Monday, August 3, 2026
Monday, August 3, 2026

Kavite with K Live ಕವಿತೆ ವಿತ್ ಕೆ ಲೈವ್

Date:

Kavite with K Live ಸಜ್ಜನರ ಸಂಗ ದುರ್ಜನರ ಸಂಗ
ಈ ಲೋಕದೊಳಗೆ ಎಲ್ಲಕ್ಕಿಂತ
ಮಿಗಿಲಾದ ಸಂಗ ಮನಸೊಳಗಿನ
ಏಕಾಂತದ ನಿರುಮ್ಮಳ ಸಂಗ.

ಹುಟ್ಟು ಉಚಿತ ಸಾವು ಖಚಿತ
ಎರಡಕ್ಕೂ ಹೆಸರಿಲ್ಲದೆ ಸದಾ
ಜಂಜಾಟದಲ್ಲಿ ರೋಸಿಹೋಗಿ
ಕಳೆದೋಗುವುದೇ ಈ ಸಂಗ.

ಕಾಲದೊಂದಿಗೆ ಬಂದಾಗ ಬಂದಂತೆ
ಕಾಲಾನಂತರ ಇದ್ದಾಗ ಇದ್ದಂತೆ
ಒಳ್ಳೆಯವರನ್ನು ಹುಡುಕುವುದಕ್ಕಿಂತ
ನಾವೇ ಬದಲಾದರೆ ಒಳಿತಲ್ಲವೇ.

ಏನೇ ಆಗಲಿ ಬಂದದ್ದು ಬರಲಿ
ಹೋಗೋದು ಇಲ್ಲೆ ಹೋಗಲಿ
ಎಲ್ಲಾ ಭಾರಕ್ಕಿಂತ ಈ ಜೀವನದ
ಭಾರವು ಎಲ್ಲಕ್ಕಿಂತ ಮಿಗಿಲಲ್ಲವೇ.

ಕಷ್ಟ ಸುಖ ಏನೇನೋ ಬರಲಿ
ಜೀವನದ ಬಂಡಿ ಮುಂದೆ ಸಾಗಲಿ
ಹಸಿವಿನ ಶಕ್ತಿ ಇಂಗಿಸೋ ಕೈಗಳಿಗೆ
ಆತ್ಮಸ್ಥೈರ್ಯದ ಬಲ ಒದಗಲಿ.

Kavite with K Live ಈ ಹೊಟ್ಟೆ ಉರಿಸಲೆಂದೆ ನೂರಾರು
ಕಿಡಿಗಳು ಕಾದಿವೆ ಜಗ್ಗದೆ ಕುಗ್ಗದೆ
ಮುಗಿಲ ಕಡೆ ಮುಖವ ಮಾಡಿ
ಮುನ್ನುಗ್ಗುತಾ ಸಾಗಲೇಬೇಕು.

ಎಲ್ಲವನು ಮೀರುವುದಕ್ಕಿಂತ
ಯೋಚಿಸಿ ಕೂತರೆ ಲೇಸು
ಕರಿಮಸಿಯೊಳಗಿನ ಬಿಂಬಕ್ಕೆ
ಯಾವತ್ತೂ ಸರದಾರನಾಗಬಾರದು.

ರಚನೆ : ರವಿಕುಮಾರ್.ಕೆ.ಎಂ, ಸಹಾಯಕ ಪ್ರಾಧ್ಯಾಪಕರು, ಯುವಕವಿ, ಹವ್ಯಾಸಿ ಬರಹಗಾರರು, ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...