Wednesday, December 17, 2025
Wednesday, December 17, 2025

Congress Karnataka ಲಾಡ್ ಅವರು ಸಾವಿರಾರು ಬಡ ಜನರ,ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಟೀಕಿಸಲು ವಿಜಯೇಂದ್ರ ಅವರಿಗೆ ನೈತಿಕತೆಯಿಲ್ಲ-ಪ್ರವೀಣ್ ಕುಮಾರ್

Date:

Congress Karnataka ಅಪ್ಪನ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿರುವ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹೆಸರಿನ ಮುಂದಿರುವ ಯಡಿಯೂರಪ ಎಂಬ ಹೆಸರು ತೆಗೆದುಬಿಟ್ಟರೆ ವಿಜಯೇಂದ್ರಗೆ ರಾಜಕಾರಣದಲ್ಲಿ ನಯಾಪೈಸೆ ಕಿಮ್ಮತ್ತಿಲ್ಲ. ಬುದ್ಧ, ಬಸವ ಅಂಬೇಡ್ಕರ್ ತತ್ವಗಳನ್ನು ಪ್ರತಿಪಾದಿಸುತ್ತಾ ಸರ್ವ ಜನಾಂಗದ ನಾಯಕರಾಗಿ ಯಾವುದೇ ಗಾಡ್ ಫಾದರ್‌ಗಳಿಲ್ಲದೆ ತಳಮಟ್ಟದಿಂದ ಹಂತಹಂತವಾಗಿ ಬೆಳೆದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಬಗ್ಗೆ ಮಾತಾಡೋಕೆ ವಿಜಯೇಂದ್ರ ಅವರಿಗೆ ಯಾವ ನೈತಿಕತೆ ಇದೆ ಎಂದು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್‌ಕುಮಾರ್ ಪ್ರಶ್ನಿಸಿದ್ದಾರೆ.
Congress Karnataka ವಿಜೇಂದ್ರ ಅವರೇ, ಲಾಡ್ ತನ್ನ ಸ್ವಂತ ಹಣದಲ್ಲಿ ಸಾವಿರಾರು ಬಡಜನರ, ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು ಜನರೇ ಬಯಸಿ, ಬೆಳೆಸಿದ ಕಾರ್ಯಕರ್ತರ ನಾಯಕ. ರಾಜ್ಯದ ಬಡವರ ಶಕ್ತಿ, ವಿದ್ಯಾರ್ಥಿಗಳ ಸ್ಫೂರ್ತಿ, ಶ್ರಮಿಕರ ಆಸ್ತಿ. ನಿಮ್ಮ ಹಾಗೆ ತಂದೆ ಹೆಸರಿನಲ್ಲಿ ಎಂಎಲ್‌ಎ ಆಗಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಬೆಳೆದ ನಾಯಕರಲ್ಲ. ನಿಮ್ಮ ಟೀಕೆಗೆ ಈ ರಾಜ್ಯದ ಶ್ರಮಿಕ ವರ್ಗದ ಜನ ಹಾಗೂ ಬಡ ವಿದ್ಯಾರ್ಥಿಗಳೇ ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದಾರೆ ಎಂದಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...