Thursday, March 19, 2026
Thursday, March 19, 2026

S N Channabasappa ವಾಜಪೇಯಿ ಬಡಾವಣೆಯಲ್ಲಿ ರಾಜಯೋಗ ಭವನ ನಿರ್ಮಾಣ ಸಂತಸದ ವಿಷಯ- ಎಸ್.ಎನ್.ಚನ್ನಬಸಪ್ಪ

Date:

S N Channabasappa ಬ್ರಹ್ಮಕುಮಾರಿ ಈಶ್ವರೀಯ ವಿವಿ ಯ ರಾಜಯೋಗ ಭವನದ ಶಂಕುಸ್ಥಾಪನಾ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಡಾ. ಬಸವರಾಜ ರಾಜಋಷಿ ಆಶೀರ್ವಚನ ನೀಡುತ್ತಾ ಶಿವಮೊಗ್ಗ ಶಿವಶರಣರು ಭೂಮಿ. ಸಮಾಜಗಲ್ಲಿ ಸಮಾನತೆ ತರುವಲ್ಲಿ ಶರಣರ ಸಾಧನೆ ಅಪಾರವೆಂದು ನುಡಿದರು. ಜೊತೆಗೆ ನಮಃ ಶಿವಾಯ ಮಹಾಮಂತ್ರದ ಮಹತ್ವವನ್ನು ತಿಳಿಸಿದರು.

ಬ್ರಹ್ಮಾಕುಮಾರಿ ಈ ವಿ ವಿ, ವಾಜಪೇಯಿ ಬಡಾವಣೆಯ ರಾಜಯೋಗ ಭವನದ ಶಂಕುಸ್ಥಾಪನೆಯನ್ನು ನೆರವೇರಸಿದ ನಂತರ ಶಾಸಕ ಚನ್ನಬಸಪ್ಪರವರು ಮಾತನಾಡುತ್ತಾ ಅಟಲ್ ಬಿಹಾರಿ ವಾಜಪೇಯಿ ರವರು ಈ ವಿ ವಿದ್ಯಾಲಯದ ಪ್ರಧಾನಕೇಂದ್ರ ಮೌಂಟ್ಅಬುವಿಗೆ ಆಗಾಗ ಬೇಟಿ ನೀಡಿ ಪರಮಾತ್ಮನ ಪ್ರೇರಣೆಯನ್ನು ಪಡೆಯುತ್ತಿದ್ದರು. ವಾಜಪೇಯಿ ಹೆಸರಿನ ಬಡಾವಣೆಯಲ್ಲಿ ರಾಜಯೋಗ ಭವನ ನಿರ್ಮಾಣವಾಗುತ್ತಿರುವುದು ಸಂತಸವಾಗಿದೆ . ಇದು ಎಲ್ಲರಿಗೂ ಆತ್ಮಶಕ್ತಿ ಕೇಂದ್ರವಾಗಲಿ ಎಂದು ಶುಭ ಹಾರೈಸಿದರು.

ವಿಧಾನ ಪರಿಷತ್ ಶಾಸಕರಾದ ಅರುಣರವರು ಮಾತನಾಡುತ್ತಾ ಜಗತ್ತಿನಲ್ಲಿ ಸಾಕಷ್ಟು ವಿ ವಿ ಗಳಿವೆ. ಆದರೆ ವರ್ತಮಾನದಲ್ಲಿ ಸಮಾಜಕ್ಕೆ ಅತಿ ಅತ್ಯವಶ್ಯವಾಗಿರುವ, ಉತ್ತಮ ಆಚಾರ , ವಿಚಾರ,ಸಂಸ್ಕಾರ ಕಲಿಸುವಂಥಹ ಅತ್ಯುನ್ನತವಾದ ವಿ ವಿ ಕೇಂದ್ರ ಈಶ್ವರೀಯ ವಿ ವಿ ವಾಗಿದೆ ಎಂದರು.

ಚಂದ್ರಶೇಖರಪ್ಪ , ಮಾಜಿ ಶಾಸಕರು ಮಾತನಾಡುತ್ತಾ ಹಣದಿಂದ ಶಾಂತಿ, ನೆಮ್ಮದಿ ಸಿಗುವುದಿಲ್ಲ. ಆದರೆ ಈ ಸಂಸ್ಥೆಯಲ್ಲಿ ಕಲಿಸುವ ರಾಜಯೋಗದಿಂದ ಲಭುಸುವುದು ಎಂದು ತಿಳಿಸಿದರು.

ಬಿಕೆ ಸ್ನೇಹಕ್ಕನವರು ಈಶ್ವರೀಯ ಸಂದೇಶ ನೀಡುತ್ತಾ ಮೌಲ್ಯಾಧಾರಿತ ಸಮಾಜ ನಿರ್ಮಾಣ ಕಾರ್ಯ ಈ ಭವನದ ಮೂಲಕ ಆಗಲಿದೆ ಎಂದು ತಿಳಿಸಿದರು.

ಯೋಗೇಶ್ ಮಾಜಿ ನಗರಪಾಲಿಕೆ ಸದಸ್ಯರು ವರ್ತಮಾನ ಪೀಳಿಗೆಗೆ ಆಧ್ಯಾತ್ಮದ ಅವಶ್ಯಕತೆ ಕುರಿತು ತಿಳಿಸಿದರು. ರೋಟರಿ ಶರತ್ಚಂದ್ರ , ರಘು , ನಿಂಗಪ್ಪ ರವರು ಉಪಸ್ಥಿತರಿದ್ದರು.
ಧನಂಜಯ ಸ್ವಾಗತಿಸಿದರು.
ಮಂಜಪ್ಪನವರು ವಂದಿಸಿದರು.
ಶಿವಮೊಗ್ಗ ಸೇವಾಕೇಂದ್ರದ ಸಂಚಾಲಕಿಯಾದ ರಾಜಯೋಗಿನಿ ಬಿಕೆ ಅನಸೂಯಕ್ಕನವರು ಕಾರ್ಯಕ್ರಮವನ್ನು ಆಯೋಜಿಸಿ , ನಿರೂಪಿಸಿದರು.

S N Channabasappa ಗಾನಾಂತರಂಗ /ಶಶಿಕಲಾ ಹಾಗೂ ತಂಡದವರಿಂದ ಭಕ್ತಿಗೀತೆ ಹಾಗೂ ವೇದ ಬ್ರಹ್ಮ ವಿನಾಯಕ ಬಾಯರಿ ತಂಡದಿಂದ ವೇದಘೋಷ ಜರುಗಿತು.
ಜಿಲ್ಲೆಯ ಸೇವಾಕೇಂದ್ರ ಸಂಚಾಲಕಿ ಸೋದರಿಯರು ಹಾಗೂ ಈಶ್ವರೀಯ ಪರಿವಾರದವರೆಲ್ಲರೂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...