Thursday, September 17, 2026
Thursday, September 17, 2026

Soraba Police ಅಡಿಕೆ ಕದ್ದು ಪರಾರಿಯಾಗುತ್ತಿದ್ದ ಕಳ್ಳನ ಬಂಧನ

Date:

Soraba Police ಮೂಡುಗೋಡುನಲ್ಲಿ ಅಡಿಕೆ ಕದ್ದು ಪರಾರಿಯಾಗಿದ್ದವನನ್ನು ಸೊರಬ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 4.70ಲಕ್ಷ ರೂ. ನಗದು, ಕಳ್ಳತನಕ್ಕೆ ಉಪಯೋಗಿಸಿದ್ದ 8ಲಕ್ಷ ರೂ. ಮೌಲ್ಯದ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಮೂಡುಗೋಡುವಿನ ಜಯಕುಮಾರ್ ತಮ್ಮ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆ, ಗೇರುಬೀಜ ಕಳ್ಳತನವಾಗಿರುವ ಕುರಿತು ಮೇ 10ರಂದು ದೂರು ದಾಖಲಿಸಿದ್ದರು.

Soraba Police ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಮಾವಲಿ ಗ್ರಾಮಸಮೀಪ ಶಿಕಾರಿಪುರದ ಜಕ್ಕನಹಳ್ಳಿ ನಿವಾಸಿ ನಂದೀಶ್ ಎಂಬಾತನನ್ನು ಬಂಧಿಸಿದ್ದಾರೆ.ಪ್ರಕರಣದಲ್ಲಿ ಭಾಗಿಯಾದ ಉಳಿದ ನಾಲ್ವರು ತಲೆಮರೆಸಿಕೊಂಡಿದ್ದಾರೆ.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಕುಮಾರ್ ಭೂಮರೆಡ್ಡಿ, ಎಎಸ್ಪಿ ಎ.ಜಿ.ಕಾರಿಯಪ್ಪ, ಡಿವೈಎಸ್ಪಿ ಕೆ.ಇ.ಕೇಶವ ಮಾರ್ಗದರ್ಶನಲ್ಲಿ ಸೊರಬ ಸಿಪಿಐ ರಮೇಶ್ ರಾವ್, ಪಿಎಸ್ಐ ಎಚ್.ಎನ್.ನಾಗರಾಜ್, ಎಎಸ್ಐಗಳಾದ ಲಿಂಗರಾಜ, ಪ್ರಭಾಕರ, ಹೆಚ್ಪಿಸಿಗಳಾದ ರಾಜುನಾಯ್ಕ್, ನಾಗರಾಜ, ಅಶೋಕ, ನಾಗೇಶ್, ಕಾನ್ಸ್ಟೇಬಲ್ಗಳಾದ ಕೆ.ಎನ್.ಲೋಕೇಶ್, ರಾಘವೇಂದ್ರ, ವಿನಯ, ಮಲ್ಲೇಶ್, ವಿಶ್ವನಾಥ, ಶಶೀಧರ, ಉಮೇಶ ಪರಸಪ್ಪ, ಸುನೀಲ್, ಸಂದೀಪ್, ಲೋಕೇಶ್, ಆನವಟ್ಟಿ ಠಾಣೆಯ ಆರ್.ಸಿ. ಮಂಜುನಾಥ, ಶಿವಮೊಗ್ಗ ಸಿಡಿಆರ್ ಸೆಲ್ನ ವಿಜಯಕುಮಾರ್, ಇಂದ್ರೇಶ್ ತಂಡ ಪ್ರಕರಣವನ್ನು ಭೇದಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...