Tuesday, April 21, 2026
Tuesday, April 21, 2026

Housing Society ನೆಮ್ಮದಿಯ ಜೀವನಕ್ಕೆ ಸೂರು ಅಗತ್ಯ-ಡಿ.ಸಿ.ಸುರೇಶ್

Date:

Housing Society ನೆಮ್ಮದೀಯ ಜೀವನಕ್ಕೆ ಸೂರು ಅಗತ್ಯ ಡಿ.ಸಿ ಸುರೇಶ್
ಮನುಷ್ಯನ ಜೀವನದ ಅಗತ್ಯಗಳಲ್ಲಿ ಸೂರು ಅತ್ಯಗತ್ಯ ಎ೦ದು ರೋಟರಿ ಶಿವನೊಗ್ಗ ಜ್ಯೂಬಿಲಿಯ ವಾರದ ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಸವೇಶ್ವರ ಹೌಸಿಂಗ್ ಸೊಸೈಟಿ ಉಪಾಧ್ಯಕ್ಷ ಡಿ.ಸಿ.ಸುರೇಶ ಅವರು ಹೇಳಿದರು.

ಶಿವಮೊಗ್ಗ ನಗದಲ್ಲಿ ಜಯನಗರ ಹೌಸಿಂಗ್ ಸೊಸೈಟಿ ನಂತರ ಪ್ರಾರಂಭವಾದ ನಮ್ಮ ಸಂಸ್ಥೆ ನಗರದಲ್ಲಿ ಅತ್ಯಂತ ಹಳೆಯ ಹೌಸಿಂಗ್ ಸೊಸೈಟಿ, ನಮ್ಮ ಸದಸ್ಯರಿಗೆ ಕೇವಲ ಇಪ್ಪತ್ತೈದು ರೂಪಾಯಿಗೆ ಒ೦ದು ಅಡಿಯಂತೆ ನಿವೇಶ ನೀಡಿ, ಸಂತೃಪ್ತಿಯ ಜೀವನ ಸಾಗಿಸಲು ಅನುಕೂಲಮಾಡಿಕೊಟ್ಟ ನೆಮ್ಮದಿ ಇದೆ ಎಂದರು.

ಇತ್ತೀಚಿನ ದಿನಗಳಲ್ಲಿ ಸರ್ಕಾರದ ನಿಯಮಗಳು ಬದಲಾಗಿ, ಸ೦ಘ ಸ೦ಸ್ಥೆಗಳಿಗೆ ಯಾವುದೇ ಅಧಿಕಾರವಿಲ್ಲ, ನಗರಾಭಿವೃದ್ಧಿ ಮಂಡಳಿ ಮೂಲಕ ಹಾಗೂ ಡೆವಲಪರ್ ಗಳಿಗೆ ಹೆಚ್ಚಿನ ಅಧಿಕಾರ ನೀಡಿ ಹೌಸಿಂಗ್ ಸೊಸೈಟಿಗಳಿಗೆ ಇದ್ದ ಸೇವಾ ಅವಕಾಶಗಳನ್ನು ರದ್ದು ಮಾಡಲಾಗಿದೆ ಹಾಗಾಗಿ ಇಂದು ನಿವೇಶನ ಬೆಲೆ ಗಗನಕ್ಕೆ ಏರಿ ಶ್ರೀಸಾಮಾನ್ಯ ಸ್ವಂತನೆಲೆ ಕಂಡುಕೊಳ್ಳಲು ಪರಿತಾಪಿಸುವಂತಾಗಿದೆ ಎಂದರು.

Housing Society ಸಭೆಯ ಅಧ್ಯಕ್ಷತೆಯನ್ನು ರೋ. ರೇಣುಕಾರಾಧ್ಯ ವಹಿಸಿ ಎಲ್ಲರನ್ನು ಸ್ವಾಗತಿಸಿದರು.
ಭಾರದ್ವಾಜ, ಡಾ.ಗುರುಪಾದಪ್ಪ, ಎಸ್.ಎಸ್. ವಾಗೇಶ, ನಾಗರಾಜ, ಇತರೆ ಸದಸ್ಯರು ಹಾಜರಿದ್ದರು. ಕಾರ್ಯದರ್ಶಿ ರೋ. ರೂಪ ಪುಣ್ಯಕೋಟಿ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bharat Scouts and Guides ಕೃಷಿ ಕ್ಷೇತ್ರ ಮಾಹಿತಿಯಿಂದ ವಿದ್ಯಾರ್ಥಿಗಳು ಪರಿಪೂರ್ಣರಾಗಲು ಸಾಧ್ಯ- ಕೆ.ರವಿ

Bharat Scouts and Guides ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿಯ ಬಗ್ಗೆ...

Klive special Article “ಶಂಕರಂ ಲೋಕ ಶಂಕರಂ” ಎನ್.ಜಯಭೀಮ್ ಜೊಯ್ಸ್, ಶಿವಮೊಗ್ಗ

Klive special Article ಶ್ರೀಶಂಕರಾಚಾರ್ಯ ಗುರುಗಳು (ಶ್ರೀಶಂಕರಜಯಂತಿಯ ಸಂದರ್ಭದಲ್ಲಿ)ಪ್ರತಿವರ್ಷ ವೈಶಾಖಮಾಸದ...

RM Manjunath Gowda ಹುಲಿಕಲ್ ಘಾಟಿ ಪ್ರಕರಣ.ಇಂಜಿನಿಯರುಗಳೇ ಹೊಣೆ. ಎಫ್ ಐ ಆರ್ ದಾಖಲಿಸಲು ಎಸ್ ಪಿ.ಅವರಿಗೆ ಮನವಿ ಮಾಡುವೆ- ಆರ್.ಎಂ.ಮಂಜುನಾಥ ಗೌಡ.

RM Manjunath Gowda ಹುಲಿಕಲ್ ಘಾಟಿ ಪ್ರಕರಣದಲ್ಲಿ ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ಮಕೆನಾಡು...

Graduation Day ಮ್ಯಾನೇಜ್ಮೆಂಟ್ ಪದವೀಧರರು ಶೈಕ್ಷಣಿಕ ಮತ್ತು ಔದ್ಯಮಿಕ ರಂಗದ ನಡುವಿನ ಸೇತುವೆ- ವಿನಯ್ ಪಾಟೀಲ್.

Graduation Day "ಜ್ಞಾನವು ಕೌಶಲ್ಯವಾಗದಿದ್ದಲ್ಲಿ ನಿರರ್ಥಕ" -ಬಾಪೂಜಿ ಎಂಬಿಎ ಪದವಿ ಪ್ರದಾನದಲ್ಲಿ ವಿನಯ್...