Tuesday, October 1, 2024
Tuesday, October 1, 2024

Akashavani Bhadravati ಕೇಳುಗರೊಂದಿಗೆ ಅನನ್ಯತೆ ಸಂಪಾದಿಸಿರುವ ಆಕಾಶವಾಣಿ ಭದ್ರಾವತಿ

Date:

ಲೇ: ಡಾ.ನಾಗಭೂಷಣ.

Akashavani Bhadravati  ಆಕಾಶವಾಣಿ ಭದ್ರಾವತಿ ಕೇಂದ್ರವು 7/ 02 /1965 ರಲ್ಲಿ ಉಕ್ಕಿನ ನಗರಕ್ಕೆ ಬಾನುಲಿಯಿಂದ ವಂದೇ ಮಾತರಂ ಎಂಬ ಘೋಷ ವಾಕ್ಯವನ್ನು ಕೇಳುಗರಿಗೆ ಮನೆ ಮನೆಗೆ ತಲುಪುವ ಮೂಲಕ ತನ್ನ ಕಾರ್ಯಕ್ರಮವನ್ನು ಆರಂಭಿಸಿತು ಆ ದಿನ ಮೊದಲ ನಿರೂಪಕರಾಗಿ ಈಶ್ವರಾವ್ ಕಾಳೇಕರ್ ಹಾಗೂ ಸರಸ್ವತಿಯವರು ಕೇಳುಗರಿಗೆ ಧ್ವನಿಯಾದರು. ಈ ನಿಲಯದ ಮೊದಲ ಮುಖ್ಯಸ್ಥರಾಗಿ ಮೊಹಮ್ಮದ್ ಸಿದಿಕ್ ಅವರು ಕಾರ್ಯಕ್ರಮ ನಿರ್ವಾಕರಾಗಿ ಕೆಲವು ವರ್ಷ ಸಹ ಪ್ರಸಾರ ಕಾರ್ಯಕ್ರಮವನ್ನು ನೀಡುತ್ತಾ, ಆಮೇಲೆ ಅಂಬೆಗಾಲು ಇಡುತ್ತ ಒಂದೊಂದೇ ಕಾರ್ಯಕ್ರಮವನ್ನು ನಿಲಯವುತನ್ನ ಮಡಿಲಿನಿಂದ ಕೇಳುಗರಿಗೆ ಉಣಬಡಿಸುತ್ತಾ ಬಂದಿತ್ತು .ಆನಂತರ ಡಾ. ವಸಂತ ಕಾವಲಿ ಅವರು ಮುಖ್ಯಸ್ಥರಾಗಿ ಬಂದಮೇಲೆ ನಮ್ಮ ಆಕಾಶವಾಣಿ ಭದ್ರಾವತಿ ಕೇಂದ್ರವು ರಶ್ಮಿ, ಕನ್ನಡ ಭಾರತಿ ,ಕಾರ್ಮಿಕರಿಗಾಗಿ ಕಾರ್ಯಕ್ರಮ ಹೀಗೆ ಮೊದಲಾದ ಹೊಸ ಹೊಸ ವಿನೂತನ ಕಾರ್ಯಕ್ರಮಗಳು ಡಾ. ವಸಂತ ಕಾವಲಿ ಅವರೇ ನೇತೃತ್ವದಲ್ಲಿ ಹೊರಹೊಮ್ಮಿತು ಆಕಾಶವಾಣಿ ಭದ್ರಾವತಿಯಿಂದ ನಂತರ ಸುಧೀಂದ್ರ ಅವರು ಡಾಕ್ಟರ್ ವಸಂತ್ ಕಾವಲಿ ಅವರ ಜೊತೆಯಲ್ಲಿ ಕಾರ್ಯನಿರ್ವಹಿಸಿದರು. ಹೊಸ ಕಾರ್ಯಕ್ರಮಗಳು ರೂಪಗೊಂಡವು ಚಂದನ, ಗೂಡಿನಿಂದ ಬಿಟ್ಟ ಹಕ್ಕಿಗಳು, ಆಸ್ವಾದ, ಕಾಫಿ ಟೈಮ್ ಹೀಗೆ ಮೊದಲಾದ ಕಾರ್ಯಕ್ರಮಗಳನ್ನ ಆಕಾಶವಾಣಿ ಭದ್ರಾವತಿಯು ಆರಂಭಿಸಿತು. ಮಕ್ಕಳಿಗಾಗಿ ಬಾಲ ಜಗತ್ತು ,ಚಿಣ್ಣರ ಬಳಗ ,ಚಿಣ್ಣರ ಚಿಲಿಪಿಲಿ ಹಾಗೇನೆ ಚಿತ್ರಗೀತೆ ಕೇಳುವವರಿಗೆ ಚಿತ್ರರಂಜನೆ ಮೆಚ್ಚಿನ ಚಿತ್ರದ ಹಾಡುಗಳು, ಚಿತ್ರರಸಿಕರಿಗಾಗಿ ನಿಮ್ಮ ಹಾಡು ನಿಮ್ಮ ಆಯ್ಕೆ, ಇನ್ನೂ ಮಹಿಳೆಯರಿಗಾಗಿ ವನಿತಾ ರಂಗ ಕಾರ್ಯಕ್ರಮ ಹೀಗೆ ರೈತರಿಗಾಗಿ ಕೃಷಿ ರಂಗ ಕಾರ್ಯಕ್ರಮ ಯುವಕರಿಗಾಗಿ ಯುವವಾಣಿ, ಯಕ್ಷಗಾನ ಪ್ರಿಯರಿಗೆ ಯಕ್ಷಗಾನ ಕಾರ್ಯಕ್ರಮ ಹೀಗೆ 10 ಹಲವು ಕಾರ್ಯಕ್ರಮಗಳನ್ನು ಆಕಾಶವಾಣಿ ತನ್ನ ಮುಡಿಗೆ ಏರಿಸಿಕೊಳ್ಳುತ್ತ ವಿಶೇಷವಾದಂತಹ ಒಂದು ವೈಶಿಷ್ಟ್ಯ ಪೂರ್ಣವಾದಂತಹ ಕಾರ್ಯಕ್ರಮವನ್ನು ನೀಡುತ್ತಾ ಬಂದಿದೆ .ಇನ್ನು ಅನೇಕ ಈ ನಿಲಯದ ಮುಖ್ಯಸ್ಥರು ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ .ಉಷಾಲತಾ , ಡಾ. ಸುಧೀಂದ್ರ , ಬಳ್ಳಾರಿ ರಾಘವೇಂದ್ರ ಅವರು ಮುಂದುವರೆದಂತೆ ಇನ್ನು ಅನೇಕ ಮಹನೀಯರು ಆಕಾಶವಾಣಿ ಭದ್ರಾವತಿಯ ಏಳಿಗೆಗಾಗಿ ಶ್ರಮಸಿದ್ದಾರೆ. ಆಕಾಶವಾಣಿಯಲ್ಲಿ ಅನೇಕ ಉದ್ಘೋಷಕರ ಕಾರ್ಯನಿರ್ವಹಿಸಿದ್ದಾರೆ ಅವರುಗಳೆಂದರೆ ರಾಣಿ ರತ್ನ ರಾವ್, ಚಿನ್ನಪ್ಪ ,ಸುಬ್ರಮಣ್ಯ , ನಳಿನಾ ಎಂ ಕೆ ಶಿವಕುಮಾರ್ ಅವರು ಕಾರ್ಯ ನಿರ್ವಹಿಸಿದ್ದಾರೆ. ಆಕಾಶವಾಣಿಯ ಕಾರ್ಯಕ್ರಮವನ್ನು ನಿರೂಪಿಸಲು ಅನೇಕ ಕೊಡುಗೆಗಳನ್ನು ನೀಡುತ್ತಾ ಬಂದಿರೋದು ನಮಗೆ ತಿಳಿದು ಬರುತ್ತದೆ.

2016-17ರ ಹೊತ್ತಿಗೆ ಇನ್ನಷ್ಟು ವಿನೂತನ ಕಾರ್ಯಕ್ರಮಗಳನ್ನ ರಂಜಿಸಿದೆ ಅದರಲ್ಲಿ ಮುಖ್ಯವಾಗಿ ನಾವು ಕಾಣುವಂತದ್ದು ನಿಮ್ ಲೈಫ್ ನಮ್ ದುನಿಯಾ, ಕಾರ್ಯಕ್ರಮ ಭಾವ ಲಹರಿ ,ಭಾವ ಚಿತ್ತಾರ ಎಲ್ಲ ಕಾರ್ಯಕ್ರಮಗಳು ಹೊಸ ಹೊಸ ಒಂದು ಆಯಾಮಗಳನ್ನು ನೀಡುತ್ತಾ ಬಂದಿದೆ ಆಕಾಶವಾಣಿ ಭದ್ರಾವತಿ. ಇಂತಹ ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸಿದಂತ ರಾಣಿ ರತ್ನರಾವ್ ,ನೇತ್ರಾವತಿ ಅಭಿರಾಮ್ ಮೂರ್ತಿಯವರು ,ಆಲಮಕ್ಕಿ ಮಂಜುಳಾ, ನಳಿನಮ್ಮ, ಇದರ ಜೊತೆಗೆ ನಮ್ಮ ಆಕಾಶ್ ವಾಣಿಯ ಮುಖ್ಯಸ್ಥರಾಗಿ ಕಾರ್ಯ ಎಂದರೆ ಸಿ.ಎನ್ ರಾಮಚಂದ್ರನ್ ಎಂ .ಎ ಸುದರ್ಶನ, ವೇಣುಗೋಪಾಲ್ , ಸುಂದರೇಶ್, ಸುಧೀಂದ್ರ, ಜಿ.ಕೆ ರವೀಂದ್ರ ಕುಮಾರ,ನಾರಾಯಣ ಭಟ್, ಎಂ ಎಸ್ ನಾಗೇಂದ್ರ, ಈಗ ಎಸ್ ಆರ್ ಭಟ್ಟವರು ಆಕಾಶವಾಣಿ ಭದ್ರಾವತಿ ಕಾರ್ಯಕ್ರಮದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗೆ ಕಾರ್ಯಕ್ರಮ ನಿರ್ವಾಹಕರಾಗಿ ಎಸ್.ಎಲ್ ರಮೇಶ್ ಪ್ರಸಾದ್ ಅವರು ನಿರವಹಿಸುತ್ತಿದ್ದಾರೆ .ಈ ಎಲ್ಲರ ಒಂದು ಕೊಡುಗೆಯಿಂದಯಿಂದಾಗಿ ಆಕಾಶವಾಣಿಯು ಕರ್ನಾಟಕ ಮಾತ್ರವಲ್ಲದೆ ದೇಶವಿದೇಶಗಳಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ನೀಡುತ್ತಾ ತನ್ನ ಪ್ರಚಾರತೆಯನ್ನ ತನ್ನ ಪ್ರಕಾರತೆಯನ್ನು ಬೀರಿದೆ. ಇತ್ತೀಚಿಗೆ ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ಹೊರನಾಡ ಕನ್ನಡಿಗರಿಗಾಗಿ ವಿಶೇಷವಾದಂತಹ ಕಾರ್ಯಕ್ರಮವನ್ನು ಆಕಾಶವಾಣಿ ಭದ್ರಾವತಿಯು ರೂಪಿಸಿದೆ. ಇದರೊಟ್ಟಿಗೆ ಕ್ಯಾಂಪಸ್ ಕಟ್ಟೆ ಕಾರ್ಯಕ್ರಮ ವಿದ್ಯಾರ್ಥಿಗಳಿಗಾಗಿ ಕ್ಯಾಂಪಸ್ ನೇರ ಪ್ರಸಾರದ ಕಾರ್ಯಕ್ರಮವಾಗಿದೆ ಜೊತೆಯಲ್ಲಿ ಅನೇಕ ಸಾಧಕರು ಪರಿಚಯ ಮಾಡಿರುವಂತಹ ಕಾರ್ಯಕ್ರಮ ಆಗಿದೆ. ಹಾಡು ಮಾತಾಡು ಕಾರ್ಯಕ್ರಮ ಪ್ರತಿನಿತ್ಯ ಬೆಳಗ್ಗೆ 10 ಗಂಟೆಯಿಂದ 11 ಗಂಟೆವರೆಗೂ ವಿನೂತನವಾದಂತಹ ಕಾರ್ಯಕ್ರಮವಾಗಿದೆ ಇದು. ಮೊದಲನೇ ದಿನ ಒಗಟು ಇರಬಹುದು ಪದಬಂಧ ಇರಬಹುದು ಹಾಗೇನೆ ಗಾದೆ ಬಂಡಿ ಇರಬಹುದು ಹಾಗೇನೆ ಮುಂದುವರೆದಂತೆ ಸಾಧಕರ ಪರಿಚಯಾತ್ಮಕ ಕಾರ್ಯಕ್ರಮ ಇರಬಹುದು ಹಾಗೆನೇ ವಿಜ್ಞಾನಕ್ಕೆ ಸಂಬಂಧ ಪಟ್ಟಂತೆ ರಸಪ್ರಶ್ನೆ ಕಾರ್ಯಕ್ರಮ ಕ್ರೀಡಾ ರಸಪ್ರಶ್ನೆ ಜೊತೆಗೆ ಕಥೆ ನಿಮ್ಮ ಜೊತೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಪ್ರಸ್ತುತ ಸಂದರ್ಭದಲ್ಲಿ ಆಕಾಶವಾಣಿ ಭದ್ರಾವತಿಯು ಅನೇಕ ಆಯಾಮಗಳಲ್ಲಿ ವಿಶೇಷವಾದಂತಹ ಕಾರ್ಯಕ್ರಮಗಳನ್ನು ರೂಪಿಸುತ್ತಾ ಕೇಳುಗರನ್ನ ಮನಸ್ಸನ್ನು ಸೂರೆಗೊಂಡಿದೆ . ಸ್ನೇಹಿತರೆ Akashavani Bhadravati  ಇಂತಹ ಆಕಾಶವಾಣಿ ಭದ್ರಾವತಿಗೆ ಈಗ 60ರ ಪ್ರಾಯ. ಅಂದ್ರೆ 59 ವರ್ಷ ತುಂಬಿ 60ನೇ ವರ್ಷಕ್ಕೆ ಈ ಫೆಬ್ರವರಿ 7ನೇ ತಾರೀಖಿನಂದು ಪಾದಾರ್ಪಣೆ ಮಾಡ್ತಾರೆ.

ಭದ್ರಾವತಿ ಆಕಾಶವಾಣಿಯ ಬೆಳವಣಿಗೆಯ ಮಜಲಿನಲ್ಲಿ ಎಸ್.ಎಸ್.ಹಿರೇಮಠ್, ಎಂ.ಎಸ್. ಶ್ರೀಹರಿ, ಸುಬ್ಬುರತ್ನ, ಜಯರಾಮನ್ ಎಂ,ಎಸ್.ವಿಜಯಾಹರನ್,ರಾಜಲಕ್ಷ್ಮೀ ಶ್ರೀಧರ್, ಡಿ.ಎಸ್.ನಾಗಭೂಷಣ, ಎಂ.ಎಸ್.ಕೆ.ಪ್ರಭು ಮತ್ತು ಎಸ್.ಎಚ್.ಆಂಜನಪ್ಪ ,ಮಹಾಬಲೇಶ್ವರ ರಾವ್, ಎ.ಪಿ.ಕದಂ,ಎಸ್ ಎಸ್ ಬನಜ್ಜ, ಡಾ. ಸದಾನಂದ ಹೊಳ್ಳ, ಡಾ. ಎಂ. ಜಿ ವೇದ ಮೂರ್ತಿ ಮತ್ತು ಮುಳ್ಳೂರ್,
ಮುಂತಾದವರ ಹೆಸರುಗಳನ್ನ ಅವಶ್ಯ ಈ ಸಂದರ್ಭದಲ್ಲಿ ಉಲ್ಲೇಖಿಸಬೇಕು.

ಚರ್ಚೆ ಸಂವಾದ ಸರ್ಕಾರದ ಇತ್ಯಾದಿ ಯೋಜನೆಗಳ ಬಗ್ಗೆ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಆಕಾಶವಾಣಿ ಭದ್ರಾವತಿಯು ತನ್ನ ದೇ ಆದ ಕಾರ್ಯ ನಿರ್ವಹಿಸಿದೆ. ಇದರೊಟ್ಟಿಗೆ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳು, ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳು ಮೊದಲಾದ ಕಾರ್ಯಕ್ರಮಗಳನ್ನ ಆಕಾಶವಾಣಿ ನೀಡುತ್ತಾ ಬಂದಿದೆ.ಅಂದು ಇಂದು ಎಂದೆಂದಿಗೂ ಸುಮಾರು ಇಡೀ ನಮ್ಮ ಭಾರತದಾದ್ಯಂತ ಆಕಾಶವಾಣಿ ಆರಂಭವಾಗಿ 98 ವರ್ಷಗಳ ಕಾಲ ಕಳೆದಿದೆ ಆಕಾಶವಾಣಿ ತನ್ನದೇ ಆದ ಒಂದು ಪ್ರಸಾರ ಕಾರ್ಯದಲ್ಲಿ ತನ್ನದೇ ಆದ ಒಂದು ಅನನ್ಯತೆಯನ್ನು ಹೊಂದಿದೆ ಅಂತಲೇ ಹೇಳಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...