Wednesday, October 2, 2024
Wednesday, October 2, 2024

K.S.Eshwarappa ಈಶ್ವರಪ್ಪ ,ಆಸ್ತಿ ವಿವರ ಘೋಷಣೆ.₹10 ಕೋಟಿಗೂ ಮೀರಿ ಸ್ಥಿರಾಸ್ತಿ

Date:

K.S.Eshwarappa ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ‌ಈಶ್ವರಪ್ಪ ಅವರು ತಮ್ಮ ಆಸ್ತಿ ವಿವರವನ್ನು ಚುನಾವಣೆ ಅಧಿಕಾರಿಗಳಿಗೆ ನೀಡಿದ್ದಾರೆ. ಇಂದು ನಾಮಪತ್ರ ಸಲ್ಲಿಸಿದ ಈಶ್ವರಪ್ಪ ಆಯೋಗಕ್ಕೆ ತಮ್ಮ ಆಸ್ತಿ ವಿವರಣೆಯನ್ನ ಪ್ರಕಟಿಸಿದ್ದಾರೆ.
ಅವರ ಹೆಸರಿನಲ್ಲಿ 98 ಲಕ್ಷದ 92 ಸಾವಿರದ 20 ರೂ ಹೊಂದಿದ್ದಾರೆ. ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ 35 ಲಕ್ಷ 50 ಸಾವಿರದ 20 ರೂ. ಹೊಂದಿದ್ದಾರೆ. ಈಶ್ವರಪ್ಪ ಅವರ ಕೈಯಲ್ಲಿ ಇರುವ ನಗದು 25 ಲಕ್ಷ ರೂ.ಪತ್ನಿ ಜಯಲಕ್ಷ್ಮಿ ಅವರ ಕೈಯಲ್ಲಿ ಇರುವ ನಗದು 2 ಲಕ್ಷ ಎಂದು ಸಲ್ಲಿಸಿದ್ದಾರೆ.
ಈಶ್ವರಪ್ಪ ಹೆಸರಿನಲ್ಲಿ ಬಂಗಾರ 300 ಗ್ರಾಂ, ಬೆಳ್ಳಿ 2 ಕೆ.ಜಿ ಸಾಮಾಗ್ರಿಗಳನ್ನ ಹೊಂದಿದ್ದಾರೆ. ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ ಬಂಗಾರ 500 ಗ್ರಾಂ, ಬೆಳ್ಳಿ 5 ಕೆ.ಜಿ. ಹೊಂದಿದ್ದಾರೆ.
ಈಶ್ವರಪ್ಪ ಹೆಸರಿನಲ್ಲಿ ನಿದಿಗೆ ಗ್ರಾಮದ ಬಳಿ 1 ಎಕರೆ31 ಗುಂಟೆ ಕೃಷಿ ಭೂಮಿ ಹೊಂದಿದ್ದಾರೆ. ಕೃಷಿಯೇತರ ಭೂಮಿ 4 ಎಕರೆ 24 ಗುಂಟೆ ಹೊಂದಿದ್ದಾರೆ. ಬೆಂಗಳೂರಿನ‌ ಜಯನಗರದಲ್ಲಿ ನಿವೇಶನ, ಶಿವಮೊಗ್ಗದಲ್ಲಿ ವಾಸದ ಮನೆ ಹೊಂದಿದ್ಷಾರೆ.

K.S.Eshwarappa ಈಶ್ವರಪ್ಪ ಹೆಸರಿನಲ್ಲಿ 5 ಕೋಟಿ 87 ಲಕ್ಷದ 39 ಸಾವಿರ ಸಾಲ ತೋರಿಸಲಾಗಿದೆ. ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ 70 ಲಕ್ಷದ 80 ಸಾವಿರದ 13 ಸಾವಿರ ರೂ. ಈಶ್ವರಪ್ಪ ಅವರ ಹೆಸರಿನಲ್ಲಿ ಚರಾಸ್ಥಿ 4 ಕೋಟಿ 28 ಲಕ್ಷದ 61 ಸಾವಿರ ರೂ. ಹೊಂದಿದ್ದಾರೆ. 3 ಕೋಟಿ 77 ಲಕ್ಷದ 34 ಸಾವಿರ ರೂ. ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ ಚರಾಸ್ಥಿ‌ ಇದೆ.
ಈಶ್ವರಪ್ಪ ಹೆಸರಿನಲ್ಲಿ ಸ್ಥಿರಾಸ್ಥಿ‌ 10 ಕೋಟಿ 95 ಲಕ್ಷದ 59 ಸಾವಿರ ರೂ‌ ಮೌಲ್ಯವಿದ್ದರೆ. ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ ಸ್ಥಿರಾಸ್ಥಿ 7 ಲಕ್ಷದ 31 ಸಾವಿರವಿದೆ.‌ ತಮ್ಮ ಐದು ವರ್ಷಗಳ ಆದಾಯವನ್ನ ತೋರಿಸಿರುವ ಈಶ್ವರಪ್ಪ 2018-19 ರಲ್ಲಿ 34,88,380 ರೂ. ಆದಾಯವಿದೆ ಎಂದು ತೋರಿಸಿದರೆ 2019-20 ರಲ್ಲಿ 74,35,520ರೂ.ಎಂದು ತೋರಿಸಿದ್ದಾರೆ.

2020-21 ರಲ್ಲಿ 54,50,390 ರೂ. 2021-22 ರಲ್ಲಿ 88,35,420 ರೂ. ಇದ್ದರೆ 2022-23 ರಲ್ಲಿ 98,92,200 ರು ಆದಾಯ ಎಂದು ಘೋಷಿಸಿಕೊಂಡಿದ್ದಾರೆ. ವರ ವಿರುದ್ಧ ಯಾವುದೇ ಎಫ್ಐಆರ, ಯಾವುದೇ ಅಪರಾಧಗಳು ಇಲ್ಲ ಎಂದು ಘೋಷಿಸಿಕೊಂಡಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...