Thursday, March 19, 2026
Thursday, March 19, 2026

YB Chandrakaoth ಬರ ಸ್ಥಿತಿ ನಿರ್ವಹಿಸಲು ಕಾಂಗ್ರೆಸ್ ಸರ್ಕಾರ ಸಿದ್ಧ: ಈಶ್ವರಪ್ಪನವರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ- ಜಿಲ್ಲಾ ಕಾಂಗ್ರೆಸ್

Date:

YB Chandrakaoth ರಾಜ್ಯದಲ್ಲಿ ಮಳೆಯ ಕೊರತೆಯಿಂದ ಎದುರಾಬಹುದಾದ ಬರ ಪರಿಸ್ಥಿತಿಯನ್ನು ಕಾಂಗ್ರೇಸ್
ಪಕ್ಷದ ರಾಜ್ಯ ಸರ್ಕಾರ ರೈತರ ಮತ್ತು ಜನರ ಹಿತವನ್ನು ಕಾಪಾಡಲಿದ್ದು, ಬರಗಾಲ ಪರಿಸ್ಥಿತಿ ಉಂಟಾದಲ್ಲಿ
ನಿಭಾವಣೆಯ ಬಗ್ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರಿಂದ ಕಲಿಯುವ ಅಗತ್ಯವಿಲ್ಲವೆಂದು ಜಿಲ್ಲಾ
ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾoತ್ ತಿರುಗೇಟು ನೀಡಿದ್ದಾರೆ.

ರಾಜ್ಯದಲ್ಲಿ ಈ ಹಿಂದೆ ಬಿ.ಜೆ.ಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸತತವಾಗಿ ಮೂರು ವರ್ಷಗಳ
ಕಾಲ ಅತಿವೃಷ್ಷಿ ಸಂಭವಿಸಿತ್ತು. ಅಕ್ಷರಶಹ ಸಾವಿರಾರು ಸಂಖ್ಯೆ ಜನರು ಮನೆ ಮಠ
ಕಳೆದುಕೊಂಡಿದ್ದರು. ಬೆಳೆ ಹಾನಿ ಜೀವ ಹಾನಿಯೂ ಸಂಭವಿಸಿದ್ದರೂ ದೇಶದ ಪ್ರಧಾನಿ ಆದಿಯಾಗಿ
ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ¸ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ, ಅವರ ಸರ್ಕಾರದ
ಸಚಿವರು ನೆರೆ ಹಾವಳಿ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿ ಅತಿವೃಷ್ಷಿಗೆ ಒಳಗಾದ ಜನರನ್ನು
ಸಂಭವಿಸುವ ಕೆಲಸವನ್ನು ಮಾಡಲಿಲ್ಲ ಎನ್ನುವುದನ್ನು ಬಿ.ಜೆ.ಪಿ. ನಾಯಕರು ಮರೆತಂತ್ತಿದೆ ಎಂದು
ವಕ್ತಾರರಾದ ವೈ.ಬಿ.ಚಂದ್ರಕಾoತ್ ಅವರು ಹೇಳಿದ್ದಾರೆ.

ಬರ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು
ರಾಜ್ಯಾದ್ಯಂತ್ಯ ಪ್ರವಾಸ ಮಾಡಿ ಸ್ವತಹ ಅವಲೋಕಿಸಿದ್ದಾರೆ. ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು
ಸಂಗ್ರಹಿಸುವ ಮೂಲಕ ಸರ್ಕಾರ ಮುಂಬರುವ ಎಂತಹ ಪರಿಸ್ಥಿತಿಯನ್ನು ನಿಭಾಯಿಸಲು
ಸಮರೋಪಾದಿಯಲ್ಲಿ ಮುಂದಾಗಿದೆ. ಈ ಮಾಹಿತಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪರಿಗೆ
ದೊರಕಿರುವುದರಿಂದ ರೈತರ ಪರವಾಗಿ ಮೊಸಳೆ ಕಣ್ಣೀರು ಸುರಿಸುವ ನಾಟಕ ಮಾಡಿದ್ದಾರೆಂದು ಅವರು
ಟೀಕಿಸಿದ್ದಾರೆ.

ಯಾರನ್ನೋ ನೋಡಿ ಮಳೆ ಬರುವುದಿಲ್ಲ ಅಥವಾ ಬರದೆ ಇರುವುದಿಲ್ಲ. ಅದು ಪ್ರಕೃತಿಯ
ವೈಚಿತ್ರ ಇದನ್ನು ತಿಳಿಯದೆ ಸದಾ ಮೂಡ ನಂಬಿಕೆ, ಮೌಡ್ಯ ಬಿತ್ತುವ ಕೆ.ಎಸ್.ಈಶ್ವರಪ್ಪ, ಅವರ
ಪಕ್ಷದವರು ತಮಗೆ ಅಧಿಕಾರ ಕೈತಪ್ಪಿದ ಕಾರಣಕ್ಕೆ ಕಾಂಗ್ರೇಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರನ್ನು ಹಿಯಾಳಿಸಲು ತಮ್ಮ ನಾಲಿಗೆ ಚಾಚಿಕೊಡೇ ಇರುವುದು ಅವರಿಗೆ ಶೋಭೆ ತರುವುದಿಲ್ಲ.

ಬಿ.ಜೆ.ಪಿ. ನಾಯಕರ ಇಂತಹ ಮತಿಗೆಟ್ಟ ಧೋರಣೆ ಮತ್ತು ಆಡಳಿತ ವೈಕರಿಯ ನೋಡಿಯೇ ರಾಜ್ಯದಲ್ಲಿ
ಪ್ರಜ್ಜಾವಂತಜನರು ಇವರನ್ನು ಕಳೆದ ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳುಹಿಸಿದ್ದಾರೆ ಎನ್ನುವುದನ್ನು
ಬಿ.ಜೆ.ಪಿ. ನಾಯಕರು ಮತ್ತು ಕೆ.ಎಸ್.ಈಶ್ವರಪ್ಪರವರು ತಿಳಿದುಕೊಂಡರೆ ಒಳ್ಳೆಯದು.

YB Chandrakaoth ಇಲ್ಲದೆ ಹೋದರೆ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇನ್ನೂ ಹೀನಾಯವಾಗಿ ಸೋಲಬೇಕಾದೀತೆಂದು ಜಿಲ್ಲಾ
ವಕ್ತಾರರಾದ ವೈ.ಬಿ.ಚಂದ್ರಕಾoತ್ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...