Monday, May 4, 2026
Monday, May 4, 2026

Indian Medical Association ರಾಷ್ಟ್ರದ ಗಮನ ಸೆಳೆದ ಶಿವಮೊಗ್ಗ ಐಎಮ್ಎ ದೊಡ್ಡ ಶಾಖೆಯ ಪ್ರಶಸ್ತಿಯ ಗರಿ

Date:

Indian Medical Association ರಾಜ್ಯ ಮಟ್ಟದ ಪ್ರಶಸ್ತಿ ಬೆನ್ನಲ್ಲೇ , ರಾಷ್ಟ್ರಮಟ್ಟದ ಅತ್ಯುತ್ತಮ ಶಾಖೆ ಪ್ರಶಸ್ತಿಯ ಗೌರವಕ್ಕೆ ಪಾತ್ರವಾದ ಶಿವಮೊಗ್ಗ ಐಎಂಎ ಶಾಖೆ

ಕೇರಳದ ತಿರುವನಂತಪುರಂ ನ ಕೋವಲಂನಲ್ಲಿ ಡಿಸೆಂಬರ್ 27,28 ರಂದು ನಡೆದ ರಾಷ್ಟ್ರಮಟ್ಟದ ಭಾರತೀಯ ವೈದ್ಯಕೀಯ ಮಹಾಸಮ್ಮೇಳನದಲ್ಲಿ ಐಎಂಎ ಶಿವಮೊಗ್ಗ ಶಾಖೆಗೆ ಅತ್ಯುತ್ತಮ ದೊಡ್ಡ ಶಾಖೆಯ ಪ್ರಶಸ್ತಿ ದೊರೆತಿದೆ . ಕಳೆದ ಸೆಪ್ಟೆಂಬರ್ 2022 ರಿಂದ ಅಧ್ಯಕ್ಷರಾಗಿ ಡಾ . ಅರುಣ್ ಎಂ ಎಸ್ ಹಾಗು ಕಾರ್ಯದರ್ಶಿ ಡಾ . ರಕ್ಷಾ ರಾವ್ ಅವರ ನೇತೃತ್ವದಲ್ಲಿ ಅಕ್ಟೋಬರ್ 1 , 2023 ವರೆಗೂ ಒಂದು ವರ್ಷ ಕಾಲಾವಧಿಯಲ್ಲಿ ವೈದ್ಯರಿಗೆ ವೈಜ್ಞಾನಿಕ ಕಲಿಕಾ ಕಾರ್ಯಾಗಾರಗಳು , ವಿಶ್ವ ಅರೋಗ್ಯ ದಿವಸಗಳ ಆಚರಣೆ , ಶಾಲಾ ಕಾಲೇಜುಗಳಲ್ಲಿ ಆರೋಗ್ಯ ಜಾಗೃತಿ , ಮಹಿಳಾ ಆರೋಗ್ಯ , ಸಾರ್ವಜನಿಕರಿಗೆ ಹಾಗು ನರ್ಸಿಂಗ್ ವಿದ್ಯಾರ್ಥಿಗಳಿಗೆ ಜೀವರಕ್ಷಕ ಸಿ ಪಿ ಆರ್ ಕಾರ್ಯಾಗಾರ , ಅಧಿಕಸ್ಯ ಅಧಿಕಫಲಂ ಒಂದು ತಿಂಗಳ ಉಚಿತ ಆರೋಗ್ಯ ಮಾಹಿತಿ ಶಿಭಿರ , ಕೆ – ಲೈವ್ ಜೊತೆಗೆ ನಮಸ್ತೆ ಐಎಂಎ ಯೌಟ್ಯೂಬ್ ಆರೋಗ್ಯ ಮಾಲಿಕೆ ಸರಣಿಗಳು , ವೈದ್ಯರುಗಳಿಗೆ ಹಾಗು ಕುಟುಂಬದವರಿಗೆ ಸಾಂಸ್ಕೃತಿಕ ಸಂಜೆ ಹಾಗು ಚಾರಣ , ಹಿರಿಯ ವೈದ್ಯ ಸದಸ್ಯರಿಗೆ ಮನೆಯಲ್ಲಿ ಭೇಟಿ ಹಾಗು ಕುಶಲೋಪಚಾರ ವಿನಿಮಯ – ಹೀಗೆ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಾರ್ವಜನಿಕ ವಲಯದಲ್ಲಿ ಮನೆಮಾತಾಗಿದ್ದ ಐಎಂಎ ಶಿವಮೊಗ್ಗ, ರಾಷ್ಟ್ರಮಟ್ಟದಲ್ಲೂ ಹೆಗ್ಗಳಿಕೆಗೆ ಪಾತ್ರವಾಗಿ ಅತ್ಯುತ್ತಮ ಶಾಖೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ .

ಐಎಂಎ ರಾಷ್ಟ್ರಾಧ್ಯಕ್ಷರಾದ ಡಾ .ಅಶೋಕನ್ ಅವರಿಂದ , ರಾಜ್ಯಾಧ್ಯಕ್ಷರಾದ ಡಾ . ಶಿವಕುಮಾರ್ ಲಕ್ಕೋಲ್ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಸಮಾರಂಭದಲ್ಲಿ ಅಧ್ಯಕ್ಷರಾದ ಡಾ . ಅರುಣ್ ಎಂ ಎಸ್ ಹಾಗು ಕಾರ್ಯದರ್ಶಿ ಡಾ . ರಕ್ಷಾ ರಾವ್ ಸ್ವೀಕರಿಸಿದರು .

Indian Medical Association ಯಶಸ್ವಿಯಾದ ಅಧಿಕಾರಾವಧಿಗೆ ಕಾರಣೀಭೂತರಾದ ಎಲ್ಲಾ ಆಡಳಿತ ವರ್ಗ , ಕಾರ್ಯಕಾರಿ ಸಮಿತಿ ಸದಸ್ಯರಿಗೆ ಹಾಗು ಸದಸ್ಯರಿಗೆ , ಅಂತೆಯೇ ಎಲ್ಲಾ ಚಟುವಟಿಕೆಗಳನ್ನು ಜನರಿಗೆ ತಲುಪುವಲ್ಲಿ ಸಹಕರಿಸಿದ ಮಾಧ್ಯಮ ಮಿತ್ರರಿಗುಗೂ ಡಾ . ಅರುಣ್ ಹಾಗು ಡಾ . ರಕ್ಷಾ ರಾವ್ ಧನ್ಯವಾಧ ತಿಳಿಸಿರುತ್ತಾರೆ .

ಪ್ರಸ್ತುತ ಅಧ್ಯಕ್ಷರಾದ ಡಾ . ರಮೇಶ್ ಹಾಗು ಕಾರ್ಯದರ್ಶಿಗಳಾದ ಡಾ. ಅರವಿಂದನ್ ಅವರಿಗೆ ಶುಭಹಾರೈಸಿದ್ದಾರೆ .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...