Thursday, March 19, 2026
Thursday, March 19, 2026

Bharat Rice ಭಾರತ್ ಚಾವಲ್ ಕೇಜಿಗೆ ₹29, ಭಾರತ್ ದಾಲ್ ಕೇಜಿಗೆ ₹60-ಕೇಂದ್ರದ ಯೋಜನೆ

Date:

Bharat Rice ದೇಶದಲ್ಲಿ ಚಿಲ್ಲರೆ ಅಕ್ಕಿ ಬೆಲೆಯಲ್ಲಿ ಶೇ. 15ರಷ್ಟು ಹೆಚ್ಚಳವಾಗಿದೆ. ಇದು ಜನಸಾಮಾನ್ಯರ ಮೇಲೆ ಭಾರಿ ಪರಿಣಾಮ ಉಂಟುಮಾಡಿದೆ. ಈ ಕಡೆ ಗಮನಹರಿಸಿದ ಸರ್ಕಾರವು ಸಬ್ಸಿಡಿ ದರದಲ್ಲಿ ಅಕ್ಕಿಯನ್ನು ನೀಡಲು ಸಿದ್ಧವಾಗಿದೆ.

ಹೌದು, ಒಂದು ಕೆಜಿ ಅಕ್ಕಿಗೆ 29 ರೂಪಾಯಿ ದರ ಭಾರತ್ ಅಕ್ಕಿಯನ್ನು ಪರಿಚಯಿಸಿದೆ. ಭಾರತ್ ಅಕ್ಕಿಯು ಐದು ಕೆಜಿ ಹಾಗೂ 10 ಕೆಜಿ ಬ್ಯಾಗ್ಗಳಲ್ಲಿ ಲಭ್ಯವಿರಲಿದೆ. ಚಿಲ್ಲರೆ ಮಾರಾಟದ ಉದ್ದೇಶದಿಂದ ಭಾರತ್ ರೈಸ್ ಅನ್ನು ಪರಿಚಯಿಸಿರುವ ಸರ್ಕಾರವು ಸಮಂಜಸ ಬೆಲೆಯಲ್ಲಿ ಮಾರುಕಟ್ಟೆ ಪೂರೈಕೆಗಳನ್ನ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಭಾರತ್ ಅಕ್ಕಿ ಎಂದರೆ ಹೆಚ್ಚುತ್ತಿರುವ ಆಹಾರ ಬೆಲೆಗಳನ್ನ ಪರಿಹರಿಸಲು, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಸಾರ್ವಜನಿಕರಿಗೆ ಭಾರತ್ ರೈಸ್ ಚಿಲ್ಲರೆ ಮಾರಾಟವನ್ನು ಪ್ರಾರಂಭಿಸಿದೆ. ಎನ್ ಎಫ್ಇ ಡಿ, ಎನ್ ಸಿ ಸಿ ಎಫ್ ಹಾಗೂ ಕೇಂದ್ರೀಯ ಭಂಡಾರ ಈ ಮೂರು ಏಜೆನ್ಸಿಗಳ ಮೂಲಕ ಈ ಬ್ರಾಂಡ್ ಅಡಿಯಲ್ಲಿ 5 ಎಲ್ಎ ಎಂ.ಟಿ ಅಕ್ಕಿಯನ್ನು ಮಾರಾಟ ಮಾಡಲಾಗುತ್ತದೆ.

ಮೊಬೈಲ್ ವ್ಯಾನ್ ಗಳು ಸೇರಿದಂತೆ ಕೇಂದ್ರೀಯ ಭಂಡಾರ್ ಮತ್ತು ಎನ್ ಸಿ ಸಿ ಎಫ್ ಔಟ್ಲೆಟ್ ಗಳ ಮೂಲಕ ಭಾರತ್ ಅಕ್ಕಿಯನ್ನು ಖರೀದಿಸಲು ಪ್ರವೇಶಿಸಬಹುದು. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಭಾರತಕ್ಕಿಯನ್ನು ಗ್ರಾಹಕರಿಗೆ ಹೆಚ್ಚು ಪ್ರವೇಶಿಸಲು 100 ಮೊಬೈಲ್ ವ್ಯಾನ್ ಗಳನ್ನು ಬಿಡುಗಡೆ ಮಾಡಿದ್ದಾರೆ.

Bharat Rice ಸಹಕಾರಿ ಚಾನೆಲ್ ಗಳ ಮೂಲಕ ಭಾರತ್ ದಾಲನ್ನ ಕೆಜಿಗೆ 60 ರೂಪಾಯಿ ಹಾಗೂ ಈರುಳ್ಳಿ ಕೆಜಿಗೆ 25 ರೂಪಾಯಿಗೆ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...