Thursday, December 18, 2025
Thursday, December 18, 2025

Yugadhi Festival ಆರ್ ಎಸ್ಎಸ್ ಯುಗಾದಿ ಉತ್ಸವದಲ್ಲಿ ಹಾಜರಿದ್ದ ಬಿವೈಆರ್ & ಈಶ್ವರಪ್ಪ

Date:

Yugadhi Festival ಆರ್​​​.ಎಸ್.ಎಸ್​​​. ಯುಗಾದಿ ಉತ್ಸವದಲ್ಲಿ ಬಿಜೆಪಿ ಬಂಡಾಯ ನಾಯಕ ಕೆ.ಎಸ್​​.ಈಶ್ವರಪ್ಪ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ. ಈಗಾಗಲೇ, ಬಿಜೆಪಿಯಿಂದ ಅಂತರ‌ಕಾಯ್ದುಕೊಂಡಿರುವ ಈಶ್ಬರಪ್ಪನವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹೊರಟಿದ್ದಾರೆ.

ಕೆ.ಎಸ್. ಈಶ್ವರಪ್ಪ ಇಂದು ಆರ್​ಎಸ್​ಎಸ್​ನ ಯುಗಾದಿ ಉತ್ಸವದಲ್ಲಿ ಪಾಲ್ಗೊಂಡು ಬೇವು-ಬೆಲ್ಲ ಸ್ವೀಕರಿಸಿ, ತೆರಳಿದ್ದಾರೆ. ಇಲ್ಲಿ ಮತ್ತೊಂದು ವಿಷಯವೆಂದರೆ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಕೂಡ ಇದೇ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಆದರೆ, ಈಚೆ ಬದಿ ಈಶ್ವರಪ್ಪ ಕೂತಿದ್ದರೆ, ಆಚೆ ಬದಿಯಲ್ಲಿ ಬಿ.ವೈ. ರಾಘವೇಂದ್ರ ಕೂತಿದ್ದು ನಾನೊಂದು ತೀರ – ನೀನೊಂದು ತೀರ ಎಂಬುವಂತಾಗಿತ್ತು. ಇದು ಆರ್​ಎಸ್​ಎಸ್​ನ ಪ್ರಮುಖರು ಸೇರಿದಂತೆ, ಎಲ್ಲ ಕಾರ್ಯಕರ್ತರಿಗೂ ಕಸಿವಿಸಿ ಉಂಟು ಮಾಡಿತು. ಆರ್.ಎಸ್.ಎಸ್. ಮುಖಂಡರು ಅದನ್ನು ಎಲ್ಲಿಯೂ ತೋರಿಸಿಕೊಳ್ಳದೇ ಉತ್ಸವ ಮುಗಿಸಿ ಹೊರಟರು.

ಈಶ್ವರಪ್ಪ ಆರ್​ಎಸ್​ಎಸ್​ನ ಕಟ್ಟಾಳುವಾಗಿದ್ದರೂ ಕೂಡ, ಸಮವಸ್ತ್ರ, ಖಾಕಿ ಪ್ಯಾಂಟ್ ಧರಿಸದೇ ಕೇವಲ ಕಪ್ಪು ಟೋಪಿ ಧರಿಸಿ, ಬಿಳಿ ಜುಬ್ಬ ಪೈಜಾಮದಲ್ಲಿ ಇಂದು ಆಗಮಿಸಿದ್ದು ವಿಶೇಷವಾಗಿತ್ತು. ಬಿ.ವೈ. ರಾಘವೇಂದ್ರ ಆರ್​ಎಸ್​ಎಸ್​ನ ಸಮವಸ್ತ್ರದಲ್ಲಿಯೇ ಆಗಮಿಸಿದ್ದು, ಅಲ್ಲಿ ನೆರೆದಿದ್ದ ಆರ್​ಎಸ್​ಎಸ್​ನ ಕಾರ್ಯಕರ್ತರು, ರಾಘವೇಂದ್ರ ಅವರ ಜೊತೆ ಸೆಲ್ಫಿ ಹಾಗೂ ಫೋಟೋಗೆ ಮುಗಿ ಬಿದ್ದಿದ್ದರು.

ಈ ವೇಳೆ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಎಲ್ಲ ಹಿಂದೂಗಳು ಒಂದಾಗಬೇಕೆಂಬ ಸ್ಫೂರ್ತಿ ನೀಡುವ ಯುಗಾದಿ ಹಬ್ಬ ಇದಾಗಿದೆ. ಆರ್​ಎಸ್​​ಎಸ್​​ನ ಯುಗಾದಿ ಉತ್ಸವ ಆಚರಣೆಯಲ್ಲಿ ನಾನು ಒಬ್ಬ ಸ್ವಯಂ ಸೇವಕನಾಗಿ ಸಂತೋಷದಿಂದ ಬಂದಿದ್ದೇನೆ ಎಂದು ಹೇಳಿದರು. ಇದೇ ವೇಳೆ, ಯುಗಾದಿ ಉತ್ಸವದಂದು ಒಟ್ಟಾಗುವ ಬಗ್ಗೆ ಪ್ರಶ್ನೆಗೆ ಉತ್ತರಿಸದೇ ಹೊರಟುಬಿಟ್ಟರು.

Yugadhi Festival ನಂತರ ಮಾತನಾಡಿದ ಬಿ.ವೈರಾಘವೇಂದ್ರ, ಈ ಉತ್ಸವದಲ್ಲಿ ನಾನು ಒಬ್ಬ ಎಂಪಿಯಾಗಲಿ, ಪುರಸಭೆ ಸದಸ್ಯನಾಗಲಿ, ಬಿಜೆಪಿ ಅಭ್ಯರ್ಥಿಯಾಗಿ ಭಾಗಿಯಾಗಿಲ್ಲ. ಆರ್​ಎಸ್​ಎಸ್​ನ ಸಾಮಾನ್ಯ ಕಾರ್ಯಕರ್ತನಾಗಿ ಇಲ್ಲಿಗೆ ಬಂದಿದ್ದೇನೆ. ವರ್ಷದಲ್ಲಿ ನಡೆಯುವ 6 ಉತ್ಸವಗಳಲ್ಲಿ ಯುಗಾದಿ ಉತ್ಸವವೂ ಕೂಡ ಒಂದಾಗಿದ್ದು, ಯುಗಾದಿ ಉತ್ಸವದ ಜೊತೆಗೆ ಆರ್​ಎಸ್​ಎಸ್​ನ ಸಂಸ್ಥಾಪಕರಾದ ಹೆಡ್ಗೆವಾರ್ ಅವರ ಜನ್ಮ ದಿನವೂ ಕೂಡ ಇಂದಾಗಿದೆ. ಈ ಹಿನ್ನೆಲೆಯಲ್ಲಿಯೂ ಕೂಡ ಇಂದಿನ ಉತ್ಸವ ಮಹತ್ವದ್ದಾಗಿದೆ. ನಮ್ಮ ಹಿಂದೂಗಳ ಯುಗಾದಿ ಹಬ್ಬ ಹೊಸ ವರ್ಷ ಕೂಡ ಆಗಿದೆ. ನಾನಿಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಪಾಲ್ಗೊಂಡಿದ್ದೇನೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Interact Club ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ – ರಮೇಶ್

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿ ಎಂದು ಕ್ಷೇತ್ರ...

Veereshwar Punyashram Samskruth School ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾಯಕ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ

Veereshwar Punyashram Samskruth School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ...

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...