B.Y.Raghavendra ಹಾಸನ ಮತ್ತು ಮೈಸೂರು ಜಿಲ್ಲೆಗಳ 12 ನೇ ಶತಮಾನದ ಹೊಯ್ಸಳರ ಕಾಲದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ದೇವಸ್ಥಾನಗಳಿಗೆ ಯುನೆಸ್ಕೊ ವಿಶ್ವ ಪಾರಂಪರಿಕ ತಾಣದಲ್ಲಿ ಮನ್ನಣೆ ದೊರೆತಿರುವುದು ಇಡೀ ಕನ್ನಡ ನಾಡಿಗೆ ಸಂತಸದ ಸಂಗತಿಯಾಗಿದೆ. ಇವು ಹೀಗೆ ಮಾನ್ಯತೆ ಪಡೆದ ದೇಶದ 42 ನೇ ಮತ್ತು ಕರ್ನಾಟಕದ ನಾಲ್ಕನೇ ತಾಣಗಳಾಗಿವೆ.
ಹೊಯ್ಸಳರ ಕಾಲದ ಕಲಾವಿದರು, ನೃತ್ಯಗಾರರು, ಸಂಗೀತಗಾರರ ಮೆರವಣಿಗೆಯ ಚಿತ್ತಾರವನ್ನು ಪಾರಂಪರಿಕ ತಾಣವಾಗಿ ಪರಿಗಣಿಸುವಂತೆ ಭಾರತದ ಸಂಸ್ಕೃತಿ ಸಚಿವಾಲಯ ಶಿಫಾರಸು ಮಾಡಿತ್ತು.
B.Y.Raghavendra ಇದರಿಂದಾಗಿ ಕರ್ನಾಟಕದ ಶಿಲ್ಪ ಕಲಾ ವೈಭವ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆ ನಾವೆಲ್ಲಾ ಹೆಮ್ಮೆ ಪಡೋಣ ಎಂದು ಸಂಸದ ಬಿ.ವೈ . ರಾಘವೇಂದ್ರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.