Sunday, December 7, 2025
Sunday, December 7, 2025

Rotary Shivamogga ಕುಷ್ಠಪೀಡಿತರನ್ನ ಕನಿಷ್ಠರೆಂದೆಣಿಸದೆ ಸೇವೆಗೈಯುತ್ತಿರುವ ಅಪರೂಪದ ಹಣಮಂತರಾಯ

Date:

Rotary Shivamogga ಕಲಬುರಗಿಯಲ್ಲಿ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಕುಷ್ಟರೋಗಿಗಳ ಆಶಾಕಿರಣ ಹಣಮಂತ ದೇವನೂರ ಅವರಿಗೆ ರೋಟರಿ ಶಿವಮೊಗ್ಗ ಪೂರ್ವ ಹಾಗೂ ನಮ್ಮ ಟಿವಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ವಿನೋಬನಗರದ ಅಮ್ಮ ಆರ್ಕೇಡ್‌ನಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಣಮಂತ ದೇವನೂರ ಅವರನ್ನು ಅಭಿನಂದಿಸಲಾಯಿತು. ಸಾರ್ಥಕ ಕೆಲಸ ಮಾಡುತ್ತಿರುವ ದೇವನೂರ ಅವರ ಕಾರ್ಯ ಇತರರಿಗೂ ಸ್ಪೂರ್ತಿಯಾಗಿದೆ.

ಕಲಬುರಗಿಯಲ್ಲಿ ಕುಷ್ಟರೋಗಿಗಳ ಆಪದ್ಭಂದು ಹಣಮಂತ ದೇವನೂರ ಅವರು ಇಪ್ಪತ್ತೆರಡು ವರ್ಷಗಳಿಂದ 174 ಕುಷ್ಟರೋಗಿಗಳಿಗೆ ಸೇವೆ ಮಾಡುತ್ತಾ, ಅವರಿಗೆ ಸರ್ಕಾರದಿಂದ 86 ಆಶ್ರಯ ಮನೆಗಳು, ವೃದ್ಧಾಪ್ಯವೇತನ, ಮಕ್ಕಳಿಗೆ ವಿದ್ಯಾಭ್ಯಾಸ, ರೋಗ ವಿಮುಕ್ತರಿಗೆ ಸ್ವಾವಲಂಬಿ ಜೀವನ ನಡೆಸಲು ಅನುವು, ಸಮುದಾಯ ಭವನ, ಹೀಗೆ ಹತ್ತು ಹಲವಾರು ಸಾಮಾಜಿಕ ಸೇವೆ ಸಲ್ಲಿಸಿದ್ದಾರೆ.

ರಿಕ್ಷಾ ಚಾಲಕ ಹಣಮಂತ ದೇವನೂರ ಅವರು ಕುಷ್ಟ ರೋಗಿಗಳ ಆಶಾಕಿರಣವಾಗಿದ್ದಾರೆ. ಇತ್ತೀಚೆಗಷ್ಟೆ ಶ್ರೀ ದೊಡ್ಡಮ್ಮ ದೇವಿ ಚಾರಿಟಬಲ್ ಟ್ರಸ್ಟ್ ಶಿವಮೊಗ್ಗ ಸಂಸ್ಥೆಯು ಹಣಮಂತ ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ಮತ್ತು ಒಂದು ಲಕ್ಷ ಪ್ರಶಸ್ತಿ ಮೊತ್ತವನ್ನು ನೀಡಿದೆ.

Rotary Shivamogga ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಮತ್ತು ನಮ್ಮ ಟಿವಿ ವತಿಯಿಂದ ಸನ್ಮಾನಿಸಲಾಯಿತು. ಜಿ.ವಿಜಯಕುಮಾರ್ ಅವರು ಎರಡೂ ಸಂಸ್ಥೆಗಳ ಪರವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರ ರಾಜ್, ಶ್ರೀಕಾಂತ್ ಉಪಸ್ಥಿತರಿದ್ದರು.

ಹಣಮಂತ ದೇವನೂರ ಅವರ ಟಿ.ವಿ.ಸಂದರ್ಶನ ನಮ್ಮ ಟಿವಿ ಯಲ್ಲಿ ಪ್ರಸಾರವಾಗುತ್ತದೆ. ಇಂತಹ ಅಪರೂಪದ ಸೇವಾ ಕಾರ್ಯ ಗುರುತಿಸಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಸನ್ಮಾನಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...