Monday, February 2, 2026
Monday, February 2, 2026

Bharat Scouts and Guides ಭಾರತ್ ಸ್ಕೌಟ್ಸ್& ಗೈಡ್ಸ್ ಜಿಲ್ಲೆ ಮತ್ತು ಸ್ಥಳೀಯ ಸಮಿತಿ ಪದಾಧಿಕಾರಿಗಳ ಸಭೆ

Date:

Bharat Scouts and Guide ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ಜಿಲ್ಲಾ ಸಂಸ್ಥೆಯಲ್ಲಿ ಇಂದು ಪದಾಧಿಕಾರಿಗಳ, ಜಿಲ್ಲಾ ಸಹಾಯಕ ಆಯುಕ್ತರುಗಳ, ತರಬೇತಿ ನಾಯಕರುಗಳ ಹಾಗೂ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳ ವಿಶೇಷ ಸಭೆಯನ್ನು ಜಿಲ್ಲಾ ಸ್ಕೌಟ್ ಭವನ ಶಿವಮೊಗ್ಗದಲ್ಲಿ ಹಮ್ಮೀಕೊಳ್ಳಲಾಗಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ನೂತನ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಕೆ.ಪಿ.ಬಿಂದುಕುಮಾರ ರವರು ವಹಿಸಿ ೨೦೨೪-೨೫ನೇ ಸಾಲಿನ ಮೊದಲ ಸಭೆ ಇದಾಗಿದ್ದು ಅಲ್ಲದೆ ನಾನು ಜಿಲ್ಲಾ ಮುಖ್ಯ ಆಯುಕ್ತರನ್ನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಸಭೆ ಆಗಿದ್ದು ತಾವೆಲ್ಲರೂ ಬಂದಿದ್ದಿರಾ ಇಲ್ಲಿಯವರೆಗೆ ತಾವೆಲ್ಲರೂ ಸಹಾಯ ಸಹಕಾರಿ ನೀಡಿದ್ದಿರಿ ಅದೆ ರೀತಿ ನನ್ನ ಅಧಿಕಾರಾವಧಿಯಲ್ಲೂ ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕಾರ ಬೇಕಾಗಿದೆ ಮಕ್ಕಳ ಹಾಗೂ ವಯಸ್ಕನಾಯಕರ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಸೋಣ ಅಲ್ಲದೆ ಪ್ರತಿಯೊಂದು ಶಾಲೆಯಲ್ಲಿ ಸ್ಕೌಟ್ ಗೈಡ್ ಮಕ್ಕಳು ಇರುವಂತೆ ಶ್ರಮವಹಿಸುವ ಎಂದು ಮಾತನಾಡಿದರು.

Bharat Scouts and Guides ಶಿಕಾರಿಪುರ ಎಡಿಸಿ ವೇಣುಗೋಪಾಲ ರವರು ನೂತನ ಜಿಲ್ಲಾ ಮುಖ್ಯ ಆಯುಕ್ತರಿಗೆ ಶಾಲು ಹೊದಿಸಿ ಹೂಗುಚ್ಚ ಕೊಟ್ಟು ಸನ್ಮಾನಿಸಿದರು. ಸಭೆಗೆ ಸ್ವಾಗತವನ್ನು ಜಿಲ್ಲಾ ಕಾರ್ಯದರ್ಶಿ ಹೆಚ್.ಪರಮೇಶ್ವರ ರವರು ನೇರವೇರಿಸಿದರು. ಮುಂದಿನ ದಿನಗಳಲ್ಲಿ ನಡೆಯುವ ಹಾಗೂ ನಡೆಸಬೇಕಾಗಿರುವ ಕಾರ್ಯಕ್ರಮದ ಬಗ್ಗೆ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭಾರತಿ ಡಾಯಸ್ ರವರು ವಿವರಿಸಿ ಸಭೆಯ ನಿರೂಪಣೆಯನ್ನು ನಿರ್ವಹಿಸಿದರು. ವಂದನೆಯನ್ನು ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತ(ಸಾರ್ವಜನಿಕ ಸಂಪರ್ಕ) ಶ್ರೀ ವಿಜಯಕುಮಾರ ರವರು ನೇರವೇರಿಸಿದರು.ಈ ಕಾರ್ಯಕ್ರಮಕ್ಕೆ ಜಿಲ್ಲಾ ಗೈಡ್ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್, ಜಿಲ್ಲಾ ಜಂಟಿ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಲಕ್ಷಿ ರವಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರು ಭಾರತಿ ಡಾಯಸ, ಕೇಂದ್ರ ಸ್ಥಾನಿಕ ಆಯುಕ್ತರುಗಳಾದ ಕೆ.ರವಿ, ಎಡಿಸಿಗಳಾದ ನಾರಾಯಣ, ಮಲ್ಲಿಕಾರ್ಜುನ ಕಾನೂರು, ಆನಂದ, ವೆಂಕಟಾಚಲ ಶಾಸ್ತಿç, ಡಿಟಿಸಿ ಶ್ರೀ ಹೆಚ್. ಶಿವಶಂಕರ್, ಎಲ್.ಟಿ ಗಣಪತಿ, ಎಲ್.ಎ ಕಾರ್ಯಾದರ್ಶಿಗಳಾದ ಶ್ರೀ ರಾಜೇಶ ಅವಲಕ್ಕಿ, ಶೇಖರಪ್ಪ, ಹರೀಶ, ವೇಂಕಟೇಶ ರವರು ಹಾಗೂ ಜಿಲ್ಲೆಯ ಪ್ರೀ-ಎ.ಎಲ್.ಟಿಗಳು, ಹಿಮಾಲಯ ವೃಕ್ಷಮಣಿಧಾರಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...