ಏಷ್ಯಾನ್ ಚಾಂಪಿಯನ್ಸ್ ಟ್ರೋಫಿ “ಹಾಕಿ” ಟೂರ್ನಿಯ ಪಂದ್ಯಾವಳಿ ಭಾರತ ಮತ್ತು ಜಪಾನ್ ತಂಡಗಳ ನಡುವೆ ನಡೆಯಿತು.
‘ಮೌಲಾನಾ ಭಸಾನಿ’ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‘ರೌಂಡ್ ರಾಬಿನ್’ ಕೊನೆಯ ಪಂದ್ಯದಲ್ಲಿ ‘ಮನ್ ಪ್ರೀತ್ ಸಿಂಗ್’ ಬಳಗದ ಪರ ಹರ್ಮನ್ ಪ್ರೀತ್ 10 ಮತ್ತು 53 ನೇ ನಿಮಿಷ ಗೋಲ್ ದಾಟಿಸಿದರು.
ಟೂರ್ನಿಯಲ್ಲಿ ಭಾರತಕ್ಕೆ ಇದು ಮೂರನೇ ಜಯ. ಪಂದ್ಯದ ಎಲ್ಲಾ ವಿಭಾಗಗಳನ್ನು ಭಾರತ “ಪಾರಮ್ಯ”ಮೆರೆಯಿತು. ಮೊದಲ 6 ನಿಮಿಷಗಳೊಳಗೆ ತಂಡಕ್ಕೆ 2 ‘ಪೆನಾಲ್ಟಿ ಕಾರ್ನರ್’ ಅವಕಾಶಗಳು ದೊರೆಯಿತು. ಆದರೆ ಗೋಲ್ ನಲ್ಲಿ ಪರಿವರ್ತಿಸುವಲ್ಲಿ ಸಾಧ್ಯವಾಗಲಿಲ್ಲ, ಬಳಿಕ ಜಪಾನ್ ಗೆ ದೊರೆತ ‘ಪೆನಾಲ್ಟಿ ‘ ಅವಕಾಶಗಳು ಗೋಲ್ ಆಗಲಿಲ್ಲ.
36 ನೇ ನಿಮಿಷದಲ್ಲಿ ಜಪಾನ್ ಗೆ ದೊರೆತ ಪೆನಾಲ್ಟಿ ಅವಕಾಶವನ್ನು ಭಾರತದ ಗೋಲ್-ಕೀಪರ್ “ಸೂರಜ್ ಕರ್ಕೇರಾ” ಅಡ್ಡಿ ಪಡಿಸಿದರು. ಮೊದಲ ನಿಮಿಷದಲ್ಲಿ ಸುಮಿತ್ ತಂಡದ ಮುನ್ನಡೆಯನ್ನು (4-0) ಗೆ ಹೆಚ್ಚಿಸಿದರು. ಬಳಿಕ ಹರ್ಮನ್ ಪ್ರೀತ್ ಮತ್ತು ಜಂಷೇರ ಸಿಂಗ್ ಜಪಾನ್ ಕೋಟೆಯನ್ನು ಭೇದಿಸಿದರು.
ಆಕ್ರಮಣ ಮುಂದುವರೆಸಿದ ಭಾರತಕ್ಕೆ ಸಿಕ್ಕ ಮತ್ತೊಂದು ‘ಪೆನಾಲ್ಟಿ’ ಅವಕಾಶದಲ್ಲಿ ಹಾರ್ದಿಕ್ ಸಿಂಗ್ ನೀಡಿದ ಪಾಸ್ ನಲ್ಲಿ ಹರ್ಮನ್ ಪ್ರೀತ್ ಸೊಗಸಾದ ಗೋಲು ದಾಖಲಿಸಿ ಮುನ್ನಡೆ ತಂದುಕೊಟ್ಟರು. ಜರ್ಮನ್ ಪ್ರೀತ್ ಮಾಡಿದ “ಕ್ಲೀನ್ – ಸ್ಟ್ರೈಕ್” ಭಾರತಕ್ಕೆ ಮೂರನೇ ಗೋಲು ತಂದುಕೊಟ್ಟರು.
ಉಪನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತೊಮ್ಮೆ ಕೈ ಚಳಕ ತೋರಿ ಅವರು ಗಳಿಸಿದ 2 ಗೋಲುಗಳ ನೆರವಿನಿಂದ ಭಾರತ ತಂಡವು “ಏಷ್ಯಾ ಚಾಂಪಿಯನ್ಸ್ ಟ್ರೋಫಿಯ ಹಾಕಿ ಟೂರ್ನಿಯ” ಪಂದ್ಯದಲ್ಲಿ ಜಪಾನ್ ಗೆ (6-0) ಯಿಂದ ಸೋಲಿಸಿತು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.