Shivamogga Rowdy Sheeter Murder ಶಿವಮೊಗ್ಗದಲ್ಲಿ ಮೃತ ಯುವಕ ರೌಡಿಶೀಟರ್, ಗಾಂಧಿಬಜಾರ್ ಪ್ರದೇಶದ ಧರ್ಮರಾಯನ ಕೇರಿ ವಾಸಿಯಾಗಿದ್ದ ಮಲ್ಲೇಶ್ ಎಂದು ತಿಳಿದು ಬಂದಿದೆ.
ಮಲ್ಲೇಶ್ ಎರಡು ವರ್ಷದ ಹಿಂದೆ ತಿರುಪಾಳಯ್ಯನ ಕೇರಿಯ ಯುವತಿಯೊಬ್ಬಳಿಗೆ ಮದುವೆಯಾಗುವಂತೆ ಪೀಡಿಸಿದ್ದನು. ಆಕೆ,
ಮಲ್ಲೇಶ್ ನ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಯುವತಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಮಲ್ಲೇಶ್ ಬೆಂಗಳೂರು ಸೇರಿದ್ದನು.
ಈಗ ದೀಪಾವಳಿ ಹಬ್ಬಕ್ಕೆಂದು ಊರಿಗೆ ಬಂದಿದ್ದನು.
Shivamogga Rowdy Sheeter Murder ಮಲ್ಲೇಶ್ ನ ಚಲನವಲನ ಗಮನಿಸಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆಂದು ತಿಳಿದು ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿಯ ಕಡೆಯವರು ಪ್ರತೀಕಾರ ತೀರಿಸಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.