿಸಿಕೊಳ್ಳುತ್ತಿದ್ದಾರೆ ಎಂದರು.

Karnataka Farmers Association ದೀರ್ಘಾವಧಿ ಹೊಸದಾಗಿ ಸಾಲ ಕೊಡಲು ನಿರ್ದೇಶನ ನೀಡಬೇಕು.ಐಪಿ ಸೆಟ್‌ಗಳಿಗೆ ರೈತರೇ ಸ್ವಯಂ ವೆಚ್ಚ ಯೋಜನೆಯಡಿ ವಿದ್ಯುತ್ ಸಂಪರ್ಕ ಪಡೆಯುವ ಆದೇಶವನ್ನು ರದ್ದುಮಾಡಬೇಕು. ಐ.ಪಿ ಸೆಟ್‌ಗಳಿಗೆ ವಿದ್ಯುತ್ ಚ್ಚಕ್ತಿ ಪಡೆಯಲು ಸ್ವಯಂ ಆರ್ಥಿಕ ಯೋಜನೆ ಜಾರಿ ಮಾಡಲಾಗಿದೆ. 1 ಎಕರೆ ಇರುವಂತ ರೈತ ವಿದ್ಯುತ್ ಸಂಪರ್ಕ ಪಡೆಯಲು 3 ಲಕ್ಷ ಹಣ ಖರ್ಚು ಮಾಡಬೇಕಾಗುತ್ತದೆ. ಈ ಆದೇಶ ಸಣ್ಣ ಮತ್ತು ಅತೀಸಣ್ಣ ರೈತರಿಗೆ ಮರಣ ಶಾಸನವಾಗಿದೆ. ಆದ್ದರಿಂದ ಈ ಆದೇಶವನ್ನು ಹಿಂಪಡೆದು ಮೊದಲಿನಂತೆ ಮ-ಸಕ್ರಮ ಯೋಜನೆಯಡಿ 20 ಸಾವಿರ ಹಣವನ್ನು ಕಟ್ಟಿಸಿಕೊಂಡು ಆರ್.ಆರ್ ನಂಬರ್‌ಗಳನ್ನು ಕೊಟ್ಟು ತ್ ಸಂಪರ್ಕ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...