Good Luck Araike Kendra ಕೈಗಾರಿಕೆಯಲ್ಲಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿ ಸಮಾಜಮುಖಿಯಾಗಿ ಹಲವಾರು ಕಾರ್ಯಕ್ಷೇತ್ರಗಳಲ್ಲಿ ತಮ್ಮದೇ ಆದ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ ಶಾಸಕರಾದ ಶ್ರೀಯುತ ಎಸ್ ರುದ್ರೇಗೌಡರಿಗೆ ಅವರ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ ಶಿವಮೊಗ್ಗ ನಗರದ ಗುಡ್ ಲಕ್ ಆರೈಕೆ ಕೇಂದ್ರದ ವತಿಯಿಂದ. ಹೃದಯಪೂರ್ವಕವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಶಾಸಕರು ಮಾತನಾಡುತ್ತಾ ಬುಧ್ಧಿಮಾಂದ್ಯರ,ಆಶಕ್ತರ ಸೇವೆ ಮಾಡುವ ಗುಡ್ ಲಕ್ ಸಂಸ್ಥೆ ಸಮಾಜಕ್ಕೆಮಾದರಿಯಾಗಿದೆ. ಅಂತ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಂಕುತಿಮ್ಮನ ಕಗ್ಗದ ಖ್ಯಾತಿ ಹಾಗೂ ಗುಡ್ ಲಕ್ ಆರೈಕೆ ಕೇಂದ್ರದ ನಿರ್ದೇಶಕರಾದ ಜಿ ಎಸ್ ನಟೇಶ್ ರವರು ಮಾನ್ಯ ರುದ್ರೇಗೌಡರಿಗೆ ಶುಭಾಶಯ ಕೋರಿದರು. ಗುಡ್ ಲಕ್ ಆರೈಕೆ ಕೇಂದ್ರ ದ ಅಧ್ಯಕ್ಷರಾದ ಯು ರವೀಂದ್ರನಾಥ್ ಐತಾಳ್ ಶಾಸಕ ರನ್ನು ಅರೈಕೆ ಕೇಂದ್ರಕ್ಕೆ ಒಮ್ಮೆ ಸಂದರ್ಶನ ನೀಡುವಂತೆ ವಿನಂತಿಸಿದರು.
Good Luck Araike Kendra ನಿರ್ದೇಶಕ ಜಿ. ವಿಜಯಕುಮಾರ ಹಾಗೂ ಪ್ರೊ.ಚಂದ್ರಶೇಖರ ಉಪಸ್ಥಿತರಿದ್ದರು.