Saturday, September 28, 2024
Saturday, September 28, 2024

Sports News ಸಿಪಿಎಲ್ ಟಿ-20 ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ: ಅಕ್ಷಯ್ ಬ್ಲಾಸ್ಟರ್ ತಂಡ ವಿಜಯಿ

Date:

Sports News ದಿ.ಗೌರಮ್ಮ ಬಸವೇಗೌಡ ಸ್ಮರಣಾರ್ಥ ರಾಣಾ ಸ್ಪೋಟ್ಸ್ ಕ್ಲಬ್ ಆಯೋಜಿಸಿದ್ದ ಸಿಪಿಎಲ್ ಟಿ-20 ಲೆದರ್‌ಬಾಲ್ ಕ್ರಿಕೇಟ್ ಪಂದ್ಯಾವಳಿಯಲ್ಲಿ ಅಕ್ಷಯ್ ಬ್ಲಾಸ್ಟರ್ ತಂಡ ಪ್ರಥಮ ಸ್ಥಾನ ಪಡೆಯುವ ಮೂಲಕ ಜಯಶೀಲರಾದರು.

ಚಿಕ್ಕಮಗಳೂರು ನಗರದ ಜಿಲ್ಲಾ ಆಟದ ಮೈದಾನದಲ್ಲಿ ಕೊನೆಯ ದಿನವಾದ ಶುಕ್ರವಾರ ಪ್ರಥಮ ಸ್ಥಾನಗಳಿದ ಅಕ್ಷಯ್ ಬ್ಲಾಸ್ಟರ್ ತಂಡಕ್ಕೆ ಒಂದು ಲಕ್ಷ ನಗದು ಆಕರ್ಷಕ ಟ್ರೋಫಿ ಹಾಗೂ ದ್ವಿತೀಯ ಸ್ಥಾನಕ್ಕೆ ಗಳಿಸಿದ ವಸಿಷ್ಠ ಈಸ್ಪೋಟ್ಸ್ ತಂಡಕ್ಕೆ ಐವತ್ತು ಸಾವಿರ ನಗದು ಟ್ರೋಫಿಯನ್ನು ವೇದಿಕೆಯ ಗಣ್ಯರು ವಿತರಿಸಿ ಗೌರವಿಸಿದರು.

ಈ ವೇಳೆ ಮಾತನಾಡಿದ ರಾಣಾ ಸ್ಪೋಟ್ಸ್ ಕ್ಲಬ್ ಗೌರವ ಕಾರ್ಯದರ್ಶಿ ಸುದರ್ಶನ್ ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗದಿಂದ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಉತ್ತಮವಾಗಿ ಆಟ ವಾಡಿದ್ದು ಮುಂದಿನ ಪಂದ್ಯಗಳಲ್ಲಿ ಇನ್ನೂ ಹೆಚ್ಚಿನ ಶ್ರಮವಹಿಸಿ ಜಯಶೀಲರಾಗಲಿ ಎಂದು ಹಾರೈಸಿದರು.

ಭಾರತ ದೇಶದ ವಲ್ಡ್ಕಪ್ ನಿರೀಕ್ಷೆಯಲ್ಲಿದ್ದ ನಾವುಗಳು ಪಂದ್ಯದ ಸೋಲು ಬೇಸರ ತಂದಿದೆ. ಆದರೆ ಚಿಕ್ಕಮಗಳೂರಿನ ಸಿಪಿಎಲ್ ನಮ್ಮದೇ ತಂಡಗಳು ವಿಜಯಶಾಲಿಯಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಕ್ರಿಕೇಟ್‌ನಲ್ಲಿ ಭಾಗವಹಿಸಿದ ಪಟುಗಳು ಅಪೈರ್ ಸೇರಿದಂತೆ ಇನ್ನಿತರಿಗೆ ಗೌರವ ತೋರುವ ರೀತಿಯಲ್ಲಿ ನಡೆದುಕೊ ಳ್ಳಬೇಕು ಎಂದು ಕಿವಿಮಾತು ಹೇಳಿದರು.

ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ ಲೆದರ್ ಪಂದ್ಯಾವಳಿಯಲ್ಲಿ ಮೊದಲೆಲ್ಲಾ ಶ್ರೀಮಂತರ ಮಕ್ಕಳು ಮಾತ್ರ ಭಾಗವಹಿಸಲಾಗುತ್ತಿತ್ತು. ಇದೀಗ ಪ್ರತಿಭೆ ಹೊಂದಿರುವ ಎಲ್ಲಾ ಪಟುಗಳು ಭಾಗವಹಿಸಿ ರುವುದು ಅತ್ಯಂತ ಖುಷಿಯ ವಿಚಾರ. ಈ ಮುಖಾಂತರ ಮುಂದಿನ ರಾಜ್ಯ ಹಾಗೂ ರಾಷ್ಟçಮದಲ್ಲಿ ಕ್ರೀಡಾಪಟು ಗಳು ಭಾಗವಹಿಸಿ ಯಶಸ್ಸು ಗಳಿಸಲಿ ಜೊತೆಗೆ ಜಿಲ್ಲಾಡಳಿತ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸ್ಪೋಟ್ಸ್ ಕ್ಲಬ್ ಖಜಾಂಚಿ ಗೋಪಾಲಕೃಷ್ಣ ಮಾತನಾಡಿ ಕೊನೆಯ ಅಂತಿಮ ಹಣಾಹಣಿಯಲ್ಲಿ ವಸಿಷ್ಟ ಈ ಸ್ಪೋಟ್ಸ್ ಬ್ಯಾಟಿಂಗ್ ನಡೆಸಿ ೨೦ ಓವರ್‌ಗಳಲ್ಲಿ 131ರನ್ನು ಕಲೆಹಾಕಿತು. ಇದನ್ನು ಬೆನ್ನತ್ತಿದ ಅಕ್ಷಯ್ ಬ್ಲಾಸ್ಟರ್ ತಂಡ 19.5 ಓವರ್‌ಗಳಲ್ಲಿ 132ರನ್ನು ಗಳಿಸಿ ವಿಜಯಪತಾಕೆ ಮುಡಿಗೇರಿಸಿಕೊಂಡಿತು ಎಂದು ಹೇಳಿದರು.

ಉತ್ತಮ ಬ್ಯಾಟ್ಸ್ಮೆನ್ ಹಾಗೂ ವಿಕೇಟ್ ಕೀಪರ್ ಪ್ರಶಸ್ತಿಯನ್ನು ಅಜರುದ್ದೀನ್, ಫಿಲ್ಡರ್ ಆಗಿ ರಾಜೇಶ್, ಸರಣಿ ಪುರುಷೋತ್ತಮ ಪ್ರಶಸ್ತಿ ಶ್ರೇಯಂಕ್ ಸಾಗರ್ ಪಡೆದುಕೊಂಡರು. ಇದೇ ವೇಳೆ ಕ್ರಿಕೇಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.

Sports News ಈ ಸಂದರ್ಭದಲ್ಲಿ ಸಿಪಿಎಲ್ ಕಮಿಟಿಯ ಎಲ್ಲಾ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shikaripura News ಅಹಿಂದ ಸಂಘಟನೆ ಕರೆ ನೀಡಿದ್ದ ಶಿಕಾರಿಪುರ ಬಂದ್ ಯಶಸ್ವಿ

Shikaripura News ನಾಡಿನ ಅಹಿಂದ ವರ್ಗಕ್ಕೆ ಸೇರಿದ ಜನರ ಹಿತ ಕಾಯುವ...

New Delhi News ಅಪಹರಣಕ್ಕೊಳಗಾಗಿದ್ದ ಬಾಲಕನೇ ಇಂದು ವಕೀಲನಾಗಿ ಅದೇ ಕಿಡ್ನಾಪರ್ಸ್ ಗೆ ಶಿಕ್ಷೆ ಕೊಡಿಸಿದ

New Delhi News ಈ ಹಿಂದೆ 7 ವರ್ಷದವನಾಗಿದ್ದಾಗ ಅಪಹರಣಕ್ಕೊಳಗಾಗಿದ್ದ ಬಾಲಕ...

Kasturi Rangan Comittee Report ಕಸ್ತೂರಿ ರಂಗನ್ ವರದಿ ತಿರಸ್ಕಾರ: ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

Kasturi Rangan Comittee Report ಜುಲೈನಲ್ಲಿ ಕೇಂದ್ರ ಸರ್ಕಾರ 6ನೇ ಕರಡು...

Hosanagara News ಇಸ್ಪೀಟ್ ಅಡ್ಡೆಗೆ ಪೊಲೀಸರ ದಾಳಿ – 11 ಜನರ ಬಂಧನ 17,640 ರೂಪಾಯಿ ವಶ

Hosanagara News ಹೊಸನಗರ ತಾಲ್ಲೂಕು ಮಾರುತೀಪುರ ಗ್ರಾಮ ಪಂಚಾಯಿತಿಯ ಹಳೆಬಾಣಿಗ ರಸ್ತೆಯ...