Saturday, December 6, 2025
Saturday, December 6, 2025

Truecaller ಟ್ರೂ ಕಾಲರ್ ನಂಥ ಸೇವೆಯನ್ನ ಟೆಲಿಕಾಂ ಕಂಪೆನಿಗಳೇ ಕಡ್ಡಾಯ ನೀಡಲುTRAI ಪ್ರಸ್ತಾವನೆ

Date:

Truecaller ಮೊಬೈಲ್‌ಗೆ ಕರೆ ಮಾಡುವ ಬಳಕೆದಾರರ ಹೆಸರನ್ನು ಸ್ಕ್ರೀನ್‌ ಮೇಲೆ ಪ್ರದರ್ಶಿಸುವ ಸೇವೆಯನ್ನು ಜಿಯೊ, ಏರ್‌ಟೆಲ್‌ನಂಥ ಟೆಲಿಕಾಂ ಕಂಪನಿಗಳು ಕಡ್ಡಾಯ ವಾಗಿ ನೀಡಬೇಕು ಎನ್ನುವ ಪ್ರಸ್ತಾವನೆಯನ್ನು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌) ಸಿದ್ಧಪಡಿಸಿದೆ. ಈ ಪ್ರಸ್ತಾವನೆಗೆ ಟೆಲಿಕಾಂ ಕಂಪನಿಗಳು ವಿರೋಧ ವ್ಯಕ್ತಪಡಿಸಿವೆ.ಸದ್ಯಕ್ಕೆ ಕರೆ ಮಾಡಿದ ವ್ಯಕ್ತಿಯನ್ನು ಗುರು ತಿಸಲು ಟ್ರೂಕಾಲರ್‌ನಂಥ ಆ್ಯಪ್‌ಗಳ ನೆರ ವನ್ನು ಪಡೆಯಬಹುದು.
ಇದರ ಬದಲಿಗೆ ಟೆಲಿಕಾಂ ಕಂಪನಿಗಳೇ ಆ ಸೇವೆಯನ್ನು ನೀಡ ಬೇಕು ಎನ್ನುವುದು ಟ್ರಾಯ್‌ ಒತ್ತಾಯ. ಇದ ರಿಂದ ಮೊಬೈಲ್‌ಗಳಲ್ಲಿನ ಹಣಕಾಸಿನ ವಂಚನೆ ಗಳಿಗೆ ತೆರೆ ಬೀಳಲಿದೆ ಎಂದು ಅಭಿಪ್ರಾಯಪ ಟ್ಟಿದೆ.ಟ್ರೂಕಾಲರ್‌ನಂತಹ ಅಪ್ಲಿಕೇಶ ನ್‌ಗಳು ಕ್ರೌಡ್‌-ಸೋರ್ಸ್‌ ಡೇಟಾವನ್ನು ಆಧರಿಸಿವೆ. ಇದು ಅನೇಕ ಸಂದರ್ಭಗಳಲ್ಲಿ ವಿಶ್ವಾಸಾರ್ಹ ವಾಗಿರುವುದಿಲ್ಲ ಎಂದು ಟ್ರಾಯ್‌ ಹೇಳಿದೆ. ಟ್ರಾಯ್‌ ಪ್ರಸ್ತಾವನೆಯನ್ನು ದೂರ ಸಂಪರ್ಕ ಇಲಾಖೆ ಅಂಗೀಕರಿಸಿದರೆ, ಟೆಲಿಕಾಂ ಕಂಪನಿ ಗಳು ಈ ಸೇವೆಯನ್ನು ಒದಗಿಸಬೇಕಾಗುತ್ತದೆ. ಈಗಾಗಲೇ ಮಾರುಕಟ್ಟೆ ಯಲ್ಲಿ ಪ್ರಾಬಲ್ಯ ಸಾಧಿಸಲು ಸ್ಪರ್ಧಾತ್ಮಕ ಬೆಲೆಯಲ್ಲಿ ಟೆಲಿಕಾಂ ಕಂಪನಿ ಗಳು ಸೇವೆ ನೀಡುತ್ತಿವೆ.
ಕಾಲರ್‌ಐಡಿ ಯಂಥ ಸೇವೆಗೆ ಇನ್ನಷ್ಟು ಸೌಕರ್ಯ ವ್ಯವಸ್ಥೆಗಳ ಅಗತ್ಯ ವಿದೆ. ಈ ಆರ್ಥಿಕ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಬೇಕಾಗಬಹುದು ಎಂಬುದು ಟೆಲಿಕಾಂ ಕಂಪನಿಗಳ ವಾದ. ಟೆಲಿಕಾಂ ಕಂಪನಿಗಳಿಗೆ ಸಿಎನ್ಎಪಿ ಫೀಚರ್ ಅಳವಡಿಕೆಯಿಂದ ತೊಂದರೆ ಏನು? ಸಿಮ್ ನೊಂದಣಿ ಮಾಡುವಾಗ ಪಡೆಯಲಾಗುವ ದಾಖಲೆಯ ಆಧಾರದ ಮೇಲೆ ವ್ಯಕ್ತಿಯ ಕರೆ ಗುರುತನ್ನು ಪಡೆಯಲು ಸಾಧ್ಯ. ಆದರೆ, ಕರೆ ಮಾಡಿದಾಗ ಆ ನಂಬರ್ನ ಮೂಲ ಪತ್ತೆಹಚ್ಚಲು ಡಾಟಾಬೇಸ್ನಿಂದ ಮಾಹಿತಿ ಪಡೆಯಲು ಒಂದಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ, ವ್ಯಕ್ತಿಯಿಂದ ವ್ಯಕ್ತಿಯ ಮೊಬೈಲ್ಗೆ ಕರೆ ಹೋದಾಗ ಅದು ತಲುಪುವುದು ವಿಳಂಬವಾಗಬಹುದು.

Truecaller ಇದು ಟೆಲಿಕಾಂ ಕಂಪನಿಗಳಿಗೆ ಇರುವ ಒಂದು ಆತಂಕ.ಹಾಗೆಯೇ, ಈ ಫೀಚರ್ ಅಳವಡಿಸಲು ಹೆಚ್ಚುವರಿ ಸೌಕರ್ಯ ವ್ಯವಸ್ಥೆ ನಿರ್ಮಿಸಬೇಕು. ಈಗಾಗಲೇ ಹೆಚ್ಚು ಲಾಭ ಕಾಣದೇ ಪರದಾಡುತ್ತಿರುವ ಟೆಲಿಕಾಂ ಕಂಪನಿಗಳಿಗೆ ಇನ್ನಷ್ಟು ಹೊರೆಯಾಗಬಹುದು. ಅಥವಾ ಗ್ರಾಹಕರಿಗೆ ಹೆಚ್ಚಿನ ಹೊರೆ ಹೊರಿಸಬೇಕಾಗಬಹುದು. ಅಂದರೆ ನಮ್ಮ ನಿಮ್ಮ ಮೊಬೈಲ್ ಬಿಲ್ ಇನ್ನೂ ಹೆಚ್ಚಾಗಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...