Friday, June 19, 2026
Friday, June 19, 2026

Marikamba Jatre ಶಿವಮೊಗ್ಗ ಶ್ರೀಮಾರಿಕಾಂಬೆ ಜಾತ್ರೆ ಪ್ರಯುಕ್ತ ರಾಜ್ಯ ಮಟ್ಟದ “ಟಗರು ಕಾಳಗ”

Date:

Marikamba Jatre ಕೋಟೆ ಶ್ರೀ ಮಾರಿಕಾಂಬ ಗೆಳೆಯರ ಬಳಗದಿಂದ 7ನೇ ಬಾರಿಗೆ ರಾಜ್ಯಮಟ್ಟದ ಟಗರಿನ ಕಾಳಗ ವನ್ನು ಮಾ.10ರ ಭಾನುವಾರ ಬೆಳಿಗ್ಗೆ 9ಗಂಟೆಗೆ ನ್ಯಾಷನಲ್ ಕಾಲೇಜು ಆವರಣ ( ಕುವೆಂಪು ರಂಗಮಂದಿರ ಪಕ್ಕ) ಏರ್ಪಡಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಟಗರಿನ ಕಾಳಗಕ್ಕೆ ಚಾಲನೆ ನೀಡುವರು. ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಮೇಯರ್ ಎಸ್.ಕೆ. ಮರಿಯಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅತಿಥಿಗಳಾಗಿ ಭಾಗವಹಿಸುವರು.


8 ಹಲ್ಲಿನ ಕುರಿಗೆ ಪ್ರಥಮ ಬಹುಮಾನ 1ಲಕ್ಷರೂ, ದ್ವಿತೀಯ ಬಹುಮಾನ 50 ಸಾವಿರರೂ, 3ನೇ ಬಹುಮಾನ ಬೆಳ್ಳಿ ಗಧೆ, 4ನೇ ಬಹುಮಾನ ಟ್ರೋಫಿ ಇರುತ್ತದೆ. ಪ್ರವೇಶ ದರ೨,500 ರೂ. ಆಗಿದೆ.
6ಹಲ್ಲಿನ ಕುರಿಗೆ ಪ್ರಥಮ ಬಹುಮಾನ೫೦ ಸಾವಿರರೂ, ದ್ವಿತೀಯ ಬಹುಮಾನ 25ಸಾವಿರರೂ, ತೃತೀಯ ಬಹುಮಾನ ಬೆಳ್ಳಿಗಧೆ, 4ನೇ ಬಹುಮಾನ ಟ್ರೋಫಿ, ಪ್ರವೇಶ ದರ 2ಸಾವಿರರೂಗಳು.
4 ಹಲ್ಲಿನ ಕುರಿಗೆ ಪ್ರಥಮ ಬಹುಮಾನ 40 ಸಾವಿರರೂ, ದ್ವಿತೀಯ 20ಸಾವಿರರೂ, ತೃತೀಯ ಬೆಳ್ಳಿಗಧೆ, 4ನೇ ಬಹುಮಾನ ಟ್ರೋಫಿ.ಪ್ರವೇಶದರ 1,500ರೂ. ಆಗಿದೆ.
೨ಹಲ್ಲಿನ ಕುರಿಗೆ ಪ್ರಥಮ 30 ಸಾವಿರರೂ, ೨ನೇ ಬಹುಮಾನ 15 ಸಾವಿರರೂ, 3ನೇ ಬಹುಮಾನ ಬೆಳ್ಳಿ ಗಧೆ, 4ನೇ ಬಹುಮಾನ ಟ್ರೋಫಿ, ಪ್ರವೇಶ ದರ 1ಸಾವಿರರೂಗಳು.
ಮರಿ ಕುರಿಗೆ ಪ್ರಥಮ ಬಹುಮಾನ 15 ಸಾವಿರರೂ, ದ್ವಿತೀಯ 7,500 ರೂ, ತೃತೀಯ ಬೆಳ್ಳಿಗಧೆ, 4ನೇ ಬಹುಮಾನ ಟ್ರೋಫಿ, ಪ್ರವೇಶ ದರ 800ರೂ ಆಗಿದೆ.
Marikamba Jatre ಹೆಚ್ಚಿನ ಮಾಹಿತಿಗಾಗಿ ಶಂಕರ ಗುಂಡ ಮೊ. 98458 61242, ಆರ್. ಮಲ್ಲಿಕಾರ್ಜುನ ಮೊ. 97407 59858, ಚಂದ್ರಶೇಖರ್ 9886852000, ರಾಘವೇಂದ್ರ 98444 71234ರಲ್ಲಿ ಸಂಪರ್ಕಿಸಲು ಕೋರಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...