Friday, June 19, 2026
Friday, June 19, 2026

KSRTC ಸೈಡ್ ಕೊಡದ ನೆಪ ಹೇಳಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಕೇರಳದ ಕಾರ್ ಪ್ರಯಾಣಿಕರು

Date:

KSRTC ಆಗುಂಬೆ ಘಾಟಿ, ಸೋಮೇಶ್ವರದಲ್ಲಿ ಮತ್ತು ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಉಡುಪಿ ಜಿಲ್ಲೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದಿಂದ ಉಡುಪಿಗೆ ಆಗುಂಬೆ ಮಾರ್ಗವಾಗಿ ಬಸ್ಸು ತೆರಳುತ್ತಿತ್ತು. ಘಾಟಿಯ ಆರನೇ ತಿರುವು ಮತ್ತು ಏಳನೆ ತಿರುವಿನಲ್ಲಿ ಹಿಂಬದಿಯಿಂದ ಬಂದ ಕಾರೊಂದು ನಿರಂತರ ಹಾರನ್‌ ಮಾಡಿದೆ. ಸೋಮೇಶ್ವರ ಸಮೀಪ ಬಸ್ಸನ್ನು ಹಿಂದಿಕ್ಕಿದ ಕೇರಳ ನೋಂದಣಿಯ ಕಾರಿನಿಂದ ಕೆಳಗಿಳಿದ ಉಡುಪಿಯ ಜುನೈದ್‌ ಮೊಹಮ್ಮದ್‌, ಕೇರಳದ ಕಾಸರಗೋಡಿನ ಅಬೂಬಕರ್‌ ಅರ್ಶೋಕ್‌, ರಿಜಾಖಾನ್‌ ಶೀಲ್‌ ಎಂಬುವವರು ಬಸ್‌ ಚಾಲಕನನ್ನು ಬಸ್ಸಿನಿಂದ ಕೆಳಗೆಳೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
KSRTC ಕೆಎಸ್‌ಆರ್‌ಟಿಸಿ ಚಾಲಕ ಶಿವಾನಂದ ಶಿವಲಿಂಗ ಖೋತ್‌ ಮೇಲೆ ಹಲ್ಲೆ ನಡೆಸಲಾಗಿದೆ. ಉಡುಪಿ ಜಿಲ್ಲೆ ಹೆಬ್ರಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...