Sunday, December 14, 2025
Sunday, December 14, 2025

Kavite with K Live ಕವಿತೆ ವಿತ್ ಕೆ ಲೈವ್

Date:

Kavite with K Live ಸಜ್ಜನರ ಸಂಗ ದುರ್ಜನರ ಸಂಗ
ಈ ಲೋಕದೊಳಗೆ ಎಲ್ಲಕ್ಕಿಂತ
ಮಿಗಿಲಾದ ಸಂಗ ಮನಸೊಳಗಿನ
ಏಕಾಂತದ ನಿರುಮ್ಮಳ ಸಂಗ.

ಹುಟ್ಟು ಉಚಿತ ಸಾವು ಖಚಿತ
ಎರಡಕ್ಕೂ ಹೆಸರಿಲ್ಲದೆ ಸದಾ
ಜಂಜಾಟದಲ್ಲಿ ರೋಸಿಹೋಗಿ
ಕಳೆದೋಗುವುದೇ ಈ ಸಂಗ.

ಕಾಲದೊಂದಿಗೆ ಬಂದಾಗ ಬಂದಂತೆ
ಕಾಲಾನಂತರ ಇದ್ದಾಗ ಇದ್ದಂತೆ
ಒಳ್ಳೆಯವರನ್ನು ಹುಡುಕುವುದಕ್ಕಿಂತ
ನಾವೇ ಬದಲಾದರೆ ಒಳಿತಲ್ಲವೇ.

ಏನೇ ಆಗಲಿ ಬಂದದ್ದು ಬರಲಿ
ಹೋಗೋದು ಇಲ್ಲೆ ಹೋಗಲಿ
ಎಲ್ಲಾ ಭಾರಕ್ಕಿಂತ ಈ ಜೀವನದ
ಭಾರವು ಎಲ್ಲಕ್ಕಿಂತ ಮಿಗಿಲಲ್ಲವೇ.

ಕಷ್ಟ ಸುಖ ಏನೇನೋ ಬರಲಿ
ಜೀವನದ ಬಂಡಿ ಮುಂದೆ ಸಾಗಲಿ
ಹಸಿವಿನ ಶಕ್ತಿ ಇಂಗಿಸೋ ಕೈಗಳಿಗೆ
ಆತ್ಮಸ್ಥೈರ್ಯದ ಬಲ ಒದಗಲಿ.

Kavite with K Live ಈ ಹೊಟ್ಟೆ ಉರಿಸಲೆಂದೆ ನೂರಾರು
ಕಿಡಿಗಳು ಕಾದಿವೆ ಜಗ್ಗದೆ ಕುಗ್ಗದೆ
ಮುಗಿಲ ಕಡೆ ಮುಖವ ಮಾಡಿ
ಮುನ್ನುಗ್ಗುತಾ ಸಾಗಲೇಬೇಕು.

ಎಲ್ಲವನು ಮೀರುವುದಕ್ಕಿಂತ
ಯೋಚಿಸಿ ಕೂತರೆ ಲೇಸು
ಕರಿಮಸಿಯೊಳಗಿನ ಬಿಂಬಕ್ಕೆ
ಯಾವತ್ತೂ ಸರದಾರನಾಗಬಾರದು.

ರಚನೆ : ರವಿಕುಮಾರ್.ಕೆ.ಎಂ, ಸಹಾಯಕ ಪ್ರಾಧ್ಯಾಪಕರು, ಯುವಕವಿ, ಹವ್ಯಾಸಿ ಬರಹಗಾರರು, ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...